ರಾಯಪುರ (ಛತ್ತೀಸಗಡ) – ಮಧ್ಯಪ್ರದೇಶದ ಕ್ಯಾಬಿನೆಟ್ ಸಚಿವ ಕೈಲಾಶ ವಿಜಯವರ್ಗೀಯರವರು ರಾಯಪುರ ವಿಮಾನ ನಿಲ್ದಾಣದಲ್ಲಿ ರಾಹುಲ ಗಾಂಧಿಯವರ ಕುರಿತು, `ಒಬ್ಬ ಗಾಂಧಿ ದೇಶದ ಬಡವರಿಗಾಗಿ ಬಟ್ಟೆಗಳನ್ನು ತ್ಯಜಿಸಿ ಬದುಕುತ್ತಿದ್ದರು, ಅವರು ಮೇಕೆಯ ಹಾಲು ಕುಡಿಯುತ್ತಿದ್ದರು. ಈ ಗಾಂಧಿ (ರಾಹುಲ ಗಾಂಧಿ) ರಜಾ ದಿನಗಳಲ್ಲಿ ಥೈಲ್ಯಾಂಡಿಗೆ ಹೋಗುತ್ತಾರೆ. ಆ ಗಾಂಧಿಯವರು ಗೋವನ್ನು ಪೂಜಿಸುತ್ತಿದ್ದರು, ಈ ಗಾಂಧಿ ಗೋಮಾಂಸ ತಿನ್ನುತ್ತಾರೆ.’ ಎಂದು ಹೇಳಿದರು. ಛತ್ತೀಸಗಡ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ ದೀಪಕ ಬೈಜರವರು ರಾಹುಲ ಗಾಂಧಿಯವರನ್ನು ‘ಗಾಂಧಿ ಕಿ ಆಂಧಿ ಹೈ (ಗಾಂಧಿಯವರ ಬಿರುಗಾಳಿ) ಎಂದು ಉಲ್ಲೇಖಿಸಿದ್ದರು, ವಿಜಯವರ್ಗೀಯರವರು ಇದಕ್ಕೆ ಪ್ರತಿಕ್ರಿಯಿಸುತ್ತ ಈ ಮೇಲಿನ ಹೇಳಿಕೆಯನ್ನು ನೀಡಿದರು. ರಾಯಪುರ ವಿಮಾನ ನಿಲ್ದಾಣದಲ್ಲಿ ಮಾತನಾಡುತ್ತಿರುವಾಗ ವಿಜಯವರ್ಗೀಯರವರು, `ದೀಪಕ ಬೈಜರವರು ಯಾವ ಗಾಂಧಿಯ ಬಗ್ಗೆ ಮಾತನಾಡುತ್ತಿದ್ದಾರೆ ? ದೇಶಕ್ಕಾಗಿ ಬದುಕಿದ ಗಾಂಧಿಯ ಬಗ್ಗೆನಾ ಅಥವಾ ಹಿಂದಿಯನ್ನೂ ಸರಿಯಾಗಿ ಬರೆಯಲು ಸಹ ಬಾರದ ಗಾಂಧಿಯ ಬಗ್ಗೆನಾ?’ ಎಂದು ಪ್ರಶ್ನಿಸಿದರು.
ಕೈಲಾಶ ವಿಜಯವರ್ಗೀಯರವರು, ಈ ಗಾಂಧಿ ದೇಶಕ್ಕೆ ನಕಾರಾತ್ಮಕವಾಗಿದ್ದಾರೆ. ರಾಹುಲ ಗಾಂಧಿ ವಿದೇಶಕ್ಕೆ ಹೋಗಿ ಭಾರತದ ವಿರುದ್ಧ ಹೇಳಿಕೆಗಳನ್ನು ನೀಡುವ ರೀತಿ ದುರದೃಷ್ಟಕರ, ಎಂದು ಹೇಳಿದರು.