Fatwa Against Terrorist : ಯಾವುದೇ ಮೃತ ಭಯೋತ್ಪಾದಕನಿಗೆ ಸ್ಮಶಾನದಲ್ಲಿ ಜಾಗ ಸಿಗುವುದಿಲ್ಲ ಮತ್ತು ಯಾವುದೇ ಇಮಾಮ್ ಅವನ ಅಂತ್ಯಕ್ರಿಯೆ ನೆರವೇರಿಸುವುದಿಲ್ಲ!

ಆಲ್ ಇಂಡಿಯಾ ಇಮಾಮ್ ಆರ್ಗನೈಸೇಷನ್’ನಿಂದ ರಾಷ್ಟ್ರಪ್ರೇಮಿ ಫತ್ವಾ

ಅಖಿಲ ಭಾರತ ಇಮಾಮ್ ಸಂಘಟನೆಯ ಮುಖ್ಯಸ್ಥ ಡಾ. ಇಮಾಮ್ ಉಮರ್ ಅಹ್ಮದ್ ಇಲ್ಯಾಸಿ

ನವದೆಹಲಿ – ದೇಶದಲ್ಲಿ ಯಾರೇ ಭಯೋತ್ಪಾದಕನು ಸತ್ತರೆ, ಯಾವುದೇ ಇಮಾಮ್ (ಮಸೀದಿಯಲ್ಲಿ ಪ್ರಾರ್ಥನೆ ನೆರವೇರಿಸುವವರು) ಅಥವಾ ಖಾಜಿ (ಇಸ್ಲಾಮಿ ಕಾನೂನು ತಜ್ಞ ಮತ್ತು ನ್ಯಾಯಾಧೀಶ) ಅವನ ಅಂತ್ಯಕ್ರಿಯೆಯ ನೇತೃತ್ವ ವಹಿಸುವುದಿಲ್ಲ. ಅವನಿಗೆ ದೇಶದ ಯಾವುದೇ ಸ್ಮಶಾನದಲ್ಲಿಯೂ ಜಾಗ ನೀಡಲಾಗುವುದಿಲ್ಲ ಎಂದು ಆಲ್ ಇಂಡಿಯಾ ಇಮಾಮ್ ಆರ್ಗನೈಸೇಷನ್‌ನ ಮುಖ್ಯಸ್ಥ ಡಾ. ಇಮಾಮ್ ಉಮರ್ ಅಹ್ಮದ್ ಇಲಿಯಾಸಿ ಅವರು ಫತ್ವಾ ಹೊರಡಿಸಿದ್ದಾರೆ.

ದೇಶದ ಐದುವರೆ ಲಕ್ಷ ಮಸೀದಿಗಳಿಂದ ಮೃತರಿಗೆ ಶ್ರದ್ಧಾಂಜಲಿ!

ಡಾ. ಇಮಾಮ ಉಮರ್ ಅಹ್ಮದ್ ಇಲಿಯಾಸಿ ಅವರು ಪಹಲ್ಗಾಮ್ ನ ಭಯೋತ್ಪಾದಕ ದಾಳಿಯನ್ನು ಖಂಡಿಸಿದರು. ಇಸ್ಲಾಂ ಧರ್ಮದ ಮುಖಂಡರು ಇಮಾಮ್ ಹೌಸ್ ನಲ್ಲಿ ಮೃತರಿಗೆ ಶ್ರದ್ಧಾಂಜಲಿ ಸಲ್ಲಿಸಿದರು. ಅವರು ಮಾತನಾಡಿ, ಭಯೋತ್ಪಾದನೆಗೆ ಯಾವುದೇ ಧರ್ಮವಿಲ್ಲ. ಧರ್ಮ ಅಥವಾ ಜಾತಿ ಏನೇ ಇರಲಿ, ಅವನು ಕೇವಲ ಭಯೋತ್ಪಾದಕ. 370 ನೇ ವಿಧಿ ರದ್ದಾದ ನಂತರ ಕಾಶ್ಮೀರವು ಅಭಿವೃದ್ಧಿ ಹೊಂದುತ್ತಿರುವ ರೀತಿಯನ್ನು ನೆರೆಯ ದೇಶ ಮತ್ತು ಭಯೋತ್ಪಾದಕ ಸಂಘಟನೆಗಳಿಗೆ ಸಹಿಸಲಾಗುತ್ತಿಲ್ಲ. ದೇಶಾದ್ಯಂತದ ಐದುವರೆ ಲಕ್ಷ ಮಸೀದಿಗಳಲ್ಲಿ ಮೃತರಿಗೆ ಶ್ರದ್ಧಾಂಜಲಿ ಸಲ್ಲಿಸಲಾಗುವುದು, ಎಂದು ಹೇಳಿದರು.

ಸಂಪಾದಕೀಯ ನಿಲುವು

  • ಈ ಫತ್ವಾಕ್ಕಾಗಿ ಆಲ್ ಇಂಡಿಯಾ ಇಮಾಮ್ ಆರ್ಗನೈಸೇಷನ್‌ಗೆ ಅಭಿನಂದನೆಗಳು! ಇಂತಹ ಫತ್ವಾ ಹೊರಡಿಸಲು 35 ವರ್ಷಗಳು ಬೇಕಾಯಿತು ಎಂಬುದನ್ನು ಮರೆಯುವಂತಿಲ್ಲ!
  • ಈ ಫತ್ವಾ ದೇಶಾದ್ಯಂತ ಪಾಲಿಸಲಾಗುತ್ತಿದೆಯೇ?, ಎಂಬುದರ ಕಡೆಗೆ ಈ ಸಂಘಟನೆಯು ಗಮನ ಹರಿಸಬೇಕು. ಹಾಗೆಯೇ ಯಾವುದೇ ಮಸೀದಿಯಿಂದ ಹಿಂದೂಗಳ ಧಾರ್ಮಿಕ ಮೆರವಣಿಗೆಗಳ ಮೇಲೆ ದಾಳಿ ನಡೆಯದಂತೆ ಪ್ರಯತ್ನಿಸಬೇಕು!