ನ್ಯಾಯಯುತ ಜೀವನದ ಸಾರವನ್ನು ಜಗತ್ತಿಗೆ ಪ್ರದರ್ಶಿಸುವ ‘ಸನಾತನ ರಾಷ್ಟ್ರ ಶಂಖನಾದ ಮಹೋತ್ಸವ’ ಯಶಸ್ವಿಯಾಗಲಿ! – ಕೆ. ಅಣ್ಣಾಮಲೈ

ತಮಿಳುನಾಡಿನ ಹಿಂದೂತ್ವನಿಷ್ಠ ನಾಯಕ ಕೆ. ಅಣ್ಣಾಮಲೈ ಅವರಿಂದ ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಅವರಿಗೆ ಪತ್ರ!

ಚೆನ್ನೈ – ೨೫ ವರ್ಷಗಳಿಗೂ ಹೆಚ್ಚು ಕಾಲ ಆಧ್ಯಾತ್ಮ ಪ್ರಸಾರಕ್ಕಾಗಿ ತಮ್ಮನ್ನು ಅರ್ಪಿಸಿಕೊಂಡು ದೇಶ-ವಿದೇಶಗಳ ಸಾವಿರಾರು ಸಾಧಕರಿಗೆ ಆಧ್ಯಾತ್ಮಿಕ ಮಾರ್ಗದರ್ಶನದ ದೀಪಸ್ತಂಭವಾಗಿರುವ ಸನಾತನ ಸಂಸ್ಥೆ ಮತ್ತು ಅದರ ಸಂಸ್ಥಾಪಕ ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಅವರಿಗೆ ತಮಿಳುನಾಡಿನ ಹಿಂದೂತ್ವನಿಷ್ಠ ನಾಯಕ ಹಾಗೂ ಮಾಜಿ ಪೊಲೀಸ್ ಅಧಿಕಾರಿ ಕೆ. ಅಣ್ಣಾಮಲೈ ಅವರು ಶುಭ ಹಾರೈಸಿದ್ದಾರೆ. ಮೇ ೧೭ ರಿಂದ ಮೇ ೧೯, ೨೦೨೫ ರವರೆಗೆ ಗೋವಾದಲ್ಲಿ ನಡೆಯಲಿರುವ ‘ಸನಾತನ ರಾಷ್ಟ್ರ ಶಂಖನಾದ ಮಹೋತ್ಸವ’ದ ಆಹ್ವಾನ ನೀಡಿದ ನಂತರ ಅವರು ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಅವರಿಗೆ ಪತ್ರ ಬರೆದು ತಮ್ಮ ಭಾವನೆಗಳನ್ನು ವ್ಯಕ್ತಪಡಿಸಿದ್ದಾರೆ. ಈ ಮಹೋತ್ಸವಕ್ಕೆ ಆಹ್ವಾನ ನೀಡಿದಕ್ಕಾಗಿ ಅವರು ಸನಾತನ ಸಂಸ್ಥೆ ಮತ್ತು ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಅವರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ. ಆದಾಗ್ಯೂ ಕೆಲವು ಪೂರ್ವನಿಯೋಜಿತ ಕಾರ್ಯಕ್ರಮಗಳ ಕಾರಣದಿಂದ ಈ ಮಹೋತ್ಸವಕ್ಕೆ ಹಾಜರಾಗಲು ಸಾಧ್ಯವಾಗುತ್ತಿಲ್ಲ ಎಂದು ಅವರು ವಿನಮ್ರವಾಗಿ ತಿಳಿಸಿದ್ದಾರೆ.

ಈ ಪತ್ರದಲ್ಲಿ ಕೆ. ಅಣ್ಣಾಮಲೈ ಅವರು ಸತ್ಯ, ಅಹಿಂಸೆ, ಕರುಣೆ ಮತ್ತು ಅಖಂಡತೆ ಎಂಬ ಧರ್ಮದ ತತ್ವಗಳನ್ನು ಒತ್ತಿ ಹೇಳಿ ‘ನ್ಯಾಯಯುತ ಜೀವನದ ಸಾರವನ್ನು ಜಗತ್ತಿಗೆ ತೋರಿಸುವ ಈ ಮಹೋತ್ಸವ ಯಶಸ್ವಿಯಾಗಲಿ’ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಅವರು ಮಾತು ಮುಂದುವರೆಸಿ, ‘ನಮ್ಮ ಪವಿತ್ರ ಸನಾತನ ಧರ್ಮವು ನೀಡಿದ ಆಧ್ಯಾತ್ಮಿಕ ಜ್ಞಾನದ ಪ್ರಚಾರ ಮತ್ತು ಪ್ರಸಾರ ಮಾಡುವುದು, ಧರ್ಮಾಚರಣೆಗೆ ಪ್ರೋತ್ಸಾಹ ನೀಡುವುದು ಮತ್ತು ಆಧ್ಯಾತ್ಮವನ್ನು ಎಲ್ಲರಿಗೂ ಸುಲಭ ಮತ್ತು ಅರ್ಥವಾಗುವಂತೆ ಮಾಡಿ ವೈಜ್ಞಾನಿಕ ದೃಷ್ಟಿಕೋನದಿಂದ ಈಶ್ವರ ಪ್ರಾಪ್ತಿಗಾಗಿ ಸಾಧಕರಿಗೆ ಮಾರ್ಗದರ್ಶನ ನೀಡುವುದು, ಈ ಸನಾತನ ಸಂಸ್ಥೆಯ ಪ್ರಯತ್ನಗಳು ಅತ್ಯಂತ ಶ್ಲಾಘನೀಯವಾಗಿವೆ. ಉಚಿತ ವೈದ್ಯಕೀಯ ಶಿಬಿರಗಳು, ತುರ್ತು ಸಹಾಯ, ದೇವಾಲಯ ಸ್ವಚ್ಛತಾ ಅಭಿಯಾನಗಳು, ಮಕ್ಕಳಿಗಾಗಿ ಶೈಕ್ಷಣಿಕ ಉಪಕ್ರಮಗಳು ಮುಂತಾದ ವಿವಿಧ ಸಾಮಾಜಿಕ ಕಾರ್ಯಕ್ರಮಗಳ ಮೂಲಕ ಸಾವಿರಾರು ವಂಚಿತ ಮತ್ತು ನಿರ್ಗತಿಕ ಜನರಿಗೆ ಸಹಾಯ ಮಾಡುವ ಸನಾತನ ಸಂಸ್ಥೆಯ ಕಾರ್ಯವು ಗಮನಾರ್ಹವಾಗಿದೆ,’ ಎಂದು ಹೇಳಿದರು.