Pakistan Blames India Terror Attack : ‘ಭಾರತವೇ ದಾಳಿಯ ಸಂಚು ರೂಪಿಸಿ ಪಾಕಿಸ್ತಾನವನ್ನು ಹೊಣೆಗಾರನನ್ನಾಗಿ ಮಾಡಿದೆ’!

ಪಹಲ್ಗಾಮ್ ದಾಳಿಯ ಸೂತ್ರಧಾರ ಭಯೋತ್ಪಾದಕ ಸೈಫುಲ್ಲಾ ಕಸೂರಿಯ ಹೇಳಿಕೆ !

ಇಸ್ಲಾಮಾಬಾದ್ (ಪಾಕಿಸ್ತಾನ) – ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯನ್ನು ನಾವು ಖಂಡಿಸುತ್ತೇವೆ. ಈ ದಾಳಿಯ ನೆಪದಲ್ಲಿ ಭಾರತೀಯ ಮಾಧ್ಯಮಗಳು ನನ್ನನ್ನು ಹೊಣೆಗಾರನನ್ನಾಗಿ ಮಾಡಿವೆ. ಪಾಕಿಸ್ತಾನದ ಮೇಲೂ ಆರೋಪ ಹೊರಿಸಲಾಗಿದೆ. ಇದು ದುಃಖದ ಸಂಗತಿ. ಭಾರತವು ಪಾಕಿಸ್ತಾನವನ್ನು ನಾಶಮಾಡಲು ಬಯಸುತ್ತದೆ. ಅದು ಒಂದು ಕ್ರೂರ ಶತ್ರು. ಕಾಶ್ಮೀರದಲ್ಲಿ 10 ಲಕ್ಷ ಸೈನಿಕರನ್ನು ಕಳುಹಿಸಿ ಯುದ್ಧದ ವಾತಾವರಣವನ್ನು ಸೃಷ್ಟಿಸಿದೆ.

ಪಹಲ್ಗಾಮ್‌ನಲ್ಲಿ ಭಾರತವೇ ದಾಳಿ ಮಾಡಿದೆ ಮತ್ತು ಅದಕ್ಕಾಗಿ ಅದೇ ಹೊಣೆಗಾರ. ಇದು ಅದರ ಷಡ್ಯಂತ್ರ. ಇದಕ್ಕೂ ಪಾಕಿಸ್ತಾನಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಈ ದಾಳಿಯ ಸೂತ್ರಧಾರನಾಗಿರುವ ಲಷ್ಕರ್-ಎ-ತೊಯ್ಬಾದ ಉಪ ಕಮಾಂಡರ್ ಸೈಫುಲ್ಲಾ ಕಸೂರಿ ಒಂದು ವೀಡಿಯೊವನ್ನು ಬಿಡುಗಡೆ ಮಾಡಿ ಹೇಳಿದ್ದಾನೆ.

ಸಂಪಾದಕೀಯ ನಿಲುವು

ಪಾಕಿಸ್ತಾನವು ಕಳೆದ 35 ವರ್ಷಗಳಿಂದ ಭಾರತದಲ್ಲಿ ಭಯೋತ್ಪಾದಕ ಕೃತ್ಯಗಳನ್ನು ನಡೆಸುತ್ತಿದೆ; ಆದರೆ ಒಂದೇ ಒಂದು ದಾಳಿಯ ಜವಾಬ್ದಾರಿಯನ್ನು ಅದು ಎಂದಿಗೂ ಒಪ್ಪಿಕೊಂಡಿಲ್ಲ. ಆದ್ದರಿಂದ ಈಗಲೂ ಅದೇ ಹೇಳುತ್ತಿರುವುದರಲ್ಲಿ ಆಶ್ಚರ್ಯವೇನೂ ಇಲ್ಲ!