ಭಯೋತ್ಪಾದಕರ ಜೊತೆ ನಂಟಿರುವ ಆರೋಪದ ಮೇಲೆ ಕಾಶ್ಮೀರ ವಿಶ್ವವಿದ್ಯಾಲಯದ ೨೫ ಪ್ರಾಧ್ಯಾಪಕರು ಅಮಾನತ್ತು
ಜಮ್ಮು ಕಾಶ್ಮೀರ ಸರಕಾರ ಕಾಶ್ಮೀರ ವಿಶ್ವವಿದ್ಯಾಲಯದ ಸುಮಾರು ೧೫ ಪ್ರಾಧ್ಯಾಪಕರ ಮತ್ತು ಶಿಕ್ಷಕೇತರ ಸಿಬ್ಬಂದಿಗಳನ್ನು ಭಯೋತ್ಪಾದಕರ ಜೊತೆ ನಂಟಿರುವ ಕಾರಣದಿಂದ ಅಮಾನತ್ತುಗೊಳಿಸುವ ನಿರ್ಣಯ ತೆಗೆದುಕೊಂಡಿದೆ.
ಜಮ್ಮು ಕಾಶ್ಮೀರ ಸರಕಾರ ಕಾಶ್ಮೀರ ವಿಶ್ವವಿದ್ಯಾಲಯದ ಸುಮಾರು ೧೫ ಪ್ರಾಧ್ಯಾಪಕರ ಮತ್ತು ಶಿಕ್ಷಕೇತರ ಸಿಬ್ಬಂದಿಗಳನ್ನು ಭಯೋತ್ಪಾದಕರ ಜೊತೆ ನಂಟಿರುವ ಕಾರಣದಿಂದ ಅಮಾನತ್ತುಗೊಳಿಸುವ ನಿರ್ಣಯ ತೆಗೆದುಕೊಂಡಿದೆ.
ಕುತುಬ ಮಿನಾರ್ ಮತ್ತು ತಾಜಮಹಲ ಸಧ್ಯಕ್ಕೆ ಭಾರತ ಸರಕಾರದ ಅಧೀನದಲ್ಲಿವೆ. ಆದ್ದರಿಂದ ಸರಕಾರ ಕುತುಬ್ ಮಿನಾರ್ ಮತ್ತು ತಾಜಮಹಲ್ ಇವುಗಳನ್ನು ಹಿಂದೂಗಳ ನಿಯಂತ್ರಣಕ್ಕೆ ನೀಡಬೇಕು ಎಂಬ ಬೇಡಿಕೆ ಕಾಂಗ್ರೆಸ್ಸಿನ ನಾಯಕ ಪ್ರಮೋದ ಕೃಷ್ಣನ್ ಇವರು ಇಟ್ಟಿದ್ದಾರೆ.
ಕೇರಳದ ಪಾಲಕ್ಕಾಡ ಜಿಲ್ಲೆಯಲ್ಲಿ ನಡೆದಿರುವ ಇಬ್ಬರು ಸಹೋದರರ ಹತ್ಯೆಯ ಪ್ರಕರಣದಲ್ಲಿ ಮೇ ೧೬ ರಂದು ಸತ್ರ ನ್ಯಾಯಾಲಯ ಇಂಡಿಯನ ಯೂನಿಯನ್ ಮುಸ್ಲಿಂ ಲೀಗ ನ(ಐಯುಎಂಎಲ್) ನ ೨೫ ಕಾರ್ಯಕರ್ತರಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ. ಒಂದು ಮಸೀದಿಗಾಗಿ ದೇಣಿಗೆ ಪಡೆಯುವುದರ ಮೇಲೆ ನಡೆದಿರುವ ವಾದ-ವಿವಾದದ ನಂತರ ಇಬ್ಬರ ಹತ್ಯೆ ಮಾಡಲಾಗಿತ್ತು.
ಪ್ರಧಾನಿ ನರೇಂದ್ರ ಮೋದಿ ನೇಪಾಳ ಪ್ರವಾಸಕ್ಕೆ ತೆರಳಿದ್ದಾರೆ. ಮೇ ೧೬ ರಂದು ಬುದ್ಧ ಪೂರ್ಣಿಮೆಯ ಸಂದರ್ಭದಲ್ಲಿ ಅವರು ನೇಪಾಳದ ಭಗವಾನ ಬುದ್ಧನ ಜನ್ನಸ್ಥಳವಾದ ಲುಂಬಿನಿಗೆ ಹೋಗಿ ಅಲ್ಲಿನ ಮಾಯಾದೇವಿಯ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದರು.
ಲೇಹ ನ ಭಾರತ ಚೀನಾ ಗಡಿಯಲ್ಲಿ ಸುರಕ್ಷಾ ಪರಿಸ್ಥಿತಿಯ ವರದಿ ಪಡೆದು ಸೈನ್ಯ ದಳದ ಪ್ರಮುಖ ಜನರಲ ಮನೋಜ್ ಪಾಂಡೆ ಇವರು ದೊಡ್ಡ ನಿರ್ಣಯ ತೆಗೆದುಕೊಂಡಿದ್ದಾರೆ. ಅವರು ಅಲ್ಲಿ ಕೆಲವು ಮಹತ್ವದ ಬದಲಾವಣೆಗಳನ್ನು ಮಾಡಿದ್ದಾರೆ.
ಕಾಶ್ಮೀರದಲ್ಲಿ ವಾಸಿಸುವ ಕಾಶ್ಮೀರಿ ಹಿಂದೂಗಳಿಗೆ ಲಷ್ಕರ್ ಎ ಇಸ್ಲಾಂ ಹೆಸರಿನ ಜಿಹಾದಿ ಉಗ್ರರ ಸಂಘಟನೆ ಕಾಶ್ಮೀರ ಬಿಟ್ಟುಬಿಡಿ ಇಲ್ಲವಾದರೆ ಸಾಯಲು ಸಿದ್ಧರಾಗಿ, ಎಂದು ಪತ್ರದ ಮೂಲಕ ಬೆದರಿಕೆ ಒಡ್ಡಿದ್ದಾರೆ. ಪುಲ್ವಾಮಾ ಜಿಲ್ಲೆಯಲ್ಲಿನ ಪುನರ್ವಸತಿ ಛಾವಣಿಯಲ್ಲಿರುವ ಕಾಶ್ಮೀರಿ ಹಿಂದೂಗಳಿಗೆ ಈ ಪತ್ರ ದೊರೆತಿದೆ.
ಸ್ಥಳೀಯ ಜ್ಞಾನವ್ಯಾಪಿ ಮಸೀದಿಯ ಎರಡನೇ ದಿನದ ಪರಿಶೀಲನೆಯ ಕೆಲಸ ಪೂರ್ಣವಾಗಿದೆ. ಎರಡು ದಿನದಲ್ಲಿ ಶೇಕಡ ೮೦ ಪರಿಶೀಲನೆ ಮತ್ತು ಚಿತ್ರೀಕರಣ ಪೂರ್ಣಗೊಂಡಿದೆ ಎಂದು ಹೇಳಲಾಗುತ್ತಿದೆ. ಮೇ ೧೬ ರಂದು ಒಂದರಿಂದ ಒಂದುವರೆ ಗಂಟೆ ಇನ್ನೂ ಹೆಚ್ಚಿನ ಪರಿಶೀಲನೆ ನಡೆಯುವುದು.
ತ್ರಿಪುರಾದ ಭಾಜಪಾ ಸರಕಾರದ ಮುಖ್ಯಮಂತ್ರಿ ವಿಪ್ಲವ ಕುಮಾರ್ ದೇವ ಇವರು ರಾಜೀನಾಮೆ ನೀಡಿದ ನಂತರ ತ್ರಿಪುರಾದಲ್ಲಿ ಭಾಜಪದ ಪ್ರದೇಶಾಧ್ಯಾಕ್ಷ ಮಾಣಿಕ ಸಾಹಾ ಇವರನ್ನು ಮುಖ್ಯಮಂತ್ರಿಯೆಂದು ಘೋಷಿಸಲಾಯಿತು.
ಇಲ್ಲಿಯ ಶ್ರೀವೈಷ್ಣೋ ದೇವಿಯ ದರ್ಶನಕ್ಕೆ ತೆರಳಿದ ಶ್ರದ್ಧಾಳುಗಳ ಬಸ್ಸಿಗೆ ಮೇ ೨೩ ರಂದು ಅಚಾನಕ್ಕಾಗಿ ಬೆಂಕಿ ಹೊತ್ತಿಕೊಂಡಿತು. ಈ ಬಸ್ಸು ಕಟರಾದಿಂದ ಜಮ್ಮು ಕಡೆಗೆ ಹೋಗುತ್ತಿತ್ತು. ಅಗ್ನಿ ಅನಾಹುತದಲ್ಲಿ ೪ ಜನರ ಮೃತಪಟ್ಟಿದ್ದಾರೆ. ಹಾಗೂ ೨೦ ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ.
ರಾಜಸ್ಥಾನದ ಮಂತ್ರಿ ಮಹೇಶ ಜೋಶಿಯವರ ಮಗ ರೋಹಿತ ಜೋಶಿ ಇವನ ಮೇಲೆ ಓರ್ವ ೨೩ ವರ್ಷದ ಯುವತಿಗೆ ಮದುವೆಯ ಆಮಿಷವೊಡ್ಡಿ ಬಲಾತ್ಕಾರ ಮಾಡಿದ ಪ್ರಕರಣ ದೆಹಲಿಯಲ್ಲಿ ದಾಖಲಾಗಿದೆ.