ಭಯೋತ್ಪಾದನೆಯ ಧರ್ಮ ಇಸ್ಲಾಂ ಆಗಿದೆ! – ಶಂಕರಾಚಾರ್ಯ ಸ್ವಾಮಿ ಅವಿಮುಕ್ತೇಶ್ವರಾನಂದ ಸರಸ್ವತಿ

ಗ್ವಾಲಿಯರ್ (ಮಧ್ಯಪ್ರದೇಶ) – ಭಯೋತ್ಪಾದನೆಯ ಧರ್ಮ ಇಸ್ಲಾಂ ಆಗಿದೆ. ಭಯೋತ್ಪಾದಕರು ಜನರನ್ನು ಅವರ ಧರ್ಮದ ಬಗ್ಗೆ ಕೇಳಿದ ನಂತರ ಹತ್ಯೆ ಮಾಡಿದರು ಎಂದು ಜ್ಯೋತಿಷ್ ಪೀಠದ ಶಂಕರಾಚಾರ್ಯ ಸ್ವಾಮಿ ಅವಿಮುಕ್ತೇಶ್ವರಾನಂದ ಸರಸ್ವತಿ ಹೇಳಿದ್ದಾರೆ. ಅವರು ಈ ದಾಳಿಯ ಬಗ್ಗೆ ದುಃಖ ವ್ಯಕ್ತಪಡಿಸಿದ್ದಾರೆ. ‘ಪಹಲ್ಗಾಮ್ ದಾಳಿಯಲ್ಲಿ ಪಾಕಿಸ್ತಾನದ ಕೈವಾಡವಿದ್ದರೆ, ಭಾರತವು ಪಾಕಿಸ್ತಾನದೊಂದಿಗೆ ಯುದ್ಧ ಮಾಡಬೇಕು’ ಎಂದು ಅವರು ಈ ಸಂದರ್ಭದಲ್ಲಿ ಒತ್ತಾಯಿಸಿದರು.

ಶಂಕರಾಚಾರ್ಯರು ಮಾತು ಮುಂದುವರೆಸಿ, ಹಿಂದೂಗಳು ಧರ್ಮಶಾಸ್ತ್ರಗಳೊಂದಿಗೆ ಶಸ್ತ್ರಾಸ್ತ್ರಗಳ ಜ್ಞಾನವನ್ನು ಪಡೆಯಬೇಕು ಎಂದು ಹೇಳಿದರು. ಶಂಕರಾಚಾರ್ಯರು ಸೋನಿಯಾ ಗಾಂಧಿಯವರ ಅಳಿಯ ರಾಬರ್ಟ್ ವಾದ್ರಾ ಅವರ ಹೇಳಿಕೆ ತಪ್ಪು ಎಂದು ಹೇಳಿದ್ದಾರೆ. ಅವರ ಹೇಳಿಕೆಗಳಿಗೆ ಗಮನ ಕೊಡುವ ಅಗತ್ಯವಿಲ್ಲ ಎಂದಿದ್ದಾರೆ. ವಾದ್ರಾ ಅವರು ದೇಶದಲ್ಲಿ ಹಿಂದೂ ಮತ್ತು ಮುಸ್ಲಿಮರ ನಡುವೆ ಭೇದಭಾವ ಸೃಷ್ಟಿಸಲಾಗುತ್ತಿರುವುದರಿಂದ ಈ ದಾಳಿ ಸಂಭವಿಸಿದೆ ಎಂದು ಹೇಳಿದ್ದರು.

ಸಂಪಾದಕೀಯ ನಿಲುವು

ಶಂಕರಾಚಾರ್ಯರು ಎಷ್ಟು ಸ್ಪಷ್ಟವಾಗಿ ಹೇಳುತ್ತಿದ್ದಾರೋ, ಹಾಗೆ ದೇಶದ ಒಂದೇ ಒಂದು ರಾಜಕೀಯ ಪಕ್ಷವೂ ಮಾತನಾಡುವುದಿಲ್ಲ ಮತ್ತು ಮಾತನಾಡಲಾರದು; ಏಕೆಂದರೆ ಅವರಿಗೆ ಹಿಂದೂಗಳ ಜೀವಕ್ಕಿಂತ ಮತ ಮತ್ತು ಅದರಿಂದ ಸಿಗುವ ಅಧಿಕಾರದ ಚಿಂತೆ ಹೆಚ್ಚಾಗಿದೆ!