
ರಾಯಪುರ (ಛತ್ತೀಸಗಡ) – ಮಧ್ಯಪ್ರದೇಶದ ಕ್ಯಾಬಿನೆಟ್ ಸಚಿವ ಕೈಲಾಶ ವಿಜಯವರ್ಗೀಯರವರು ರಾಯಪುರ ವಿಮಾನ ನಿಲ್ದಾಣದಲ್ಲಿ ರಾಹುಲ ಗಾಂಧಿಯವರ ಕುರಿತು, `ಒಬ್ಬ ಗಾಂಧಿ ದೇಶದ ಬಡವರಿಗಾಗಿ ಬಟ್ಟೆಗಳನ್ನು ತ್ಯಜಿಸಿ ಬದುಕುತ್ತಿದ್ದರು, ಅವರು ಮೇಕೆಯ ಹಾಲು ಕುಡಿಯುತ್ತಿದ್ದರು. ಈ ಗಾಂಧಿ (ರಾಹುಲ ಗಾಂಧಿ) ರಜಾ ದಿನಗಳಲ್ಲಿ ಥೈಲ್ಯಾಂಡಿಗೆ ಹೋಗುತ್ತಾರೆ. ಆ ಗಾಂಧಿಯವರು ಗೋವನ್ನು ಪೂಜಿಸುತ್ತಿದ್ದರು, ಈ ಗಾಂಧಿ ಗೋಮಾಂಸ ತಿನ್ನುತ್ತಾರೆ.’ ಎಂದು ಹೇಳಿದರು. ಛತ್ತೀಸಗಡ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ ದೀಪಕ ಬೈಜರವರು ರಾಹುಲ ಗಾಂಧಿಯವರನ್ನು ‘ಗಾಂಧಿ ಕಿ ಆಂಧಿ ಹೈ (ಗಾಂಧಿಯವರ ಬಿರುಗಾಳಿ) ಎಂದು ಉಲ್ಲೇಖಿಸಿದ್ದರು, ವಿಜಯವರ್ಗೀಯರವರು ಇದಕ್ಕೆ ಪ್ರತಿಕ್ರಿಯಿಸುತ್ತ ಈ ಮೇಲಿನ ಹೇಳಿಕೆಯನ್ನು ನೀಡಿದರು. ರಾಯಪುರ ವಿಮಾನ ನಿಲ್ದಾಣದಲ್ಲಿ ಮಾತನಾಡುತ್ತಿರುವಾಗ ವಿಜಯವರ್ಗೀಯರವರು, `ದೀಪಕ ಬೈಜರವರು ಯಾವ ಗಾಂಧಿಯ ಬಗ್ಗೆ ಮಾತನಾಡುತ್ತಿದ್ದಾರೆ ? ದೇಶಕ್ಕಾಗಿ ಬದುಕಿದ ಗಾಂಧಿಯ ಬಗ್ಗೆನಾ ಅಥವಾ ಹಿಂದಿಯನ್ನೂ ಸರಿಯಾಗಿ ಬರೆಯಲು ಸಹ ಬಾರದ ಗಾಂಧಿಯ ಬಗ್ಗೆನಾ?’ ಎಂದು ಪ್ರಶ್ನಿಸಿದರು.
ಕೈಲಾಶ ವಿಜಯವರ್ಗೀಯರವರು, ಈ ಗಾಂಧಿ ದೇಶಕ್ಕೆ ನಕಾರಾತ್ಮಕವಾಗಿದ್ದಾರೆ. ರಾಹುಲ ಗಾಂಧಿ ವಿದೇಶಕ್ಕೆ ಹೋಗಿ ಭಾರತದ ವಿರುದ್ಧ ಹೇಳಿಕೆಗಳನ್ನು ನೀಡುವ ರೀತಿ ದುರದೃಷ್ಟಕರ, ಎಂದು ಹೇಳಿದರು.
ಯುರೋಪಿಯನ್ ದೇಶಗಳಂತೆ ಭಾರತದ ಮಕ್ಕಳಲ್ಲೂ ಸ್ಥೂಲಕಾಯದ ಅಪಾಯ ಹೆಚ್ಚುತ್ತಿದೆ!
ದೇವಸ್ಥಾನದ ಹಣವನ್ನು ಧಾರ್ಮಿಕ ಕಾರ್ಯಗಳಿಗಾಗಿಯೇ ಖರ್ಚು ಮಾಡುವ ತಮಿಳುನಾಡು ಸರಕಾರದ ನೀತಿಯನ್ನು ಟೀಕಿಸಿದ ಹಿಂದೂದ್ವೇಷಿ ಉದಯನಿಧಿ ಸ್ಟಾಲಿನ್
ಮುಂಬಯಿ ಲೋಕಲ್ ರೈಲಿನಲ್ಲಿ ಕ್ಷುಲ್ಲಕ ಕಾರಣಕ್ಕೆ ಪ್ರಯಾಣಿಕನ ಹತ್ಯೆ; ಆರೋಪಿ ಬಂಧನ
ಮಹಾರಾಷ್ಟ್ರ : ಅಕೋಲಾ ಮಹಾನಗರ ಪಾಲಿಕೆಯ ಸ್ಥಾಯಿ ಸಮಿತಿ ಸಭಾಂಗಣಕ್ಕೆ ನೀಡಲಾದ ‘ಟಿಪ್ಪು ಸುಲ್ತಾನ್’ ಹೆಸರು ಅಕ್ರಮ!
ಮಹಾರಾಷ್ಟ್ರ : ದೇವಸ್ಥಾನ ಭೂಮಿಗೆ ಸಂಬಂಧಿಸಿದಂತೆ ಸರಕಾರಿ ದೇವಸ್ಥಾನ ಸಮಿತಿಯ ಮೊದಲ ಸಭೆ ಮುಕ್ತಾಯ!
ಕಳೆದ 24 ಗಂಟೆಗಳಲ್ಲಿ ಲವ್ ಜಿಹಾದ್ನ 4 ಮತ್ತು ಮತಾಂತರದ 2 ಘಟನೆಗಳು ಬೆಳಕಿಗೆ! : Love Jihad