
‘ಹಿಂಗಲಾಜಮಾತಾ ದೇವಸ್ಥಾನ’ವು ೫೧ ಶಕ್ತಿಪೀಠಗಳಲ್ಲಿ ಒಂದಾಗಿದ್ದು ಅದು ಪಾಕಿಸ್ತಾನದಲ್ಲಿದೆ. ಈ ಸ್ಥಳದಲ್ಲಿ ಸತಿಯ ಬ್ರಹ್ಮರಂಧ್ರವು (ತಲೆ) ಬಿದ್ದಿತ್ತು. ಅದು ಬಲುಚಿಸ್ತಾನದ ಲಾರಿ ತಾಲೂಕಿನಲ್ಲಿ ಒಂದು ದಟ್ಟವಾದ ಕಣಿವೆಪ್ರದೇಶದಲ್ಲಿದೆ. ಹಿಂಗೋಲ ನದಿಯ ತೀರದಲ್ಲಿ ಮತ್ತು ಮಕರಾನ ಮರುಭೂಮಿಯ ಖೇರಥಾರ ಎಂಬ ಬೆಟ್ಟಗಳಲ್ಲಿ ನೆಲೆಸಿರುವ ಶ್ರೀ ಹಿಂಗಲಾಜಮಾತೆಯ ದೇವಸ್ಥಾನವು ಕೋಟ್ಯಂತರ ಹಿಂದೂಗಳ ಶ್ರದ್ಧಾಸ್ಥಾನವಾಗಿದೆ.
ಶ್ರೀ ಹಿಂಗಲಾಜಮಾತೆಯ ಸ್ವಯಂಭೂ ಶಿಲೆ
ಶ್ರೀ ಹಿಂಗಲಾಜಮಾತೆಯ ದೇವಸ್ಥಾನವು ಒಂದು ನೈಸರ್ಗಿಕ ಗುಹೆಯಲ್ಲಿದೆ. ದೇವಸ್ಥಾನದಲ್ಲಿ ಒಂದು ಮಣ್ಣಿನ ಯಜ್ಞವೇದಿಯಿದೆ. ಈ ದೇವಸ್ಥಾನದಲ್ಲಿ ದೇವಿಯ ಮೂರ್ತಿಯಾಗಿರದೇ ಸ್ವಯಂಭೂ ಶಿಲೆಯಾಗಿದೆ. ಈ ಶಿಲೆಯನ್ನು ಸಿಂಧೂರದಿಂದ ಅಲಂಕರಿಸಲಾಗಿದೆ. ಅದಕ್ಕೆ ಸಂಸ್ಕೃತದಲ್ಲಿ ‘ಹಿಂಗುಲಾ’ ಎನ್ನುತ್ತಾರೆ. ಅಂದಿನಿಂದ ಬಹುಶಃ ಶ್ರೀ ಹಿಂಗಲಾಜಮಾತೆಗೆ ಈ ಹೆಸರು ಲಭಿಸಿರಬಹುದು. ಈ ಸ್ಥಳದಲ್ಲಿ ಶ್ರೀ ಹಿಂಗಲಾಜದೇವಿಗೆ ‘ಹಿಂಗುಲಾದೇವಿ ಎಂದು ಕರೆಯುತ್ತಾರೆ. ಕಳೆದ ೩ ದಶಮಾನಗಳಲ್ಲಿ ಈ ದೇವಸ್ಥಾನವು ತುಂಬಾ ಜನಪ್ರಿಯವಾಗಿದೆ. ಡೋಡಿಯಾ ರಾಜಪೂತರಿಗೆ ದೇವಿಯು ಪ್ರಥಮ ಕುಲದೇವಿಯೆಂದು ಪೂಜನೀಯಳಾಗಿದ್ದಾಳೆ. ಈ ಪರಿಸರದಲ್ಲಿ ಹಿಂಗಲಾಜದೇವಿಯ ದೇವಸ್ಥಾನವಲ್ಲದೇ ಇತರ ಪೂಜಾಸ್ಥಳಗಳಿವೆ. (ಆಧಾರ : ಜಾಲತಾಣ)
| ಜಗತ್ತಿನಲ್ಲಿ ಯಾವಾಗ ತಾಮಸಿಕ, ಅಸುರೀ ಮತ್ತು ಕ್ರೂರ ಜನರು ಪ್ರಬಲರಾಗಿ ಸಾತ್ತ್ವಿಕ ಮತ್ತು ಧರ್ಮನಿಷ್ಠ ಸಜ್ಜನರನ್ನು ಪೀಡಿಸುತ್ತಾರೆಯೋ, ಆಗ ದೇವಿಯು ಧರ್ಮ ಸಂಸ್ಥಾಪನೆಗಾಗಿ ಪುನಃ ಪುನಃ ಅವತಾರ ತಾಳುತ್ತಾಳೆ. ಸರ್ವಸ್ವರೂಪಿ, ವಿಶ್ವಸ್ವಾಮಿನಿ ಮತ್ತು ಸರ್ವಸಾಮರ್ಥ್ಯಶಾಲಿ ಶಕ್ತಿ ಅಂದರೆ ದೇವಿಯು ಎಲ್ಲ ಸಂಕಟಗಳಿಂದ ಮುಕ್ತಗೊಳಿಸುತ್ತಾಳೆ. |
|| ಶ್ರೀ ರಾಜಮಾತಂಗಿ ಮಹಾಯಾಗ ||
ಪ್ರಬಲ ಪ್ರತಾಪ ಸಿಂಗ ಜುದೇವ ಅವರಿಗೆ ಪ್ರತಿಷ್ಠಿತ ‘ಹಿಂದೂ ಕೇಸರಿ’ ಪ್ರಶಸ್ತಿ ನೀಡಿ ಗೌರವ!
ಬಕ್ರೀದ್ ದಿನದಂದು ಮುಗ್ಧ ಪ್ರಾಣಿಗಳ ಬಲಿಯಿಂದ ಬೇಸತ್ತ ಬಿಲಾಲ್ ‘ವಿಶಾಲ್’ ಆದನು!
ಬಂಗಾಳದ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ವಿರುದ್ಧ ಒಂದು ವರ್ಷದ ನಂತರ ಸಿಲಿಗುಡಿ ಸೈಬರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ! : FIR Against Mamata Banerjee
ಧರ್ಮಶಾಸ್ತ್ರ ಮತ್ತು ಅಧ್ಯಾತ್ಮಶಾಸ್ತ್ರ
ಮುಸ್ಲಿಂ ಪ್ರಾಧ್ಯಾಪಕನ ಹಿಂದೂ ಧರ್ಮ ಪ್ರವೇಶದ ಅರ್ಜಿ ತಿರಸ್ಕರಿಸಿದ ಎಡಿಎಂ ವಿರುದ್ಧ ಅಲಹಾಬಾದ್ ಹೈಕೋರ್ಟ್ ಅಸಮಾಧಾನ! – Allahabad High Court