ಭಾರತೀಯ ಸೇನ್ಯದ ನಿವೃತ್ತ ಲೆಫ್ಟಿನೆಂಟ್ ಜನರಲ್ ಡಿ.ಪಿ. ಪಾಂಡೆ ಅವರ ಸಲಹೆ
ನವದೆಹಲಿ – ಸರ್ವೋಚ್ಚ ನ್ಯಾಯಾಲಯವು ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದ ವಿಷಯಗಳಲ್ಲಿ ಅನೇಕ ಬಾರಿ ಹಸ್ತಕ್ಷೇಪ ಮಾಡಿದೆ, ಇದರಿಂದ ಸರಕಾರ ಮತ್ತು ಸೇನ್ಯದಿಂದ ತೆಗೆದುಕೊಳ್ಳಲಾದ ನಿರ್ಧಾರಗಳಲ್ಲಿ ವಿಳಂಬವಾಗುತ್ತಿದೆ. ಈ ರೀತಿಯ ನ್ಯಾಯಾಂಗದ ಹಸ್ತಕ್ಷೇಪದಿಂದ ಭಯೋತ್ಪಾದನೆ ವಿರುದ್ಧ ಹೋರಾಡುವ ಕ್ಷಮತೆಯ ಮೇಲೆ ಪರಿಣಾಮ ಬೀರುತ್ತದೆ. ಆದ್ದರಿಂದ, ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶರು ಕಾಶ್ಮೀರದಲ್ಲಿ ಭದ್ರತಾ ಪಡೆಗಳು ಯಾವ ಪರಿಸ್ಥಿತಿಯಲ್ಲಿ ಕಾರ್ಯನಿರ್ವಹಿಸುತ್ತವೆ ಎಂಬುದನ್ನು ಖುದ್ದಾಗಿ ಹೋಗಿ ನೋಡಬೇಕು. ಭಯೋತ್ಪಾದನೆಯ ನೆಲದ ಮೇಲೆ ಯಾವ ಪರಿಣಾಮ ಬೀರುತ್ತಿದೆ ಎಂಬುದನ್ನೂ ನೋಡಬೇಕು ಎಂದು ಭಾರತೀಯ ಸೇನ್ಯದ ನಿವೃತ್ತ ಲೆಫ್ಟಿನೆಂಟ್ ಜನರಲ್ ಡಿ.ಪಿ. ಪಾಂಡೆ ಅವರು ಸರ್ವೋಚ್ಚ ನ್ಯಾಯಾಲಯಕ್ಕೆ ಸಲಹೆ ನೀಡಿದ್ದಾರೆ. ಅವರು ಎಎನ್ಐ ಸುದ್ದಿ ಸಂಸ್ಥೆಯ ಪಾಡ್ಕಾಸ್ಟ್ನಲ್ಲಿ ಮಾತನಾಡುತ್ತಿದ್ದರು.
🇮🇳 Retd Lt Gen D.P. Pandey urges Supreme Court judges to visit Kashmir — see firsthand what our forces endure.
Says judicial delays are hampering the fight against terror.
“If that money was spent on Bihar, it would’ve leapt forward.”#Pahalgamattackpic.twitter.com/AKGihwuJ9M
— Sanatan Prabhat (@SanatanPrabhat) April 24, 2025
ಡಿ.ಪಿ. ಪಾಂಡೆ ಅವರು ಮಂಡಿಸಿದ ಅಂಶಗಳು
೧. ಕಾಶ್ಮೀರವು ನ್ಯಾಯಾಲಯದ ಕೊಠಡಿಯಲ್ಲ, ಅಲ್ಲಿ ಎಲ್ಲವನ್ನೂ ತರ್ಕ ಮತ್ತು ನಿಯಮಗಳಿಂದ ನಿರ್ಧರಿಸಲಾಗುತ್ತದೆ. ಅಲ್ಲಿ ಪ್ರತಿ ಕ್ಷಣವೂ ಜೀವಕ್ಕೆ ಅಪಾಯವಿರುತ್ತದೆ. ಅಲ್ಲಿಗೆ ಹೋಗಿ ಭಯೋತ್ಪಾದಕರ ಅಮಾನವೀಯತೆ ಎಷ್ಟರ ಮಟ್ಟಿಗೆ ತಲುಪಿದೆ ಎಂದು ನೋಡಿ, ಆಗ ಮಾತ್ರ ನ್ಯಾಯಾಲಯಕ್ಕೆ ದೇಶದ ಭದ್ರತಾ ನೀತಿಗಳ ತಿಳುವಳಿಕೆ ಬರುತ್ತದೆ.
೨. ಸರ್ವೋಚ್ಚ ನ್ಯಾಯಾಲಯವು ಕೆಲವೊಮ್ಮೆ ಭಯೋತ್ಪಾದನೆಯನ್ನು ಎದುರಿಸಲು ನೇರವಾಗಿ ಅಗತ್ಯವಿರುವ ನಿರ್ಧಾರಗಳನ್ನು ತಡೆಹಿಡಿದಿದೆ ಅಥವಾ ವಿಳಂಬ ಮಾಡಿದೆ. ಸರಕಾರ ಮತ್ತು ಸೈನ್ಯಕ್ಕೆ ರಾಷ್ಟ್ರೀಯ ಭದ್ರತೆಯ ವಿಷಯಗಳ ಮೇಲೆ ಮುಕ್ತವಾಗಿ ಮತ್ತು ಪಾರದರ್ಶಕವಾಗಿ ನಿರ್ಧಾರಗಳನ್ನು ತೆಗೆದುಕೊಳ್ಳಲು ಅನುಮತಿ ನೀಡಬೇಕು.
೩. ರಾಜಕೀಯ ಅಥವಾ ಕಾನೂನು ತೊಡಕುಗಳಲ್ಲಿ ಸಿಲುಕಿಕೊಳ್ಳದೆ ಭಯೋತ್ಪಾದನೆಯನ್ನು ನಿರ್ನಾಮ ಮಾಡಲು ಒಗ್ಗೂಡುವ ಸಮಯ ಇದೀಗ ಬಂದಿದೆ.
ಕಾಶ್ಮೀರದ ಬದಲು ಬಿಹಾರದಲ್ಲಿ ಹಣ ಖರ್ಚು ಮಾಡಿದ್ದರೆ, ರಾಜ್ಯವು ಮುಂದೆ ಹೋಗುತ್ತಿತ್ತು! ಇಂದು ಕಾಶ್ಮೀರ ಹೇಗಿದೆಯೋ ಹಾಗೆ ಮಾಡಲು ಸರಕಾರವು ಬಹಳಷ್ಟು ಖರ್ಚು ಮಾಡಿದೆ. ಅಲ್ಲಿನ ಜನರಿಗೆ ಶಿಕ್ಷಣ ಮತ್ತು ಆರೋಗ್ಯ ಸೌಲಭ್ಯಗಳನ್ನು ಒದಗಿಸಲಾಗುತ್ತಿತ್ತು. ಒಂದು ವೇಳೆ ಬಿಹಾರದಲ್ಲಿ ಅಷ್ಟು ಹಣವನ್ನು ಹೂಡಿಕೆ ಮಾಡಿದ್ದರೆ, ಇಂದು ಆ ರಾಜ್ಯ ಎಲ್ಲಿಗೋ ತಲುಪಿರುತ್ತಿತ್ತು, ಎಂದು ಹೇಳಿದರು.