Gautam Gambhir Death Threat : ಕ್ರಿಕೆಟಿಗ ಗೌತಮ್ ಗಂಭೀರ್‌ಗೆ ‘ಇಸ್ಲಾಮಿಕ್ ಸ್ಟೇಟ್’ನಿಂದ ಕೊಲೆ ಬೆದರಿಕೆ!

ನವದೆಹಲಿ – ಭಾರತೀಯ ಕ್ರಿಕೆಟ್ ತಂಡದ ಮುಖ್ಯ ತರಬೇತುದಾರ ಮತ್ತು ಭಾಜಪದ ಮಾಜಿ ಸಂಸದ ಗೌತಮ್ ಗಂಭೀರ್ ಅವರಿಗೆ ‘ಇಸ್ಲಾಮಿಕ್ ಸ್ಟೇಟ್ ಕಾಶ್ಮೀರ’ ಈ ಭಯೋತ್ಪಾದಕ ಸಂಘಟನೆಯಿಂದ ಕೊಲೆ ಬೆದರಿಕೆ ಬಂದಿದೆ. ಈ ಬೆದರಿಕೆಯ ನಂತರ ಗೌತಮ್ ಗಂಭೀರ್ ಅವರು ದೆಹಲಿ ಪೊಲೀಸರನ್ನು ಸಂಪರ್ಕಿಸಿ ತಕ್ಷಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ. ಏಪ್ರಿಲ್ ೨೨ ರಂದು ಗೌತಮ್ ಗಂಭೀರ್ ಅವರಿಗೆ ಬೆದರಿಕೆ ಇಮೇಲ್ ಗಳು ಬಂದಿವೆ.

ಗೌತಮ್ ಗಂಭೀರ್ ಅವರು ಏಪ್ರಿಲ್ ೨೨ ರಂದು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಪ್ರವಾಸಿಗರ ಮೇಲೆ ನಡೆದ ಭಯೋತ್ಪಾದಕ ದಾಳಿಯನ್ನು ಖಂಡಿಸಿದ್ದರು. ಗಂಭೀರ್ ಅವರು ತಮ್ಮ ಸಂದೇಶದಲ್ಲಿ, ‘ಮೃತರ ಕುಟುಂಬಕ್ಕೆ ನನ್ನ ಪ್ರಾರ್ಥನೆಗಳು. ಈ ದಾಳಿಗೆ ಕಾರಣರಾದವರು ಬೆಲೆ ತೆತ್ತಬೇಕಾಗುತ್ತದೆ. ಭಾರತವು ದಾಳಿ ಮಾಡುತ್ತದೆ’ ಎಂದು ಬರೆದಿದ್ದರು.

ಗೌತಮ್ ಗಂಭೀರ್ ಅವರಲ್ಲದೆ, ಇತರ ಅನೇಕ ಕ್ರಿಕೆಟಿಗರು ಸಹ ಪಹಲ್ಗಾಮ್ ಭಯೋತ್ಪಾದಕ ದಾಳಿಯನ್ನು ಖಂಡಿಸಿದ್ದಾರೆ. ಇದರಲ್ಲಿ ಸಚಿನ್ ತೆಂಡೂಲ್ಕರ್, ವಿರಾಟ್ ಕೊಹ್ಲಿ, ಸೂರ್ಯಕುಮಾರ ಯಾದವ್ ಈ ಕ್ರಿಕೆಟಿಗರು ಸೇರಿದ್ದಾರೆ. ಮಾಜಿ ಭಾರತೀಯ ಕ್ರಿಕೆಟಿಗ ಶ್ರೀವತ್ಸ ಗೋಸ್ವಾಮಿ ಅವರು ಪಾಕಿಸ್ತಾನದೊಂದಿಗಿನ ಕ್ರೀಡಾ ಸಂಬಂಧವನ್ನು ಸಂಪೂರ್ಣವಾಗಿ ಕೊನೆಗೊಳಿಸುವಂತೆ ಒತ್ತಾಯಿಸಿದ್ದಾರೆ.

ಸಂಪಾದಕೀಯ ನಿಲುವು

ಭಾರತದಲ್ಲಿ ಸಾಮಾನ್ಯ ಹಿಂದೂ ನಾಗರಿಕರು ಸುರಕ್ಷಿತವಾಗಿಲ್ಲ. ಅದರ ಜೊತೆಗೆ ಕ್ರಿಕೆಟಿಗರು ಮತ್ತು ಇತರ ಗಣ್ಯ ವ್ಯಕ್ತಿಗಳೂ ಭಯೋತ್ಪಾದನೆಯ ನೆರಳಿನಲ್ಲಿ ಬದುಕುತ್ತಿದ್ದಾರೆ ಎಂಬುದನ್ನು ಗಮನಿಸಿ!