ಪಹಲ್ಗಾಮ್ ದಾಳಿಯ ನಂತರ ಪಾಕಿಸ್ತಾನದ ಮಾಜಿ ಹಿಂದೂ ಕ್ರಿಕೆಟಿಗ ದಾನಿಶ್ ಕನೇರಿಯಾ ಅವರಿಂದ ಪಾಕಿಸ್ತಾನಕ್ಕೆ ಛೀಮಾರಿ !
ಕರಾಚಿ (ಪಾಕಿಸ್ತಾನ) – ಪಹಲ್ಗಾಮ್ನಲ್ಲಿ ನಡೆದ ಭಯೋತ್ಪಾದಕ ದಾಳಿಯ ಹಿಂದೆ ಪಾಕಿಸ್ತಾನದ ಕೈವಾಡವಿದೆ ಎಂದು ಪಾಕಿಸ್ತಾನದ ಮಾಜಿ ಹಿಂದೂ ಕ್ರಿಕೆಟಿಗ ದಾನಿಶ್ ಕನೇರಿಯಾ ಅನುಮಾನ ವ್ಯಕ್ತಪಡಿಸಿದ್ದಾರೆ. ‘ಒಂದು ವೇಳೆ ನಿಜವಾಗಿಯೂ ಪಹಲ್ಗಾಮ್ ಭಯೋತ್ಪಾದಕ ದಾಳಿಯಲ್ಲಿ ಪಾಕಿಸ್ಥಾನದ ಕೈವಾಡ ಇಲ್ಲದಿದ್ದರೆ, ಶಹಬಾಜ್ ಷರೀಫ್ ಏಕೆ ಖಂಡಿಸಲಿಲ್ಲ?” ಸೇನೆಗೆ ಇದ್ದಕ್ಕಿದ್ದಂತೆ ಎಚ್ಚರದಿಂದ ಇರುವಂತೆ ಏಕೆ ಹೇಳಿದರು? ಏಕೆಂದರೆ ಅವರಿಗೆ ಸತ್ಯದ ಕಲ್ಪನೆ ಇದೆ. ಅವರಿಗೆ ವಾಸ್ತವ ಏನೆಂದು ತಿಳಿದಿದೆ. ಭಯೋತ್ಪಾದಕರಿಗೆ ಆಶ್ರಯ ನೀಡುತ್ತಿರುವುದಕ್ಕೆ ಮತ್ತು ಭಯೋತ್ಪಾದನೆಯನ್ನು ಪ್ರೋತ್ಸಾಹಿಸುತ್ತಿರುವುದಕ್ಕೆ ಪಾಕಿಸ್ತಾನಕ್ಕೆ ನಾಚಿಕೆ ಆಗಬೇಕು, ಎಂದು ದಾನಿಶ್ ಕನೇರಿಯಾ ಅವರು ‘ಎಕ್ಸ್’ ನಲ್ಲಿ ಪೋಸ್ಟ್ ಮಾಡುವಾಗ ಹೇಳಿದ್ದಾರೆ.