ಕೊಲ್ಲಲ್ಪಟ್ಟ ಕ್ರೈಸ್ತ ವ್ಯಕ್ತಿಯ ಸಹೋದರನಿಂದ ರಾಬರ್ಟ್ ವಾದ್ರಾ ಅವರಿಗೆ ಛೀಮಾರಿ !
(ಕಲ್ಮಾ ಎಂದರೆ ಅಲ್ಲಾಹುವನ್ನು ಹೊಗಳುವ ಹೇಳಿಕೆಗಳು)
ನವದೆಹಲಿ – ದಾಳಿ ನಡೆದಾಗ ನನ್ನ ಅತ್ತಿಗೆ ನನ್ನ ಸಹೋದರ ಸುಶೀಲ್ ನಾಥನಿಯೇಲ್ ಜೊತೆಗಿದ್ದರು. ಆಗ ಉಗ್ರರು ನನ್ನ ಸಹೋದರನನ್ನು ಮೊಣಕಾಲೂರಿ ಕುಳಿತು ‘ಕಲ್ಮಾ’ ಹೇಳುವಂತೆ ಕೇಳಿದರು ಮತ್ತು ಅವನ ಧರ್ಮದ ಬಗ್ಗೆ ವಿಚಾರಿಸಿದರು. ನನ್ನ ಸಹೋದರ ತಾನು ಕ್ರೈಸ್ತನೆಂದು ಹೇಳಿದಾಗ, ಭಯೋತ್ಪಾದಕರು ಅವನನ್ನು ಸ್ಥಳದಲ್ಲೇ ಕೊಂದರು. ರಾಬರ್ಟ್ ವಾದ್ರಾ ಅವರ ಹೇಳಿಕೆಯನ್ನು ನಾವು ಒಪ್ಪುವುದಿಲ್ಲ. ಸರಕಾರವು ಸಂಪೂರ್ಣ ಸಹಕಾರ ನೀಡುತ್ತಿದೆ. ಈ ರೀತಿ ಭಯೋತ್ಪಾದಕ ದಾಳಿ ನಡೆಯುತ್ತದೆ ಎಂದು ಸರಕಾರಕ್ಕೆ ತಿಳಿದಿರಲಿಲ್ಲ ಎಂದು ಭಯೋತ್ಪಾದಕರ ಗುಂಡೇಟಿಗೆ ಬಲಿಯಾದ ಸುಶೀಲ್ ನಾಥನಿಯೇಲ್ ಅವರ ಸಹೋದರ ವಿಕಾಸ್ ನಾಥನಿಯೇಲ್ ಅವರು ಸೋನಿಯಾ ಗಾಂಧಿಯವರ ಅಳಿಯ ರಾಬರ್ಟ್ ವಾದ್ರಾ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ್ದಾರೆ. ವಿಕಾಸ್ ಅವರು ಮಧ್ಯಪ್ರದೇಶದ ಇಂದೋರ್ನಲ್ಲಿ ಮಾತನಾಡುತ್ತಿದ್ದರು. ಸುಶೀಲ್ ಅವರನ್ನು ಭಯೋತ್ಪಾದಕರು ಕೊಂದರು. ‘ಸರಕಾರವು ಹಿಂದೂ ಮತ್ತು ಮುಸ್ಲಿಮರ ನಡುವೆ ಭೇದ-ಭಾವ ಮಾಡುತ್ತಿರುವುದರಿಂದ ಭಯೋತ್ಪಾದಕರು ಹಿಂದೂಗಳನ್ನು ಗುರಿಯಾಗಿಸಿದ್ದಾರೆ’ ಎಂದು ವಾದ್ರಾ ಹೇಳಿಕೆ ನೀಡಿದ್ದರು.
ಸಂಪಾದಕೀಯ ನಿಲುವುರಾಬರ್ಟ್ ವಾದ್ರಾ ಈ ಘಟನೆಯ ಬಗ್ಗೆ ಬಾಯಿ ಬಿಡುತ್ತಾರೆಯೇ? ಅಥವಾ ಅವರು ಕಲ್ಮಾ ಹೇಳುತ್ತಾರೆಯೇ? |