
ರಾಯಪುರ (ಛತ್ತೀಸಗಡ) – ಮಧ್ಯಪ್ರದೇಶದ ಕ್ಯಾಬಿನೆಟ್ ಸಚಿವ ಕೈಲಾಶ ವಿಜಯವರ್ಗೀಯರವರು ರಾಯಪುರ ವಿಮಾನ ನಿಲ್ದಾಣದಲ್ಲಿ ರಾಹುಲ ಗಾಂಧಿಯವರ ಕುರಿತು, `ಒಬ್ಬ ಗಾಂಧಿ ದೇಶದ ಬಡವರಿಗಾಗಿ ಬಟ್ಟೆಗಳನ್ನು ತ್ಯಜಿಸಿ ಬದುಕುತ್ತಿದ್ದರು, ಅವರು ಮೇಕೆಯ ಹಾಲು ಕುಡಿಯುತ್ತಿದ್ದರು. ಈ ಗಾಂಧಿ (ರಾಹುಲ ಗಾಂಧಿ) ರಜಾ ದಿನಗಳಲ್ಲಿ ಥೈಲ್ಯಾಂಡಿಗೆ ಹೋಗುತ್ತಾರೆ. ಆ ಗಾಂಧಿಯವರು ಗೋವನ್ನು ಪೂಜಿಸುತ್ತಿದ್ದರು, ಈ ಗಾಂಧಿ ಗೋಮಾಂಸ ತಿನ್ನುತ್ತಾರೆ.’ ಎಂದು ಹೇಳಿದರು. ಛತ್ತೀಸಗಡ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ ದೀಪಕ ಬೈಜರವರು ರಾಹುಲ ಗಾಂಧಿಯವರನ್ನು ‘ಗಾಂಧಿ ಕಿ ಆಂಧಿ ಹೈ (ಗಾಂಧಿಯವರ ಬಿರುಗಾಳಿ) ಎಂದು ಉಲ್ಲೇಖಿಸಿದ್ದರು, ವಿಜಯವರ್ಗೀಯರವರು ಇದಕ್ಕೆ ಪ್ರತಿಕ್ರಿಯಿಸುತ್ತ ಈ ಮೇಲಿನ ಹೇಳಿಕೆಯನ್ನು ನೀಡಿದರು. ರಾಯಪುರ ವಿಮಾನ ನಿಲ್ದಾಣದಲ್ಲಿ ಮಾತನಾಡುತ್ತಿರುವಾಗ ವಿಜಯವರ್ಗೀಯರವರು, `ದೀಪಕ ಬೈಜರವರು ಯಾವ ಗಾಂಧಿಯ ಬಗ್ಗೆ ಮಾತನಾಡುತ್ತಿದ್ದಾರೆ ? ದೇಶಕ್ಕಾಗಿ ಬದುಕಿದ ಗಾಂಧಿಯ ಬಗ್ಗೆನಾ ಅಥವಾ ಹಿಂದಿಯನ್ನೂ ಸರಿಯಾಗಿ ಬರೆಯಲು ಸಹ ಬಾರದ ಗಾಂಧಿಯ ಬಗ್ಗೆನಾ?’ ಎಂದು ಪ್ರಶ್ನಿಸಿದರು.
ಕೈಲಾಶ ವಿಜಯವರ್ಗೀಯರವರು, ಈ ಗಾಂಧಿ ದೇಶಕ್ಕೆ ನಕಾರಾತ್ಮಕವಾಗಿದ್ದಾರೆ. ರಾಹುಲ ಗಾಂಧಿ ವಿದೇಶಕ್ಕೆ ಹೋಗಿ ಭಾರತದ ವಿರುದ್ಧ ಹೇಳಿಕೆಗಳನ್ನು ನೀಡುವ ರೀತಿ ದುರದೃಷ್ಟಕರ, ಎಂದು ಹೇಳಿದರು.
‘ಭಂಡಾರ ಎಂದರೆ ಶುದ್ಧ ಅರಿಶಿನ’ ಎಂದು ಘೋಷಿಸುವಂತೆ ಅನ್ನ ಮತ್ತು ಔಷಧ ಆಡಳಿತಕ್ಕೆ (FDA) ಆಗ್ರಹ!
ಪಾನ್ ಮಸಾಲಾ, ಗುಟ್ಕಾ ಮತ್ತು ಕಲಬೆರಕೆ ಆಹಾರ ಪದಾರ್ಥಗಳ ಒಂದೂವರೆ ಕೋಟಿಗೂ ಹೆಚ್ಚು ಮೌಲ್ಯದ ದಾಸ್ತಾನು ವಶ
‘ಲವ್ ಜಿಹಾದ್’, ‘ಲ್ಯಾಂಡ್ ಜಿಹಾದ್’ ಇವೆಲ್ಲಾ ಮೂರ್ಖತನದ ಸಂಗತಿಗಳಂತೆ !
ತುಮಕೂರಿನಲ್ಲಿ ಶ್ರೀರಾಮಮಂದಿರದ ಹತ್ತಿರ ಅಲ್ಪಸಂಖ್ಯಾತರ ವಸತಿಗೃಹ ನಿರ್ಮಿಸುವ ಸಂಚು !
ನಾಗಪುರ: ಮಾನಸಿಕ ಒತ್ತಡದಿಂದಾಗಿ ‘ನೀಟ್’ ಪರೀಕ್ಷೆಯ ವಿದ್ಯಾರ್ಥಿನಿ ಆತ್ಮಹತ್ಯೆ
ರಾಜ್ಯದಲ್ಲಿ ಮುಸಲ್ಮಾನರಿಗೆ 5 ಸಚಿವ ಸ್ಥಾನ ನೀಡದಿದ್ದರೆ ನಮ್ಮ ಶಕ್ತಿಯನ್ನು ತೋರಿಸುತ್ತೇವೆ !