ನವದೆಹಲಿ: ಪಹಲ್ಗಾಮ್ ದಾಳಿಯ ನಂತರ ಇಡೀ ಭಾರತದಲ್ಲಿ ಶೋಕ ಮತ್ತು ಆಕ್ರೋಶದ ವಾತಾವರಣವಿದ್ದರೂ, ನವದೆಹಲಿಯ ಪಾಕಿಸ್ತಾನ ರಾಯಭಾರಿ ಕಚೇರಿಯಲ್ಲಿ ಒಬ್ಬ ಸಿಬ್ಬಂದಿ ಕೇಕ್ ತೆಗೆದುಕೊಂಡು ಹೋಗುತ್ತಿರುವುದು ಕಂಡುಬಂದಿದೆ. ಕೇಕ್ ತೆಗೆದುಕೊಂಡು ಹೋಗುತ್ತಿದ್ದ ಈ ಸಿಬ್ಬಂದಿಯ ವಿಡಿಯೋ ಪ್ರಸಾರವಾದ ನಂತರ ಪ್ರಶ್ನೆಗಳು ಉದ್ಭವಿಸಲು ಪ್ರಾರಂಭಿಸಿವೆ. ಪತ್ರಕರ್ತರು ಸಿಬ್ಬಂದಿಗೆ ಕೇಕ್ ತರಲು ಕಾರಣ ಕೇಳಿದಾಗ, ಅವರು ಯಾವುದೇ ಉತ್ತರವನ್ನೂ ನೀಡಲಿಲ್ಲ.
Unbelievable! After the #PahelgamTerroristattack, a Pakistani embassy employee in New Delhi was spotted carrying a cake into their embassy.
This reveals Pakistan’s attitude. Having such enemy embassies in our nation is a chance for them to plot against us. Close them… pic.twitter.com/ZQbqflnb8x
— Sanatan Prabhat (@SanatanPrabhat) April 24, 2025
ಪಹಲ್ಗಾಮ್ ದಾಳಿಯ ನಂತರ ಕೇಂದ್ರ ಸರಕಾರವು ಪಾಕಿಸ್ತಾನ ರಾಯಭಾರಿ ಕಚೇರಿಯ ಸಿಬ್ಬಂದಿಗೆ ಸಮನ್ಸ್ ನೀಡಿದೆ. ಅವರನ್ನು ಭಾರತ ತೊರೆಯಲು ಒಂದು ವಾರದ ಸಮಯ ನೀಡಲಾಗಿದೆ.
ಸಂಪಾದಕೀಯ ನಿಲುವುಪಾಕಿಸ್ತಾನದ ಮನಸ್ಥಿತಿ ಈ ಮೂಲಕ ಬಹಿರಂಗಗೊಳ್ಳುತ್ತದೆ. ಇಂತಹ ಶತ್ರುದೇಶದ ಕಚೇರಿ ನಮ್ಮ ದೇಶದಲ್ಲಿದ್ದರೆ ಅವರ ಪಿತೂರಿಗಳಿಗೆ ನಾವೇ ಅವಕಾಶಕೊಟ್ಟಂತೆ. ಶತ್ರುಗಳ ಇಂತಹ ಕಚೇರಿಗಳನ್ನು ಶಾಶ್ವತವಾಗಿ ಮುಚ್ಚಬೇಕು! |