ಪಹಲ್ಗಾಮ್ ದಾಳಿಯ ಬಳಿಕ ನವದೆಹಲಿಯ ಪಾಕಿಸ್ತಾನಿ ರಾಯಭಾರಿ ಕಚೇರಿಯೊಳಗೆ ಕೇಕ್ ತೆಗೆದುಕೊಂಡು ಹೋಗುತ್ತಿದ್ದ ಸಿಬ್ಬಂದಿ ಪತ್ತೆ !

ನವದೆಹಲಿ: ಪಹಲ್ಗಾಮ್ ದಾಳಿಯ ನಂತರ ಇಡೀ ಭಾರತದಲ್ಲಿ ಶೋಕ ಮತ್ತು ಆಕ್ರೋಶದ ವಾತಾವರಣವಿದ್ದರೂ, ನವದೆಹಲಿಯ ಪಾಕಿಸ್ತಾನ ರಾಯಭಾರಿ ಕಚೇರಿಯಲ್ಲಿ ಒಬ್ಬ ಸಿಬ್ಬಂದಿ ಕೇಕ್ ತೆಗೆದುಕೊಂಡು ಹೋಗುತ್ತಿರುವುದು ಕಂಡುಬಂದಿದೆ. ಕೇಕ್ ತೆಗೆದುಕೊಂಡು ಹೋಗುತ್ತಿದ್ದ ಈ ಸಿಬ್ಬಂದಿಯ ವಿಡಿಯೋ ಪ್ರಸಾರವಾದ ನಂತರ ಪ್ರಶ್ನೆಗಳು ಉದ್ಭವಿಸಲು ಪ್ರಾರಂಭಿಸಿವೆ. ಪತ್ರಕರ್ತರು ಸಿಬ್ಬಂದಿಗೆ ಕೇಕ್ ತರಲು ಕಾರಣ ಕೇಳಿದಾಗ, ಅವರು ಯಾವುದೇ ಉತ್ತರವನ್ನೂ ನೀಡಲಿಲ್ಲ.

ಪಹಲ್ಗಾಮ್ ದಾಳಿಯ ನಂತರ ಕೇಂದ್ರ ಸರಕಾರವು ಪಾಕಿಸ್ತಾನ ರಾಯಭಾರಿ ಕಚೇರಿಯ ಸಿಬ್ಬಂದಿಗೆ ಸಮನ್ಸ್ ನೀಡಿದೆ. ಅವರನ್ನು ಭಾರತ ತೊರೆಯಲು ಒಂದು ವಾರದ ಸಮಯ ನೀಡಲಾಗಿದೆ.

ಸಂಪಾದಕೀಯ ನಿಲುವು

ಪಾಕಿಸ್ತಾನದ ಮನಸ್ಥಿತಿ ಈ ಮೂಲಕ ಬಹಿರಂಗಗೊಳ್ಳುತ್ತದೆ. ಇಂತಹ ಶತ್ರುದೇಶದ ಕಚೇರಿ ನಮ್ಮ ದೇಶದಲ್ಲಿದ್ದರೆ ಅವರ ಪಿತೂರಿಗಳಿಗೆ ನಾವೇ ಅವಕಾಶಕೊಟ್ಟಂತೆ. ಶತ್ರುಗಳ ಇಂತಹ ಕಚೇರಿಗಳನ್ನು ಶಾಶ್ವತವಾಗಿ ಮುಚ್ಚಬೇಕು!