TN Minister Ponmudy’s Derogatory Speech : ಮದ್ರಾಸ್ ಹೈಕೋರ್ಟ್‌ನಿಂದ ತಮಿಳುನಾಡಿನ ಸಚಿವರ ವಿರುದ್ಧ ಸ್ವಯಂಪ್ರೇರಿತ ಕಾರ್ಯಾಚರಣೆ !

ಉನ್ನತ ಶಿಕ್ಷಣ ಸಚಿವ ಪೊನ್ಮುಡಿ ಅವರು ಶೈವರ ಪಟ್ಟೈ (ಅಡ್ಡ ನಾಮ) ಮತ್ತು ವೈಷ್ಣವರ ನಾಮ (ಉದ್ದ ನಾಮ)ವನ್ನು ಅಶ್ಲೀಲ ಲೈಂಗಿಕ ಸ್ಥಿತಿಗೆ ಹೋಲಿಸಿದ ಪ್ರಕರಣ

(ದ್ರಮುಕ ಎಂದರೆ ‘ದ್ರಾವಿಡ ಮುನ್ನೇತ್ರ ಕಳಗಂ’, ಅಂದರೆ ದ್ರಾವಿಡ ಪ್ರಗತಿ ಸಂಘ)

ತಮಿಳುನಾಡು ಉನ್ನತ ಶಿಕ್ಷಣ ಸಚಿವ ಪೊನ್ಮುಡಿ

ಚೆನ್ನೈ (ತಮಿಳುನಾಡು) – ಶೈವರ ಪಟ್ಟೈ (ಅಡ್ಡ ನಾಮ) ಮತ್ತು ವೈಷ್ಣವರ ನಾಮ (ಉದ್ದ ನಾಮ)ವನ್ನು ಅಶ್ಲೀಲ ಲೈಂಗಿಕ ಸ್ಥಿತಿಗೆ ಹೋಲಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ, ಮದ್ರಾಸ್ ಹೈಕೋರ್ಟ್ ಏಪ್ರಿಲ್ ೨೩ ರಂದು ಆಡಳಿತಾರೂಢ ದ್ರಮುಕ ಪಕ್ಷದ ನಾಯಕ ಮತ್ತು ತಮಿಳುನಾಡಿನ ಉನ್ನತ ಶಿಕ್ಷಣ ಸಚಿವ ಪೊನ್ಮುಡಿ ವಿರುದ್ಧ ಸ್ವಯಂಪ್ರೇರಿತ ಕ್ರಮ ಕೈಗೊಂಡಿದೆ. ನ್ಯಾಯಮೂರ್ತಿ ಆನಂದ ವೆಂಕಟೇಶ್ ಅವರು ಮುಂದಿನ ಕ್ರಮಕ್ಕಾಗಿ ಈ ಪ್ರಕರಣವನ್ನು ಮುಖ್ಯ ನ್ಯಾಯಾಧೀಶರಿಗೆ ವರ್ಗಾಯಿಸಲು ನಿರ್ದೇಶಿಸಿದ್ದಾರೆ. ಸಚಿವರು ಮಾಡಿದ ಭಾಷಣ ಮೇಲ್ನೋಟಕ್ಕೆ ದ್ವೇಷಪೂರಿತವಾಗಿರುವುದು ಸ್ಪಷ್ಟವಾಗಿದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ. ಸಚಿವರು ನೀಡಿದ ಹೇಳಿಕೆಗಳು ಮಹಿಳೆಯರಿಗೆ ಅವಮಾನಕರವಾಗಿದ್ದು, ರಾಜ್ಯದ ಹಿಂದೂ ಧರ್ಮದ ಎರಡು ಪ್ರಮುಖ ಪಂಥಗಳಾದ ಶೈವ ಮತ್ತು ವೈಷ್ಣವರ ಧಾರ್ಮಿಕ ಭಾವನೆಗಳನ್ನು ಘಾಸಿಗೊಳಿಸಿವೆ ಎಂದು ಹೈಕೋರ್ಟ್ ಹೇಳಿದೆ.

ಸಂಪಾದಕೀಯ ನಿಲುವು

ತಲೆಯಲ್ಲಿ ಅಶ್ಲೀಲತೆ ತುಂಬಿರುವ ಉನ್ನತ ಶಿಕ್ಷಣ ಸಚಿವರ ಆಡಳಿತದಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಯಾವ ಮನಸ್ಥಿತಿಯ ಮಕ್ಕಳು ಬೆಳೆಯುತ್ತಾರೆ ಎಂಬುದನ್ನು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ! ಇಂತಹವರನ್ನು ಆಯ್ಕೆ ಮಾಡಿದ ಜನರಿಗೆ ಇದು ನಾಚಿಕೆಗೇಡಿನ ಸಂಗತಿ!

 

ಆದೇಶ ನೀಡಿದರೂ ಸಚಿವರ ವಿರುದ್ಧ ಕ್ರಮ ಕೈಗೊಳ್ಳದ ಪೊಲೀಸರ ವಿರುದ್ಧ ಹೈಕೋರ್ಟ್‌ನಿಂದ ಚಾಟಿ!

ಆದೇಶ ನೀಡಿದರೂ ಉನ್ನತ ಶಿಕ್ಷಣ ಸಚಿವ ಪೊನ್ಮುಡಿ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದ ಬಗ್ಗೆ ಹೈಕೋರ್ಟ್ ರಾಜ್ಯ ಪೊಲೀಸರನ್ನು ತರಾಟೆಗೆ ತೆಗೆದುಕೊಂಡಿದೆ. ದ್ವೇಷಪೂರಿತ ಭಾಷಣಕ್ಕೆ ಶೂನ್ಯ ಸಹಿಷ್ಣುತೆ ಇರುತ್ತದೆ ಎಂದು ನ್ಯಾಯಾಲಯವು ಒತ್ತಿಹೇಳಿದೆ. ಮದ್ರಾಸ್ ಹೈಕೋರ್ಟ್ ಏಪ್ರಿಲ್ ೧೭, ೨೦೨೫ ರಂದು ಸಚಿವ ಪೊನ್ಮುಡಿ ವಿರುದ್ಧ ಪ್ರಕರಣ ದಾಖಲಿಸುವಂತೆ ಸರಕಾರಕ್ಕೆ ನಿರ್ದೇಶಿಸಿತ್ತು. ನ್ಯಾಯಮೂರ್ತಿ ವೆಂಕಟೇಶ್ ಅವರು ಪೊಲೀಸರ ನಿಷ್ಕ್ರಿಯತೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ, ನ್ಯಾಯಾಲಯದ ಆದೇಶವನ್ನು ಪಾಲಿಸದಿದ್ದರೆ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದರು. ಆದರೂ ಪೊಲೀಸರು ನಿಷ್ಕ್ರಿಯರಾಗಿದ್ದರು. ನಿರಂತರ ನಿಷ್ಕ್ರಿಯತೆಯು ಅತ್ಯಂತ ಕಿರಿಕಿರಿ ಉಂಟು ಮಾಡುತ್ತದೆ ಎಂದು ನ್ಯಾಯಾಲಯ ಹೇಳಿದೆ.

ಸಂಪಾದಕೀಯ ನಿಲುವು

ನ್ಯಾಯಾಲಯವನ್ನೂ ಲೆಕ್ಕಿಸದ ಪೊಲೀಸರ ದುರಹಂಕಾರ ನೋಡಿ! ಇಂತಹ ಬೇಜವಾಬ್ದಾರಿ ಪೊಲೀಸರು ಜನರನ್ನು ಹೇಗೆ ರಕ್ಷಿಸುತ್ತಾರೆ! ನ್ಯಾಯಾಲಯವೇ ಕ್ರಮ ಕೈಗೊಳ್ಳಬೇಕಾದರೆ, ಇಂತಹ ಪೊಲೀಸ್ ಪಡೆ ಏಕೆ ಬೇಕು?