ಮುಂಬಯಿ – ಉರಿ, ಪಠಾಣಕೋಟ, ಪುಲ್ವಾಮಾ ಮುಂತಾದ ಸ್ಥಳಗಳಲ್ಲಿ ನಡೆದ ಭಯೋತ್ಪಾದಕ ದಾಳಿಗಳಿಗೆ ತಕ್ಕ ಪ್ರತ್ಯುತ್ತರ ನೀಡಿದ ನಂತರವೂ ಇಂತಹ ದಾಳಿಗಳು ನಿಲ್ಲಲು ಸಿದ್ಧವಿಲ್ಲ. ಇದು ಕಾಶ್ಮೀರದ ಪಹಲಗಾಮನಲ್ಲಿ ನಡೆದ ಭೀಕರ ಭಯೋತ್ಪಾದಕ ದಾಳಿಯಿಂದ ಮತ್ತೊಮ್ಮೆ ಸ್ಪಷ್ಟವಾಗಿದೆ. ಇಲ್ಲಿ ಭಯೋತ್ಪಾದಕರು ಭಾರತೀಯ ಪ್ರವಾಸಿಗರ ಧರ್ಮವನ್ನು ಕೇಳಿ 28 ಹಿಂದೂಗಳ ನಿರ್ದಯ ಹತ್ಯೆ ಮಾಡಿದ್ದಾರೆ. ಇದರಲ್ಲಿ ಒಬ್ಬ ನವವಿವಾಹಿತೆಯ ಎದುರಿನಲ್ಲಿಯೇ ಆಕೆಯ ಪತಿಯನ್ನು ಕೊಲ್ಲಲಾಗಿದೆ. ಈ ಘಟನೆಯು ಭಯೋತ್ಪಾದಕರ ಅಮಾನವೀಯತೆ ಮಾತ್ರವಲ್ಲದೆ, ಭಾರತದ ಸಾರ್ವಭೌಮತೆ ಮತ್ತು ಹಿಂದೂ ಸಮಾಜದ ಮೇಲಿನ ನೇರ ಆಕ್ರಮಣವಾಗಿದೆ.
ಈ ಜಿಹಾದಿ ದಾಳಿಯು ಕಾಶ್ಮೀರಿ ಹಿಂದೂಗಳ ನರಮೇಧದ ಮುಂದಿನ ಭಾಗವಾಗಿದೆ. ಇದನ್ನು ಕೇವಲ ಖಂಡಿಸದೆ, ಭಾರತ ಸರಕಾರವು ಜಿಹಾದಿ ಭಯೋತ್ಪಾದಕರು ಮತ್ತು ಅವರ ಭಾರತೀಯ ಕೈಗೊಂಬೆಗಳಿಗೆ ಜನ್ಮಕ್ಕೆ ಪಾಠವಾಗುವಂತಹ ಕಠೋರ ಮಿಲಿಟರಿ ಕ್ರಮಕೈಗೊಳ್ಳಬೇಕು ಎಂದು ಹಿಂದೂ ಜನಜಾಗೃತಿ ಸಮಿತಿ ಆಗ್ರಹಿಸಿದೆ. ಈ ದಾಳಿಯನ್ನು ವಿರೋಧಿಸಿ ಸಮಿತಿಯ ವತಿಯಿಂದ ಹಲವೆಡೆ ಪ್ರತಿಭಟನೆಗಳನ್ನೂ ನಡೆಸಲಾಯಿತು. ಆ ಸಮಯದಲ್ಲಿ ಈ ಬೇಡಿಕೆಯನ್ನು ಮುಂದಿಡಲಾಯಿತು.
ಸಮಿತಿಯು, `1990 ರಲ್ಲಿ ಇದೇ ಪದ್ಧತಿಯಲ್ಲಿ 90 ಸಾವಿರ ಹಿಂದೂಗಳ ಹತ್ಯೆ ಮಾಡಲಾಯಿತು ಮತ್ತು ನಾಲ್ಕುವರೆ ಲಕ್ಷ ಕಾಶ್ಮೀರಿ ಹಿಂದೂಗಳನ್ನು ಬಲವಂತವಾಗಿ ಸ್ಥಳಾಂತರಿಸಲಾಯಿತು. ಈಗಿನ ಈ ದಾಳಿಗಳು ಇದೇ ಸಂಚಿನ ಮುಂದಿನ ಭಾಗವಾಗಿವೆ. ಆದುದರಿಂದ ಕಾಶ್ಮೀರದ ಕಣಿವೆಯಲ್ಲಿ ವ್ಯಾಪಕವಾದ ‘ಕೂಂಬಿಂಗ್ ಆಪರೇಷನ್’ ನಡೆಸಿ ಭಯೋತ್ಪಾದಕರನ್ನು ನಿರ್ನಾಮ ಮಾಡಬೇಕು. ಕಾಶ್ಮೀರದಲ್ಲಿ ಉಳಿದಿರುವ ಹಿಂದೂ ಪ್ರವಾಸಿಗರು, ವ್ಯಾಪಾರಿಗಳು ಮತ್ತು ಹಿಂದೂಗಳ ಜೀವನದ ರಕ್ಷಣೆಗಾಗಿ ವಿಶೇಷ ಭದ್ರತಾ ಯೋಜನೆಯನ್ನು ಜಾರಿಗೊಳಿಸಬೇಕು ಎಂದು ಒತ್ತಾಯಿಸಿದೆ.