Hindu Professor Released Kalma recitation: ‘ಕಲಮಾ’ ಹೇಳಿದ್ದರಿಂದ ಹಿಂದೂ ಪ್ರಾಧ್ಯಾಪಕರನ್ನು ಭಯೋತ್ಪಾದಕರು ಬಿಟ್ಟರು!

ಪಹಲ್ಗಾಮ್ ನ ಭಯೋತ್ಪಾದಕ ದಾಳಿ

(ಕಲಮಾ ಎಂದರೆ ಅಲ್ಲಾಹನ ಗೌರವವನ್ನು ಕೊಂಡಾಡುವ ಹೇಳಿಕೆಗಳು)

ಶ್ರೀನಗರ (ಜಮ್ಮು-ಕಾಶ್ಮೀರ) – ಪಹಲ್ಗಾಮ್ ನ ಭಯೋತ್ಪಾದಕ ದಾಳಿಯ ಸಮಯದಲ್ಲಿ, ಭಯೋತ್ಪಾದಕರು ಹಿಂದೂಗಳನ್ನು ಅವರ ಹೆಸರುಗಳನ್ನು ಕೇಳಿ ಮತ್ತು ‘ಕಲಮಾ’ ಹೇಳುವಂತೆ ಹೇಳಿ ಕೊಂದರು. ಈ ದಾಳಿಯ ಸಮಯದಲ್ಲಿ ಅಲ್ಲಿ ಉಪಸ್ಥಿತರಿದ್ದ ಆಸ್ಸಾಂನ ‘ಆಸ್ಸಾಂ ವಿಶ್ವವಿದ್ಯಾಲಯ’ದ ಪ್ರಾಧ್ಯಾಪಕ ದೇಬಾಶಿಷ್ ಭಟ್ಟಾಚಾರ್ಯ ಅವರು ‘ಕಲಮಾ’ ಹೇಳಿದ್ದರಿಂದ ಅವರನ್ನು ಭಯೋತ್ಪಾದಕರು ಕೊಲ್ಲಲಿಲ್ಲ. ಭಟ್ಟಾಚಾರ್ಯ ಅವರು ಈ ಘಟನೆಯ ಬಗ್ಗೆ ಹೇಳುತ್ತಾ, ನಾವು ಒಂದು ಮರದ ಕೆಳಗೆ ಕುಳಿತಿದ್ದಾಗ, ಕೆಲವರು ‘ಕಲಮಾ’ ಹೇಳುತ್ತಿರುವುದನ್ನು ಕೇಳಿದೆವು. ನಾನು ತಕ್ಷಣ ಅವರೊಂದಿಗೆ ಹೋಗಿ ಕುಳಿತೆ. ಅಷ್ಟರಲ್ಲಿ ಒಬ್ಬ ಭಯೋತ್ಪಾದಕ ನನ್ನ ಬಳಿ ಬಂದು ನನ್ನನ್ನು ನೋಡಿ ‘ನೀನು ಏನು ಮಾಡುತ್ತಿದ್ದೀಯ?’ ಎಂದು ಕೇಳಿದ. ನಾನು ಭಯದಿಂದ ಜೋರಾಗಿ ಕಲಮಾ ಹೇಳಲು ಪ್ರಾರಂಭಿಸಿದೆ. ಆಗ ಅವನು ಮತ್ತೆ ‘ನೀನು ಏನು ಹೇಳುತ್ತಿದ್ದೀಯ?’ ಎಂದು ಕೇಳಿದ. ನಾನು ಕೇವಲ ‘ಲಾ ಇಲಾಹ ಇಲ್ಲಲ್ಲಾಹ್..’ (ಅಲ್ಲಾಹನ ಹೊರತು ಬೇರೆ ದೇವರು ಇಲ್ಲ.) ಎಂದು ಹೇಳಲು ಪ್ರಾರಂಭಿಸಿದೆ. ಕೆಲವು ಕಾರಣಗಳಿಂದ ಅವನು ಅಲ್ಲಿಂದ ಹೊರಟುಹೋದನು. ಅವರು ನನಗೆ ನೇರವಾಗಿ ಕಲಮಾ ಹೇಳಲು ಹೇಳಲಿಲ್ಲ; ಆದರೆ ಇತರರು ಹಾಗೆ ಮಾಡುವುದನ್ನು ನೋಡಿ ನಾನು ಅವರೊಂದಿಗೆ ಕುಳಿತೆ, ಎಂದು ಹೇಳಿದರು.

ಸಂಪಾದಕೀಯ ನಿಲುವು

ಕಾಶ್ಮೀರದಲ್ಲಿ ಜಿಹಾದಿ ಭಯೋತ್ಪಾದಕರು ಹಿಂದೂಗಳನ್ನು ಕಲಮಾ ಹೇಳುವಂತೆ ಒತ್ತಾಯಿಸಿದರು. ಅದೇ ಪರಿಸ್ಥಿತಿ ಇಂದು ಅಥವಾ ನಾಳೆ ದೇಶಾದ್ಯಂತ ಬರಲಿದೆ. ಪಶ್ಚಿಮ ಬಂಗಾಳದಲ್ಲಿ ಇದು ಶೀಘ್ರದಲ್ಲೇ ಕಂಡುಬರಲಿದೆ. ಈ ಪರಿಸ್ಥಿತಿಯನ್ನು ನೋಡಿದ ನಂತರವಾದರೂ ದೇಶದ ಜಾತ್ಯತೀತವಾದಿಗಳು, ಸರ್ವಧರ್ಮ ಸಮಭಾವದವರು, ಸಮಾಜವಾದಿಗಳು ಮತ್ತು ಗಾಂಧಿವಾದಿ ಹಿಂದೂಗಳು ಎಚ್ಚರಗೊಳ್ಳುತ್ತಾರೆಯೇ?, ಎಂಬುದು ಪ್ರಶ್ನೆಯಾಗಿದೆ!