ಶ್ರೀಚಿತ್ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರ ಅಮೂಲ್ಯ ವಿಚಾರಸಂಪತ್ತು !
ಯಾರ ಆಚಾರ ಮತ್ತು ವಿಚಾರಗಳು ಸಾತ್ತ್ವಿಕವಾಗಿರುತ್ತವೆಯೋ, ಅವರ ಮೇಲೆ ಸಾಧನೆಯ ಸಂಸ್ಕಾರವನ್ನು ಬಿಂಬಿಸಲು ಹೆಚ್ಚು ಸಮಯ ಬೇಕಾಗುವುದಿಲ್ಲ. ಈ ರೀತಿ ಕ್ರಮೇಣ ಮತ್ತು ಹಂತಹಂತವಾಗಿ ನೀಡಿದ ಆಧ್ಯಾತ್ಮಿಕ ಶಿಕ್ಷಣದಿಂದ ವಿದ್ಯಾರ್ಥಿಯು ಸಾಧಕನೆಂದು ತಯಾರಾದಾಗ ಫಲನಿಷ್ಪತ್ತಿಯು ಹೆಚ್ಚಿರುತ್ತದೆ. ಒಂದು ಬಾರಿ ಅಂತರ್ಮನದಲ್ಲಿ ಸಾಧನೆಯ ಸಂಸ್ಕಾರವಾಯಿತೆಂದರೆ, ಚಿತ್ತಶುದ್ಧಿಯು ತಾನಾಗಿಯೇ ಪ್ರಾರಂಭವಾಗುತ್ತದೆ ಮತ್ತು ಇದರಿಂದಲೇ ಓರ್ವ ‘ಆದರ್ಶ ಸಾಧಕ ವಿದ್ಯಾರ್ಥಿ’ಯು ತಯಾರಾಗುತ್ತಾನೆ.