ತ್ರ್ಯಂಬಕೇಶ್ವರದಲ್ಲಿ ಸಿಂಹಸ್ಥಪರ್ವದ ಮೊದಲನೇ ರಾಜಯೋಗಿ ಸ್ನಾನ ಆಗಸ್ಟ್ ೨, ೨೦೨೭ ರಂದು ನಡೆಯುವುದು !
ಶ್ರೀ ಪಂಚಶಂಭೂ ದಶನಾಮ ಜುನಾ ಆಖಾಡ್ ದ ಹರಿಗಿರಿ ಮಹಾರಾಜ ಇವರ ಉಪಸ್ಥಿತಿಯಲ್ಲಿ ಜುನಾ ಅಖಾಡಾದ ಸಾಧು ಮಹಂತರ ಬೈಠಕ್ ನಡೆಯಿತು. ಈ ಬೈಠಕಿನಲ್ಲಿ ವಿವಿಧ ನಿರ್ಣಯಗಳನ್ನು ತೆಗೆದುಕೊಳ್ಳಲಾಯಿತು.
ಶ್ರೀ ಪಂಚಶಂಭೂ ದಶನಾಮ ಜುನಾ ಆಖಾಡ್ ದ ಹರಿಗಿರಿ ಮಹಾರಾಜ ಇವರ ಉಪಸ್ಥಿತಿಯಲ್ಲಿ ಜುನಾ ಅಖಾಡಾದ ಸಾಧು ಮಹಂತರ ಬೈಠಕ್ ನಡೆಯಿತು. ಈ ಬೈಠಕಿನಲ್ಲಿ ವಿವಿಧ ನಿರ್ಣಯಗಳನ್ನು ತೆಗೆದುಕೊಳ್ಳಲಾಯಿತು.
ಉತ್ತರಾಖಂಡದ ಹರಿದ್ವಾರದಲ್ಲಿ ಏಪ್ರಿಲ್ ತಿಂಗಳಲ್ಲಿ ನಡೆದ ಕುಂಭಮೇಳದ ಆಯೋಜನೆಯ ಸಮಯದಲ್ಲಿ ಕೊರೋನಾ ಪರೀಕ್ಷಣೆಯ ಬಗ್ಗೆ ನಡೆದ ಭ್ರಷ್ಟಾಚಾರದ ಪ್ರಕರಣದಲ್ಲಿ ಕಾರ್ಯನಿರ್ವಾಹಕ ನಿರ್ದೇಶನಾಲಯವು ಇಲ್ಲಿಯ ಕೆಲವು ಪೆಥಾಲಾಜಿ ಪ್ರಯೋಗಶಾಲೆಗಳ ಮೇಲೆ ದಾಳಿ ನಡೆಸಿದೆ.
‘ದೇಶದಲ್ಲಿ ಕೊರೊನಾದ ೨ ನೇ ಅಲೆಯಿರುವಾಗ ಕುಂಭಮೇಳದ ಆಯೋಜನೆಯನ್ನು ಮಾಡಬೇಕಾಗಿತ್ತೇ ?, ‘ಅದನ್ನು ಸಾಂಕೇತಿಕವಾಗಿ ಮಾಡಲು ಸಾಧ್ಯವಾಗುತ್ತಿರಲಿಲ್ಲವೇ ?, ಎಂದು ಕೆಲವು ಪ್ರಗತಿಪರ ಹಿಂದೂಗಳು ಪ್ರಶ್ನಿಸಿದ್ದರು. ‘ಕುಂಭಮೇಳದಲ್ಲಿ ಕೊರೊನಾ ಸೋಂಕು ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಕುಂಭಮೇಳವನ್ನು ಸಾಂಕೇತಿಕವಾಗಿ ಆಚರಿಸಬೇಕು, ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಇವರು ಮನವಿ ಮಾಡಿದ್ದರು.
ಇಲ್ಲಿ ಕೊರೊನಾದ ವಿಷಯದಲ್ಲಿ ಜನವರಿ ೧ ರಿಂದ ಏಪ್ರಿಲ್ ೩೦ ರವರೆಗೆ ಒಟ್ಟು ೮ ಲಕ್ಷದ ೯೧ ಸಾವಿರದ ಆರ್.ಟಿ.ಪಿ.ಸಿ.ಆರ್.ಗಳ ಪರೀಕ್ಷಣೆ ಮಾಡಲಾಗಿತ್ತು. ಈ ಪೈಕಿ ೧೯೫೪ ಪರೀಕ್ಷೆಗಳು (ಶೇ ೦.೨) ಪಾಸಿಟಿವ್ ಬಂದಿದೆ. ಕುಂಭಮೇಳಕ್ಕೆ ೧೬೦೦೦ ಪೊಲೀಸರನ್ನು ನಿಯೋಜಿಸಲಾಗಿತ್ತು. ಏಪ್ರಿಲ್ ೩೦ ರ ಹೊತ್ತಿಗೆ, ಅವರಲ್ಲಿ ಕೇವಲ ೮೮ ಅಂದರೆ ಶೇಕಡಾ ೦.೫ ರಷ್ಟು ಮಾತ್ರ ಪೊಲೀಸರಿಗೆ ಕೊರೊನಾದ ಸೋಂಕು ತಗಲಿತ್ತು.