ವಕ್ಫ್ ಮಂಡಳಿಯ ಸದಸ್ಯರಾಗಲು ವಕೀಲರ ಪರಿಷತ್ತಿನ ಸದಸ್ಯರು ಮಾತ್ರ ಅರ್ಹರು!

ಮಣಿಪುರ ಉಚ್ಚನ್ಯಾಯಾಲಯದ ಆದೇಶ ರದ್ದುಗೊಳಿಸಿದ ಸರ್ವೋಚ್ಚ ನ್ಯಾಯಾಲಯ

ನವದೆಹಲಿ – ರಾಜ್ಯ ವಕೀಲರ ಪರಿಷತ್ತಿನ ಸಕ್ರಿಯ ಸದಸ್ಯರು ಮಾತ್ರ ರಾಜ್ಯ ವಕ್ಫ್ ಮಂಡಳಿಯ ಸದಸ್ಯರಾಗಬಹುದು ಎಂದು ಸರ್ವೋಚ್ಚ ನ್ಯಾಯಾಲಯ ತೀರ್ಪು ನೀಡಿದೆ. ವಕ್ಫ್ ಮಂಡಳಿಯ ಸದಸ್ಯರಾಗಲು ಸಂಬಂಧಪಟ್ಟ ವ್ಯಕ್ತಿಯು ಮುಸಲ್ಮಾನರಾಗಿರಬೇಕು ಮತ್ತು ಸಂಸತ್ತು, ರಾಜ್ಯ ವಿಧಾನಸಭೆ ಅಥವಾ ವಕೀಲರ ಪರಿಷತ್ತಿನ ಸದಸ್ಯರಾಗಿ ಸಕ್ರಿಯ ಹುದ್ದೆಯನ್ನು ಹೊಂದಿರಬೇಕು.

1. ಮಹಮ್ಮದ್ ಫಿರೋಜ್ ಅಹ್ಮದ್ ಖಾಲಿದ್ ಅವರನ್ನು ಫೆಬ್ರವರಿ 2023 ರಂದು ಮಣಿಪುರ ವಕ್ಫ್ ಮಂಡಳಿಯ ಸದಸ್ಯರಾಗಿ ನೇಮಿಸಲಾಯಿತು. ಡಿಸೆಂಬರ್ 2022 ರ ಚುನಾವಣೆಯಲ್ಲಿ ವಕೀಲರ ಪರಿಷತ್ತಿನ ಸದಸ್ಯರಾದ ನಂತರ ಅವರು ವಕ್ಫ್ ಮಂಡಳಿಗೆ ಸೇರಿದರು. ಅವರು ವಕೀಲರ ಪರಿಷತ್ತಿನ ಚುನಾವಣೆಯಲ್ಲಿ ಸೋತ ವ್ಯಕ್ತಿಯ ಸ್ಥಾನವನ್ನು ಪಡೆದಿದ್ದರು.

2. ಉಚ್ಚ ನ್ಯಾಯಾಲಯವು ಖಾಲಿದ್ ಅವರ ನೇಮಕಾತಿಯನ್ನು ಎತ್ತಿಹಿಡಿದಿತ್ತು. ವಕೀಲರ ಪರಿಷತ್ತಿನಿಂದ ಅವರನ್ನು ತೆಗೆದುಹಾಕುವುದರಿಂದ ವಕ್ಫ್ ಮಂಡಳಿಯ ಸದಸ್ಯತ್ವವು ಕೊನೆಗೊಳ್ಳುತ್ತದೆ ಎಂದು ಕಾನೂನಿನಲ್ಲಿ ಸ್ಪಷ್ಟವಾಗಿಲ್ಲ ಎಂದು ನ್ಯಾಯಾಲಯ ಹೇಳಿತು.

3. ಈ ತೀರ್ಪಿನ ಬಗ್ಗೆ ಸರ್ವೋಚ್ಚ ನ್ಯಾಯಾಲಯವು, ವಕ್ಫ್ ಕಾಯಿದೆಯ ಪ್ರಕಾರ, ವಕೀಲರ ಪರಿಷತ್ತಿನ ಸದಸ್ಯತ್ವವು ಕೊನೆಗೊಂಡರೆ, ವಕ್ಫ್ ಮಂಡಳಿಯ ಸದಸ್ಯತ್ವವು ಸ್ವಯಂಚಾಲಿತವಾಗಿ ರದ್ದಾಗುತ್ತದೆ ಎಂದು ಸ್ಪಷ್ಟನೆ ನೀಡಿದೆ.