ಪಿತೃಪಕ್ಷ(ಮಹಾಲಯ ಪಕ್ಷ)
ಭಾದ್ರಪದ ಕೃಷ್ಣ ಪಕ್ಷಕ್ಕೆ ‘ಪಿತೃಪಕ್ಷ’ ಎನ್ನುತ್ತಾರೆ, ಈ ಪಕ್ಷವು ಪಿತೃಗಳಿಗೆ ಪ್ರಿಯವಾಗಿದೆ. ಈ ಪಕ್ಷದಲ್ಲಿ ಪಿತೃಗಳಿಗೆ ಶ್ರಾದ್ಧ ಮಾಡಿದರೆ ಅವರು ವರ್ಷಪೂರ್ತಿ ತೃಪ್ತರಾಗುತ್ತಾರೆ.
ಭಾದ್ರಪದ ಕೃಷ್ಣ ಪಕ್ಷಕ್ಕೆ ‘ಪಿತೃಪಕ್ಷ’ ಎನ್ನುತ್ತಾರೆ, ಈ ಪಕ್ಷವು ಪಿತೃಗಳಿಗೆ ಪ್ರಿಯವಾಗಿದೆ. ಈ ಪಕ್ಷದಲ್ಲಿ ಪಿತೃಗಳಿಗೆ ಶ್ರಾದ್ಧ ಮಾಡಿದರೆ ಅವರು ವರ್ಷಪೂರ್ತಿ ತೃಪ್ತರಾಗುತ್ತಾರೆ.
ಶ್ರಾದ್ಧದಲ್ಲಿನ ಮಂತ್ರೋಚ್ಚಾರಗಳಲ್ಲಿ ಪಿತೃಗಳಿಗೆ ಗತಿ ನೀಡುವಂತಹ ಸೂಕ್ಷ್ಮಶಕ್ತಿಯು ಒಳಗೊಂಡಿರುತ್ತದೆ; ಅದರಿಂದಾಗಿ ಪಿತೃಗಳಿಗೆ ಗತಿ ಸಿಗಲು ಸಾಧ್ಯವಾಗುತ್ತದೆ.
ಶ್ರಾದ್ಧದಲ್ಲಿ ಪಿಂಡದಾನದ ಮಾಧ್ಯಮದಿಂದ ಪಿತೃಗಳನ್ನು ಆಹ್ವಾನಿಸುತ್ತಾರೆ. ಪಿತೃಗಳ ಅತೃಪ್ತ ಆಸೆಗಳನ್ನು ಪಿಂಡದ ಮೂಲಕ ಪೂರೈಸಲಾಗುತ್ತದೆ. ಪಿತೃಗಳ ಲಿಂಗದೇಹವು ಯಾವ ಸಮಯದಲ್ಲಿ ಪಿಂಡದ ಕಡೆಗೆ ಆಕರ್ಷಿತವಾಗುತ್ತದೆಯೋ ಆಗ ಅದು ರಜ-ತಮಾತ್ಮಕ ಲಹರಿಗಳಿಂದ ತುಂಬಿಕೊಂಡಿರುತ್ತದೆ. ಈ ಲಹರಿಗಳ ಕಡೆಗೆ ಕಾಗೆಯು ಆಕರ್ಷಿತವಾಗುತ್ತದೆ.
‘೨೩.೯.೨೦೧೪ ರಂದು ಎಸ್.ಎಸ್.ಆರ್.ಎಫ್.ನ ಆಸ್ಟ್ರೇಲಿಯಾದ ಸಾಧಕರಾದ ಶ್ರೀ. ಶಾನ್ ಕ್ಲಾರ್ಕ್ ಇವರು ತಮ್ಮ ಪಿತೃಗಳಿಗೆ ಗತಿ ಸಿಗಬೇಕೆಂದು, ಶ್ರಾದ್ಧವಿಧಿಯನ್ನು ಮಾಡಿದ್ದರು. ಶ್ರೀ. ಶಾನ್ ಇವರು ಮಾಡಿದ ಈ ಶ್ರಾದ್ಧದಲ್ಲಿ ಭೋಜನವನ್ನು ಬಡಿಸುವ ಮೊದಲು ತೆಗೆದ ಛಾಯಾಚಿತ್ರದಲ್ಲಿ ವಾತಾವರಣದಲ್ಲಿ ಅತ್ಯಂತ ಕಡಿಮೆ ಪ್ರಮಾಣದಲ್ಲಿ, ಅಂದರೆ ತೀರಾ ಒಂದು-ಎರಡು ಲಿಂಗದೇಹಗಳು (ಆರ್ಬ್ಸ್) ಕಂಡು ಬಂದವು
ಈ ವರ್ಷ ೨ ರಿಂದ ೧೭ ಸೆಪ್ಟೆಂಬರ್ ೨೦೨೦ ಇದು ಪಿತೃಪಕ್ಷದ ಕಾಲವಾಗಿದೆ. ಈ ಕಾಲಾವಧಿಯಲ್ಲಿ ಮಹಾಲಯ ಶ್ರಾದ್ಧವನ್ನು ಮಾಡುವವರಿಗೆ ಆಗುವ ಆಧ್ಯಾತ್ಮಿಕ ಸ್ತರದ ಪರಿಣಾಮವನ್ನು ವೈಜ್ಞಾನಿಕ ದೃಷ್ಟಿಯಲ್ಲಿ ಅಧ್ಯಯನ ಮಾಡಲು ‘ಯುನಿವರ್ಸಲ್ ಔರಾ ಸ್ಕ್ಯಾನರ್ (ಯು.ಎ.ಎಸ್.) ಈ ಉಪಕರಣದ ಮೂಲಕ ಪರೀಕ್ಷಣೆ ಮಾಡಲಾಯಿತು.
‘ಭಾದ್ರಪದ ಕೃಷ್ಣ ಪಕ್ಷ ಪ್ರತಿಪದಾದಿಂದ ಭಾದ್ರಪದ ಅಮಾವಾಸ್ಯೆ (೨ ರಿಂದ ೧೭ ಸಪ್ಟೆಂಬರ್ ೨೦೨೦) ಈ ಅವಧಿಯಲ್ಲಿ ಪಿತೃಪಕ್ಷವಿದೆ. ‘ಎಲ್ಲ ಪಿತೃಗಳು ತೃಪ್ತರಾಗಬೇಕು ಹಾಗೂ ಸಾಧನೆಗಾಗಿ ಅವರ ಆಶೀರ್ವಾದ ಸಿಗಬೇಕೆಂದು, ಪಿತೃಪಕ್ಷದಲ್ಲಿ ಎಲ್ಲರೂ ಮಹಾಲಯ ಶ್ರಾದ್ಧವನ್ನು ಮಾಡಬೇಕು.
ಭಾದ್ರಪದ ಅಮಾವಾಸ್ಯೆಯಂದು ನಮ್ಮ ಕುಲದಲ್ಲಿದ್ದ ಎಲ್ಲ ಪಿತೃಗಳನ್ನು ಉದ್ದೇಶಿಸಿ ಶ್ರಾದ್ಧ ಮಾಡಲಾಗುತ್ತದೆ. ಆದುದರಿಂದ ಈ ಅಮಾವಾಸ್ಯೆಯನ್ನು ಸರ್ವಪಿತ್ರೀ ಅಮಾವಾಸ್ಯೆ ಎಂದು ಕರೆಯಲಾಗಿದೆ. ಪಿತೃಪಕ್ಷದ ಅಮಾವಾಸ್ಯೆಗೆ ‘ಸರ್ವಪಿತ್ರೀ ಅಮಾವಾಸ್ಯೆ ಎನ್ನುತ್ತಾರೆ. ಈ ತಿಥಿಯಂದು ಎಲ್ಲರೂ ಶ್ರಾದ್ಧ ಮಾಡುವುದು ಅತ್ಯಂತ ಆವಶ್ಯಕವಾಗಿದೆ; ಏಕೆಂದರೆ ಪಿತೃಪಕ್ಷದಲ್ಲಿ ಇದು ಕೊನೆಯ ತಿಥಿಯಾಗಿದೆ.
ಶ್ರಾದ್ಧದಲ್ಲಿ ಪಿತೃಗಳ ಹೆಸರುಗಳನ್ನು ಹೇಳುವುದರಿಂದ ಮಂತ್ರಗಳ ಸಹಾಯದಿಂದ ಪ್ರಕ್ಷೇಪಿತವಾಗುವ ಶಬ್ದಕಂಪನಗಳು ವಾಯುಮಂಡಲದಲ್ಲಿ ಅಲೆದಾಡುತ್ತಿರುವ ಲಿಂಗದೇಹಗಳ ವಾಸನಾಮಯಕೋಶವನ್ನು ಭೇದಿಸಿ ಅವುಗಳನ್ನು ಶ್ರಾದ್ಧದ ಸ್ಥಳಕ್ಕೆ ಆಕರ್ಷಿಸುತ್ತವೆ. ಇದರಿಂದ ಆಯಾ ಗೋತ್ರದ ಪಿತೃಗಳು ಆಯಾ ಸ್ಥಳಗಳಿಗೆ ಬಂದು ಶ್ರಾದ್ಧದಲ್ಲಿನ ಆಹಾರವನ್ನು ಸೇವಿಸಿ ತೃಪ್ತರಾಗುತ್ತಾರೆ.
‘ಶ್ರಾದ್ಧದ ಸಮಯದಲ್ಲಿ ಬಂದ ಅತಿಥಿಗೆ ಭೋಜನ ಕೊಡುವುದೆಂದರೆ ಪಿತೃಗಳನ್ನು ತೃಪ್ತಗೊಳಿಸುವುದು; ಏಕೆಂದರೆ ಯೋಗಿಗಳು, ಸಿದ್ಧಪುರುಷರು ಮತ್ತು ದೇವತೆಗಳು ಪೃಥ್ವಿಯ ಮೇಲೆ ಶ್ರಾದ್ಧವಿಧಿಗಳನ್ನು ನೋಡಲು ತಿರುಗಾಡುತ್ತಿರುತ್ತಾರೆ, ಎಂದು ಪುರಾಣದಲ್ಲಿ ಹೇಳಲಾಗಿದೆ. (ಆದುದರಿಂದಲೇ ‘ಅತಿಥಿ ದೇವೋ ಭವ |, ಎಂದು ಹೇಳಲಾಗಿದೆ.)
ಪಿತೃಪಕ್ಷದಲ್ಲಿ ‘ಪಿತೃಋಣ’ವನ್ನು ತೀರಿಸಲು ಶ್ರಾದ್ಧವಿಧಿಯನ್ನು ಮಾಡುವುದು ಆವಶ್ಯಕವಾಗಿರುತ್ತದೆ; ಆದರೆ ಪ್ರಸ್ತುತ ಅನೇಕ ಹಿಂದೂಗಳಲ್ಲಿರುವ ಧರ್ಮಶಿಕ್ಷಣದ ಅಭಾವ, ತಥಾಕಥಿತ ಬುದ್ಧಿಜೀವಿಗಳ ಅಪಪ್ರಚಾರ ಹಾಗೂ ಹಿಂದೂ ಧರ್ಮವನ್ನು ಕೀಳಾಗಿ ಕಾಣುವ ವೃತ್ತಿಯಿಂದಾಗಿ ಶ್ರಾದ್ಧವಿಧಿಯತ್ತ ದುರ್ಲಕ್ಷ ಮಾಡುವ ಪ್ರಮಾಣ ಹೆಚ್ಚಾಗುತ್ತಿದೆ.