ಪೊಲೀಸರಿಗೆ ಛೀಮಾರಿ ಹಾಕಿದ ನ್ಯಾಯಾಲಯ
ನವದೆಹಲಿ – ಮಹಿಳೆಯೊಬ್ಬರ ಕೊಲೆ ಪ್ರಕರಣದಲ್ಲಿ 2018 ರಿಂದ ಅಂದರೆ 6 ವರ್ಷಗಳ ಕಾಲ ಜೈಲಿನಲ್ಲಿದ್ದ ಮನಜೀತ್ ಕೆರಕೆಟ್ಟಾ ಎಂಬವರಿಗೆ ದೆಹಲಿ ಉಚ್ಚನ್ಯಾಯಾಲಯವು ಜಾಮೀನು ಮಂಜೂರು ಮಾಡಿದೆ. ಯಾವ ಮಹಿಳೆಯ ಕೊಲೆಗಾಗಿ ಮನಜೀತ್ ಅವರನ್ನು ಜೈಲಿಗೆ ಕಳುಹಿಸಲಾಗಿತ್ತೋ ಆ ಮಹಿಳೆ ಸೋನಿ ಉರ್ಫ್ ಛೋಟಿ ಜೀವಂತವಾಗಿ ಪತ್ತೆಯಾಗಿದ್ದಾಳೆ. ಆದರೆ ಪತ್ತೆಯಾಗಿದ್ದ ಮಹಿಳೆಯ ಮೃತದೇಹದ ಗುರುತು ಇನ್ನೂ ತಿಳಿದಿಲ್ಲ. ಮನಜೀತ್ ಅವರ ಜಾಮೀನಿಗೆ ಇತರ ಕಕ್ಷಿದಾರರು ವಿರೋಧ ವ್ಯಕ್ತಪಡಿಸಿದರು. ಆಗ ನ್ಯಾಯಾಲಯವು ‘ಮೃತ ಮಹಿಳೆಯ ಗುರುತು ಪತ್ತೆಯಾಗಿಲ್ಲ; ಆದ್ದರಿಂದ ಆರೋಪಿಯನ್ನು ಸ್ವಾತಂತ್ರ್ಯದಿಂದ ವಂಚಿತಗೊಳಿಸಲು ಸಾಧ್ಯವಿಲ್ಲ’ ಎಂದು ಹೇಳಿ ಆರೋಪಿಯನ್ನು ತಕ್ಷಣ ಜಾಮೀನಿನ ಮೇಲೆ ಬಿಡುಗಡೆ ಮಾಡುವಂತೆ ಆದೇಶಿಸಿತು. ಸೋನಿಯೊಂದಿಗೆ ಮನಜೀತ್ ಕೊನೆಯ ಬಾರಿಗೆ ಕಾಣಿಸಿಕೊಂಡಿದ್ದರಿಂದ ಪೊಲೀಸರು ಮನಜೀತ್ ಅವರನ್ನು ಬಂಧಿಸಿದ್ದರು.
ನ್ಯಾಯಾಲಯದಿಂದ ಪೊಲೀಸರಿಗೆ ಛೀಮಾರಿ !
ಜಾಮೀನು ಮಂಜೂರು ಮಾಡುವಾಗ ನ್ಯಾಯಮೂರ್ತಿ ಕಠಪಾಲಿಯಾ ಮಾತನಾಡಿ, ‘‘ಈ ಪ್ರಕರಣದ ತನಿಖೆಯು ನ್ಯಾಯಾಲಯದ ವಿವೇಚನೆಗೆ ಧಕ್ಕೆ ತಂದಿದೆ. ಮೃತ ಮಹಿಳೆಯ ಗುರುತು ಇನ್ನೂ ಪತ್ತೆಯಾಗಿಲ್ಲ’’ ಎಂದರು. ನ್ಯಾಯಾಲಯವು ಈ ಪ್ರಕರಣದಲ್ಲಿ ನಿರ್ಲಕ್ಷ್ಯ ತೋರಿದ ಪೊಲೀಸರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿತು. ತನಿಖೆಯ ಮೇಲ್ವಿಚಾರಣೆ ಕೇವಲ ತನಿಖೆ ನಡೆಸುವ ಪೊಲೀಸರ ಜವಾಬ್ದಾರಿಯಲ್ಲ, ಹಿರಿಯ ಅಧಿಕಾರಿಗಳೂ ಇದಕ್ಕೆ ಹೊಣೆಗಾರರಾಗಿದ್ದಾರೆ; ಆದರೆ ಅವರು ಕಠಿಣ ಪರಿಶ್ರಮ ಪಟ್ಟಂತೆ ಕಾಣುತ್ತಿಲ್ಲ ಎಂದು ನ್ಯಾಯಾಲಯ ಖಾರವಾಗಿ ಹೇಳಿತು.
ಸಂಪಾದಕೀಯ ನಿಲುವು
|