ಪೊಲೀಸರಿಂದ ಪ್ರಕರಣ ಮುಚ್ಚಿಹಾಕಲಾಗುತ್ತಿದೆ ಎಂದು ಮೃತ ಯುವಕನ ಸಂಬಂಧಿಕರ ಆರೋಪ

ಸಾಂಗ್ಲಿ – ಮೂಲತಃ ಸಾಂಗ್ಲಿಯವನಾಗಿದ್ದು ಪುಣೆಯಲ್ಲಿ ಉದ್ಯೋಗದಲ್ಲಿದ್ದ ದುರ್ವಾಂಕ ಶೇವಾಳೆ ಎಂಬ 19 ವರ್ಷದ ಹಿಂದು ಯುವಕ ಕೊಲ್ಲಾಪುರದ ಮುಸ್ಲಿಂ ತರುಣಿಯೊಬ್ಬಳನ್ನು ಪ್ರೀತಿಸಿದ್ದನು. ಇಬ್ಬರೂ ವಿವಾಹವಾಗಲು ನಿರ್ಧರಿಸಿದ್ದರು; ಆದರೆ ಮುಸ್ಲಿಂ ಯುವತಿಯು ವಿವಾಹಕ್ಕಾಗಿ ‘ನಮ್ಮ ಧರ್ಮವನ್ನು ಸ್ವೀಕರಿಸಬೇಕು’ ಎಂಬ ಷರತ್ತನ್ನು ವಿಧಿಸಿದ್ದಳು. ಈ ಷರತ್ತಿನಿಂದಾಗಿ ದುರ್ವಾಂಕ ಕಳೆದ ಕೆಲವು ದಿನಗಳಿಂದ ತೀವ್ರ ಮಾನಸಿಕ ಖಿನ್ನತೆಗೆ ಒಳಗಾಗಿದ್ದನು. ಇದರಿಂದಲೇ ‘ದುರ್ವಾಂಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ’ ಎಂದು ಆತನ ಸಂಬಂಧಿಕರು ಆರೋಪಿಸಿದ್ದಾರೆ.
1. ದುರ್ವಾಂಕ ಕೆಲವು ದಿನಗಳ ಹಿಂದೆ ಸಾಂಗ್ಲಿಗೆ ಬಂದಿದ್ದನು. ಆತನ ಮನೆಯ ಹತ್ತಿರ ವಾಸವಿರುವ ವೃದ್ಧ ಮಹಿಳೆಯೊಬ್ಬರ ಮನೆಗೆ ಕೊಲ್ಲಾಪುರದ ಮುಸ್ಲಿಂ ಯುವತಿಯೊಬ್ಬಳು ಆಗಾಗ್ಗೆ ಬರುತ್ತಿದ್ದಳು. ಆಕೆ ಆ ಮಹಿಳೆಯ ಸಂಬಂಧಿಯಾಗಿದ್ದಳು. ದುರ್ವಾಂಕ್ ನಿಗೆ ಆ ಯುವತಿಯ ಪರಿಚಯವಾಗಿ, ಅವರ ಮಧ್ಯೆ ಪ್ರೇಮಸಂಬಂಧ ಏರ್ಪಟ್ಟಿತ್ತು.
2. ತನ್ನ ಮೊಬೈಲ್ ನಲ್ಲಿ ‘ಬ್ಯಾಲೆನ್ಸ್’ (ಹಣ) ಖಾಲಿಯಾಗಿದ್ದರಿಂದ, ದುರ್ವಾಂಕ್ ತನ್ನ ತಾಯಿಯ ಮೊಬೈಲ್ ನಿಂದ ಆ ಯುವತಿಯನ್ನು ಸಂಪರ್ಕಿಸಿದ್ದನು.
3. ಆ ಇಬ್ಬರ ನಡುವಿನ ಸಂಭಾಷಣೆಯನ್ನು ಪೊಲೀಸರಿಗೆ ತೋರಿಸಿದರೂ, ಪೊಲೀಸರು ಇದುವರೆಗೆ ಯಾವುದೇ ದೃಢವಾದ ಕ್ರಮ ಅಥವಾ ತನಿಖೆಯನ್ನು ಕೈಗೊಂಡಿಲ್ಲ. ಪೊಲೀಸರಿಂದ ಈ ಪ್ರಕರಣವನ್ನು ಮುಚ್ಚಿಹಾಕಲಾಗುತ್ತಿದೆ ಎಂದು ಸಂಬಂಧಿಕರು ಆರೋಪಿಸಿದ್ದಾರೆ.
4. ಈ ಪ್ರಕರಣದಲ್ಲಿ ಸಂಬಂಧಪಟ್ಟ ಯುವಕನ ಸಂಬಂಧಿಕರು ಇದುವರೆಗೆ ಯಾವುದೇ ದೂರು ನೀಡಿಲ್ಲ.
ಮಣ್ಣಿನಿಂದ ತಯಾರಿಸಿದ ಶ್ರೀಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಿ! – ಪ್ರಧಾನಿ
Kota Conversion Racket : ಕೋಟಾ (ರಾಜಸ್ಥಾನ): ಹಿಂದೂ ಮಹಿಳೆಯರ ಮತಾಂತರ, ಲೈಂಗಿಕ ಶೋಷಣೆ
ಪ್ರಾರ್ಥನೆ ಅಥವಾ ಮಂತ್ರಗಳನ್ನು ಹೇಳಲು ವಿದ್ಯಾರ್ಥಿಗಳು ಅಥವಾ ಪೋಷಕರ ಒಪ್ಪಿಗೆ ಅತ್ಯಗತ್ಯ! – IRS Nisha Oraon
Love Jihad Cases : ಕಳೆದ 24 ಗಂಟೆಗಳಲ್ಲಿ ವಿವಿಧ ರಾಜ್ಯಗಳಲ್ಲಿ ಬೆಳಕಿಗೆ ಬಂದ ಲವ್ ಜಿಹಾದ್ನ 9 ಘಟನೆಗಳು !
ಛತ್ತೀಸಗಢದ ಅಲೀಶಾ ಖಾತೂನ್ ಉತ್ತರ ಪ್ರದೇಶದ ಜೋಗೇಂದ್ರ ಸೈನಿಯನ್ನು ವಿವಾಹವಾದರು!
ಅಯೋಧ್ಯೆಯ ಶ್ರೀರಾಮ ಮಂದಿರದಲ್ಲಿನ ಅವ್ಯವಹಾರ ಅತ್ಯಂತ ಗಂಭೀರ ಘಟನೆ! – ನ್ಯಾಯವಾದಿ ವಿಷ್ಣು ಶಂಕರ ಜೈನ್, ಸರ್ವೋಚ್ಚ ನ್ಯಾಯಾಲಯ