ಭಾಜಪದ ಹಿರಿಯ ನಾಯಕ ಮತ್ತು ಮಾಜಿ ಕೇಂದ್ರ ಸಚಿವ ಡಾ. ಸುಬ್ರಮಣಿಯನ್ ಸ್ವಾಮಿ ಅವರ ಆಗ್ರಹ
ನವದೆಹಲಿ – ಸೇಡು ತೀರಿಸಿಕೊಳ್ಳುವ ಮೊದಲು ಪ್ರಧಾನಿ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ರಾಜೀನಾಮೆ ನೀಡಿ ಎಂದು ಪಹಲ್ಗಾಮ್ ದಾಳಿಯ ನಂತರ ಹಿರಿಯ ಭಾಜಪ ನಾಯಕ ಮತ್ತು ಮಾಜಿ ಕೇಂದ್ರ ಸಚಿವ ಡಾ. ಸುಬ್ರಮಣಿಯನ್ ಸ್ವಾಮಿ ‘ಎಕ್ಸ್’ ನಲ್ಲಿ ಪೋಸ್ಟ್ ಮಾಡಿದ್ದಾರೆ. ಅವರು ಮುಂದೆ ಮಾತನಾಡಿ “ಈ ಇಬ್ಬರನ್ನು ಹಲವು ಬಾರಿ ಪರೀಕ್ಷಿಸಲಾಗಿದೆ.” ಅವರಿಬ್ಬರೂ ಚೀನಾ, ಪಾಕಿಸ್ತಾನ, ಮಾಲ್ಡೀವ್ಸ್ ಮತ್ತು ಬಾಂಗ್ಲಾದೇಶ ಇವರ ಮುಂದೆ ಶರಣಾಗತಿ ಸ್ವೀಕರಿಸಿದ್ದಾರೆ.
Instead of asking for retaliation, ask for Modi /Shah resignation first. They have been tested many times -on China, Pakistan, Maldives , Bangladesh and both had surrendered. Bharat Mata debased.
— Subramanian Swamy (@Swamy39) April 23, 2025
ಭಾರತ ಮಾತೆಯ ಮಾನಹಾನಿ ಆಗಿದೆ. ಎಲ್ಲಿಯವರೆಗೆ ಪ್ರಧಾನಿ ಮೋದಿ ತಮ್ಮ ಸಹೋದ್ಯೋಗಿಗಳೊಂದಿಗೆ ರಾಜೀನಾಮೆ ನೀಡುವುದಿಲ್ಲವೋ ಅಲ್ಲಿಯವರೆಗೆ, ಪಾಕಿಸ್ತಾನ ಮತ್ತು ಚೀನಾದ ಭಾರತ ವಿರೋಧಿ ಒಪ್ಪಂದದ ವಿರುದ್ಧ ಭಾರತ ಹೋರಾಡಲು ಸಾಧ್ಯವಿಲ್ಲ. ಅಮೆರಿಕ ತಟಸ್ಥವಾಗಿದ್ದು ಪ್ರಚಾರ ಮಾಡುತ್ತಿದೆ. ‘ಚೀನಾ ಭಾರತದ ಗಡಿಯೊಳಗೆ ನುಸುಳಿಲ್ಲ’ ಎಂದು ಹೇಳುವುದರೊಂದಿಗೆ ಪ್ರಾರಂಭಿಸಿ, ಮೋದಿ ಮೂರು ಬೇರೆ ಬೇರೆ ಕಾರಣಗಳಿಗಾಗಿ ರಾಜಿ ಮಾಡಿಕೊಳ್ಳುತ್ತಿದ್ದಾರೆ ಎಂದಿದ್ದಾರೆ.