‘ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್‌ನಲ್ಲಿ ಮುಸ್ಲಿಮರು ಇದ್ದಿದ್ದರೆ, ಕಳ್ಳತನದ ಆರೋಪದ ಮೇಲೆ ಅವರ ‘ಎನ್‌ಕೌಂಟರ್’ ಮಾಡಲಾಗುತ್ತಿತ್ತು!’

ಸಂಸದ ಅಸಾದುದ್ದೀನ್ ಓವೈಸಿ ಅವರ ವ್ಯರ್ಥ ಹೇಳಿಕೆ!

(ಎನ್‌ಕೌಂಟರ್ ಎಂದರೆ ಪೊಲೀಸ್ ಮುಖಾಮುಖಿಯಲ್ಲಿ ಗುಂಡಿಕ್ಕಿ ಕೊಲ್ಲುವುದು)

ಬಿಜನೌರ್ (ಉತ್ತರ ಪ್ರದೇಶ) – ಶ್ರೀರಾಮ ಮಂದಿರದ ಅರ್ಪಣೆ ಹಣ ಕಳ್ಳತನದ ಪ್ರಕರಣದಲ್ಲಿ ‘ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್’ ತಪ್ಪು ಮಾಡಿದೆ. ಒಂದು ವೇಳೆ ಈ ಟ್ರಸ್ಟ್‌ನಲ್ಲಿ ಯಾರಾದರೂ ಮುಸ್ಲಿಮರು ಇದ್ದು, ಈ ವಿಷಯ ಮುನ್ನೆಲೆಗೆ ಬಂದಿದ್ದರೆ, ಅವರ ‘ಎನ್‌ಕೌಂಟರ್’ ಮಾಡಲಾಗುತ್ತಿತ್ತು, ಅವರ ಮನೆಯನ್ನು ಬುಲ್ಡೋಜರ್ ಮೂಲಕ ಧ್ವಂಸಗೊಳಿಸಲಾಗುತ್ತಿತ್ತು ಮತ್ತು ವಿಷಯವನ್ನು ಅಲ್ಲಿಗೇ ಮುಗಿಸಲಾಗುತ್ತಿತ್ತು; ಆದರೆ ಸದ್ಯಕ್ಕೆ (ಟ್ರಸ್ಟ್‌ನ ಮುಖ್ಯಸ್ಥ) ಚಂಪತ್ (ರಾಯ್) ಆರಾಮಾಗಿದ್ದಾರೆ, ಎಲ್ಲ ಚಂಪತ್‌ಗಳೂ ಆರಾಮಾಗಿದ್ದಾರೆ. ನೀವೇ ಹೇಳಿ ಏನು ನಡೆಯುತ್ತಿದೆ? ಯಾರ ಮನೆಯನ್ನೂ ಕೆಡವುತ್ತಿಲ್ಲ. ಯಾರನ್ನು ಬಂಧಿಸಲಾಗಿದೆಯೋ, ಅವರನ್ನು ಪೊಲೀಸ್ ಕಸ್ಟಡಿಯಲ್ಲೂ ಇಟ್ಟಿಲ್ಲ ಎಂದು ಎಐಎಐಎಂ (ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತಿಹಾದುಲ್ ಮುಸ್ಲಿಮೀನ್) ಅಧ್ಯಕ್ಷ ಹಾಗೂ ಸಂಸದ ಅಸಾದುದ್ದೀನ್ ಓವೈಸಿ ಅವರು ಸುದ್ದಿಗಾರರೊಂದಿಗೆ ಮಾತನಾಡುವಾಗ ಟೀಕಿಸಿದರು.