ಪಹಲ್ಗಾಮ್ ದಾಳಿಗೆ ಪಾಕಿಸ್ತಾನದ ಸೇನಾ ಮುಖ್ಯಸ್ಥ ಅಸಿಮ್ ಮುನೀರ್ ಕಾರಣ! – ಅಮೇರಿಕದ ಮಾಜಿ ರಕ್ಷಣಾ ಅಧಿಕಾರಿ ಮೈಕೆಲ್ ರೂಬಿನ್

ವಾಷಿಂಗ್ಟನ್ – ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯ ಬಗ್ಗೆ ಕೇವಲ ಭಾರತದಲ್ಲಿ ಮಾತ್ರವಲ್ಲದೆ ಇಡೀ ಜಗತ್ತಿನಲ್ಲಿ ಆಕ್ರೋಶ ವ್ಯಕ್ತವಾಗಿದೆ. ಅಮೇರಿಕದ ರಕ್ಷಣಾ ಪ್ರಧಾನ ಕಚೇರಿಯಾಗಿರುವ ಪೆಂಟಗಾನ್‌ನ ಮಾಜಿ ಅಧಿಕಾರಿ ಮೈಕೆಲ್ ರೂಬಿನ್ ಈ ದಾಳಿಗೆ ನೇರವಾಗಿ ಪಾಕಿಸ್ತಾನದ ಸೇನಾ ಮುಖ್ಯಸ್ಥ ಅಸಿಮ್ ಮುನೀರ್ ಅವರ ಭಾಷಣವೇ ಕಾರಣವೆಂದು ಹೇಳಿದ್ದಾರೆ. ಅಸಿಮ್ ಮುನೀರ್ ಅವರು ತಮ್ಮ ಭಾಷಣದಲ್ಲಿ, ‘ಕಾಶ್ಮೀರದ ಬಗ್ಗೆ ನಮ್ಮ ನಿಲುವು ಸ್ಪಷ್ಟವಾಗಿದೆ, ಅದು ನಮ್ಮ ಕುತ್ತಿಗೆಯ ನರ, ಅದು ನಮ್ಮ ಕುತ್ತಿಗೆಯ ನರವಾಗಿಯೇ ಇರುತ್ತದೆ. ನಾವು ಅದನ್ನು ಮರೆಯುವುದಿಲ್ಲ. ನಾವು ನಮ್ಮ ಕಾಶ್ಮೀರಿ ಸಹೋದರರನ್ನು ಸಂಘರ್ಷದಲ್ಲಿ ಕೈಬಿಡುವುದಿಲ್ಲ’ ಎಂದು ಹೇಳಿದ್ದರು. ಪೆಂಟಗಾನ್‌ನ ಮಾಜಿ ಅಧಿಕಾರಿ ಮೈಕೆಲ್ ರೂಬಿನ್, “ಈ ದಾಳಿಯ ನಂತರ ಭಾರತವು ಪಾಕಿಸ್ತಾನದ ತಲೆ ಕತ್ತರಿಸಬೇಕು. ಈ ಬಗ್ಗೆ ಯಾವುದೇ ಅನುಮಾನ ಅಥವಾ ಸಂದೇಹ ಇರಬಾರದು” ಎಂದು ಅವರು ಹೇಳಿದರು.

ರೂಬಿನ್ ಮುಂದೆ ಮಾತನಾಡಿ, “ಲಷ್ಕರ್-ಎ-ತೊಯ್ಬಾದಂತಹ ಅನೇಕ ಭಯೋತ್ಪಾದಕ ಸಂಸ್ಥೆಗಳಿಗೆ ಪಾಕಿಸ್ತಾನವು ನೆಲೆಯಾಗಿದೆ ಎಂದು ನಮಗೆ ತಿಳಿದಿದೆ. ಪಹಲ್ಗಾಮ್ ದಾಳಿಯು ಅಕ್ಟೋಬರ್ ೭, ೨೦೨೩ ರಂದು ಹಮಾಸ್ ಇಸ್ರೇಲ್ ಮೇಲೆ ಮಾಡಿದ ದಾಳಿಯಂತೆಯೇ ಇದೆ. ಆ ದಾಳಿಯು ಯಹೂದಿಗಳ ಮೇಲೆ ಆಗಿತ್ತು. ಈಗ ಪಹಲ್ಗಾಮ್‌ನಲ್ಲಿ ಮಧ್ಯಮ ವರ್ಗದ ಹಿಂದೂಗಳನ್ನು ಗುರಿಯಾಗಿಸಿಕೊಂಡು ಪಾಕಿಸ್ತಾನವೂ ಅದೇ ತಂತ್ರವನ್ನು ಅನುಸರಿಸುತ್ತಿದೆ ಎಂಬುದು ಸ್ಪಷ್ಟವಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಇಸ್ರೇಲ್ ಹಮಾಸ್‌ನೊಂದಿಗೆ ಏನು ಮಾಡಿತ್ತೋ ಅದನ್ನೇ ಪಾಕಿಸ್ತಾನದೊಂದಿಗೆ ಮಾಡುವುದು ಭಾರತದ ಕರ್ತವ್ಯ” ಎಂದವರು ಅಭಿಪ್ರಾಯ ವ್ಯಕ್ತಪಡಿಸಿದರು.