ಕಾಶ್ಮೀರ ಕಣಿವೆಯಲ್ಲಿ ‘ಮುಸ್ಲಿಂ ಜಾಂಬಾಜ್ ಫೋರ್ಸ್’ ಭಯೋತ್ಪಾದಕ ಸಂಘಟನೆ ಮತ್ತೆ ಸಕ್ರಿಯ
ಕಾಶ್ಮೀರದಲ್ಲಿ ಭಯೋತ್ಪಾದಕ ಚಟುವಟಿಕೆಗಳು ನಡೆಯುತ್ತಿರುವುದರಿಂದ ಅಲ್ಲಿಂದ ನಿರ್ವಸಿತರಾದ ಹಿಂದೂಗಳು ಇನ್ನೂ ಮರಳಿಲ್ಲ, ಅಲ್ಲದೇ ಉಳಿದಿರುವ ಹಿಂದೂಗಳಿಗೆ ಇನ್ನೂ ಕೂಡ ಬೆದರಿಕೆಗಳು ಬರುತ್ತಿವೆ.
ಕಾಶ್ಮೀರದಲ್ಲಿ ಭಯೋತ್ಪಾದಕ ಚಟುವಟಿಕೆಗಳು ನಡೆಯುತ್ತಿರುವುದರಿಂದ ಅಲ್ಲಿಂದ ನಿರ್ವಸಿತರಾದ ಹಿಂದೂಗಳು ಇನ್ನೂ ಮರಳಿಲ್ಲ, ಅಲ್ಲದೇ ಉಳಿದಿರುವ ಹಿಂದೂಗಳಿಗೆ ಇನ್ನೂ ಕೂಡ ಬೆದರಿಕೆಗಳು ಬರುತ್ತಿವೆ.
ಬಂಧಿತ ಅಪ್ರಾಪ್ತ ಅಪರಾಧಿಗಳ ಪೈಕಿ ಇಬ್ಬರು ಪಾಕಿಸ್ತಾನಿಗಳಾಗಿದ್ದರೆ, ಅವರನ್ನು ಬಾಲ ಸುಧಾರಣಾ ಕೇಂದ್ರದಲ್ಲಿ ಹೇಗೆ ಇಡುತ್ತಾರೆ? ಇದೇ ಕೈದಿಗಳು ಇತರ ಬಾಲಾಪರಾಧಿಗಳಲ್ಲಿ ಭಾರತವಿರೋಧಿ ಮಾನಸಿಕತೆಯನ್ನು ಬಿತ್ತುವುದಿಲ್ಲ ಎಂಬ ಖಾತರಿ ಏನು?
ಅಮೆರಿಕದ ವ್ಯಾಪಾರ ಪ್ರತಿನಿಧಿ ಕಚೇರಿ ಪ್ರಕಟಿಸಿದ ನಕ್ಷೆಯಲ್ಲಿ ಪಾಕಿಸ್ತಾನ ಆಕ್ರಮಿತ ಕಾಶ್ಮೀರ ಹಾಗೂ ಅಕ್ಸಾಯ್ ಚಿನ್ ಸೇರಿ ಸಂಪೂರ್ಣ ಜಮ್ಮು– ಕಾಶ್ಮೀರವನ್ನು ಭಾರತದ ಭಾಗವೆಂದು ತೋರಿಸಲಾಗಿದೆ.
ಪಾಕಿಸ್ತಾನವು ಪ್ರತಿ ವರ್ಷದಂತೆ ಈ ವರ್ಷವೂ ಫೆಬ್ರವರಿ 5 ರಂದು ವಿವಾದಿತ ‘ಕಾಶ್ಮೀರ ಐಕ್ಯತಾ ದಿನ’ವನ್ನು ಆಚರಿಸಿದೆ. ಪಾಕಿಸ್ತಾನದ ಪ್ರಧಾನ ಮಂತ್ರಿ ಶಹಬಾಜ್ ಶರೀಫ್ ಮತ್ತು ಸೇನಾ ಮುಖ್ಯಸ್ಥ ಆಸಿಮ್ ಮುನೀರ್ ಅವರು ಕಾಶ್ಮೀರ ವಿಷಯಕ್ಕೆ ಸಂಬಂಧಿಸಿದಂತೆ ಭಾರತದ ವಿರುದ್ಧ ಮತ್ತೆ ಆಕ್ಷೇಪಾರ್ಹ ಹೇಳಿಕೆಗಳನ್ನು ನೀಡಿದ್ದಾರೆ.
ಜಮ್ಮು-ಕಾಶ್ಮೀರದ ದೋಡಾ ಜಿಲ್ಲೆಯಲ್ಲಿ ಭಾರತೀಯ ಸೇನೆಯ ವಾಹನವೊಂದು 200 ಅಡಿ ಆಳದ ಕಂದಕಕ್ಕೆ ಉರುಳಿ ಬಿದ್ದ ಪರಿಣಾಮ 10 ಸೈನಿಕರು ಮೃತಪಟ್ಟಿದ್ದು, 11 ಮಂದಿ ಗಾಯಗೊಂಡಿದ್ದಾರೆ. ಈ ವಾಹನದಲ್ಲಿ ಒಟ್ಟು 21 ಸೈನಿಕರಿದ್ದರು. ಗಾಯಗೊಂಡ ಸೈನಿಕರನ್ನು ಉಧಮ್ಪುರದ ಸೇನಾ ಆಸ್ಪತ್ರೆಗೆ ದಾಖಲಿಸಲಾಗಿದೆ.
ಈ ಅಪಘಾತವು ಭದ್ರವಾಹ್-ಚಂಬಾ ಅಂತರರಾಜ್ಯ ರಸ್ತೆಯ ಖನ್ನಿ ಟಾಪ್ ಎಂಬಲ್ಲಿ ಸಂಭವಿಸಿದೆ. ಸೈನಿಕರು ಎತ್ತರದ ಪ್ರದೇಶದಲ್ಲಿರುವ ಚೌಕಿಯ ಕಡೆಗೆ ಹೋಗುತ್ತಿದ್ದಾಗ, ಚಾಲಕನ ನಿಯಂತ್ರಣ ತಪ್ಪಿ ಈ ಅವಘಡ ಸಂಭವಿಸಿದೆ.
ಜಮ್ಮು-ಕಾಶ್ಮೀರದಲ್ಲಿ ಮಸೀದಿ ಮತ್ತು ಮದರಸಾಗಳ ಮಾಹಿತಿ ಸಂಗ್ರಹಕ್ಕೆ ಪಾಕಿಸ್ತಾನ ವಿರೋಧ ವ್ಯಕ್ತಪಡಿಸಿ, ಇದನ್ನು ಧಾರ್ಮಿಕ ಸ್ವಾತಂತ್ರ್ಯದ ಉಲ್ಲಂಘನೆ ಎಂದು ಆರೋಪಿಸಿದೆ.
ಕಾಶ್ಮೀರದಲ್ಲಿ ಜಿಹಾದಿ ಭಯೋತ್ಪಾದಕರಿಗೆ ಸಹಾಯ ಮಾಡುತ್ತಿರುವ ಸರಕಾರಿ ನೌಕರರನ್ನು ಸೇವೆಯಿಂದ ವಜಾಗೊಳಿಸುವುದು ಮತ್ತು ಕಣಿವೆಯ ಮಸೀದಿಗಳ ಮೇಲೆ ಪೊಲೀಸರು ನಡೆಸುತ್ತಿರುವ ಪರಿಶೀಲನೆಯಿಂದಾಗಿ ವಿವಾದ ಉಂಟಾಗಿದೆ.
ಈ ಭಾಗದಲ್ಲಿ ನಿರ್ಮಿಸಲಾಗುತ್ತಿರುವ ರಸ್ತೆ ಕಾಮಗಾರಿಯನ್ನು ತಡೆಯಲು ಭಾರತವು ಮಿಲಿಟರಿ ಕ್ರಮ ಕೈಗೊಳ್ಳುವ ಧೈರ್ಯವನ್ನು ತೋರಿಸುವುದು ಅಗತ್ಯವಾಗಿದೆ!
ಜಮ್ಮು – ಕಾಶ್ಮೀರದ ಸಾಂಬಾ, ಪೂಂಚ್ ಮತ್ತು ರಾಜೌರಿ ಜಿಲ್ಲೆಗಳಲ್ಲಿ ಅಂತರರಾಷ್ಟ್ರೀಯ ಗಡಿ ಮತ್ತು ನಿಯಂತ್ರಣ ರೇಖೆಯ ಬಳಿಯ ಪ್ರದೇಶಗಳಲ್ಲಿ ಜನವರಿ ೧೧ ರಂದು ಸಂಶಯಾಸ್ಪದ ಡ್ರೋನ್ಗಳ ಚಲನೆ ಕಂಡುಬಂದಿದೆ.