Murshidabad Violence Yogi Adityanath : ಹಿಂದೆ ಉತ್ತರಪ್ರದೇಶವು ಮುರ್ಷಿದಾಬಾದ್‌ನಂತೆ ಉರಿಯುತ್ತಿತ್ತು; ಆದರೆ ಇಂದು ಗಲಭೆ ಮುಕ್ತವಾಗಿದೆ! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ

ಲಕ್ಷ್ಮಣಪುರಿ (ಉತ್ತರಪ್ರದೇಶ) – ಇಂದು ಮುರ್ಷಿದಾಬಾದ ಉರಿಯುತ್ತಿದೆ ಎಂಬುದನ್ನು ನೆನಪಿಡಿ, 2017 ಕ್ಕಿಂತ ಮೊದಲು ಉತ್ತರಪ್ರದೇಶದಲ್ಲೂ ಇದೇ ರೀತಿ ನಡೆಯುತ್ತಿತ್ತು; ಆದರೆ ಇಂದು ಉತ್ತರಪ್ರದೇಶವು ಗಲಭೆ ಮುಕ್ತವಾಗಿದೆ ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಇಲ್ಲಿ ‘ಅಮರ್ ಉಜಾಲಾ’ ಹಿಂದಿ ದಿನಪತ್ರಿಕೆಯ ಕಾರ್ಯಕ್ರಮವೊಂದರಲ್ಲಿ ಹೇಳಿದ್ದಾರೆ.

ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಮಾತು ಮುಂದುವರೆಸಿ, 2017 ಕ್ಕಿಂತ ಮೊದಲು, ಉತ್ತರಪ್ರದೇಶದ ಮುಜಫ್ಫರನಗರ ಗಲಭೆ 6 ತಿಂಗಳು ನಡೆಯಿತು. ಬರೇಲಿಯಲ್ಲಿ ಒಂದು ವರ್ಷದಲ್ಲಿ 4 ಗಲಭೆಗಳು ನಡೆದವು. ಅಲಿಘಡ, ಲಕ್ಷ್ಮಣಪುರಿ, ಕಾನ್ಪುರ ಮತ್ತು ಗಲಭೆಗಳು ನಡೆಯದ ಜಿಲ್ಲೆಗಳೇ ಇರಲಿಲ್ಲ. ಹಬ್ಬವು ಸಮೀಪಿಸಿದಾಗ, ಸಜ್ಜನರು ಮತ್ತು ನಾಗರಿಕರು ಗಲಭೆಗಳಿಗೆ ಹೆದರುತ್ತಿದ್ದರಿಂದ ಹಬ್ಬದ ಉತ್ಸಾಹ ಕಡಿಮೆಯಾಗುತ್ತಿತ್ತು.

ಗಲಭೆಗಳು ಸಂಭವಿಸುತ್ತವೆ ಮತ್ತು ವ್ಯಾಪಾರಿಗಳ ಸರಕು ಸುಟ್ಟುಹೋಗುತ್ತದೆ ಎಂಬ ಭಯದಿಂದ ವ್ಯಾಪಾರಿಗಳು ವ್ಯಾಪಾರ ಮಾಡಲು ಹೆದರುತ್ತಿದ್ದರು. ಇಂದು ಗಲಭೆಗಳು ನಡೆಯುತ್ತಿಲ್ಲ, ಇಂದು ಉತ್ತರ ಪ್ರದೇಶವು ಗಲಭೆ ಮುಕ್ತವಾಗಿದೆ. ಇಂದು ಉತ್ತರಪ್ರದೇಶವು ಪ್ರತಿ ಹಬ್ಬವನ್ನು ಉತ್ಸಾಹದಿಂದ ಆಚರಿಸುತ್ತದೆ.

ಕುಂಭಮೇಳಕ್ಕೆ 66 ಕೋಟಿ ಜನರು ಬಂದರು ಒಂದು ಕಳ್ಳತನವೂ ನಡೆಯಲಿಲ್ಲ!

ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಇವರು, ಇಡೀ ಭಾರತವು ಕುಂಭಮೇಳಕ್ಕೆ ಬಂದಿತ್ತು. ಪ್ರಯಾಗರಾಜಗೆ 66 ಕೋಟಿಗೂ ಹೆಚ್ಚು ಭಕ್ತರು ಬಂದಿದ್ದರು. ಎಲ್ಲಿಯೂ ದರೋಡೆ, ಕಳ್ಳತನ, ಅಪಹರಣದ ಘಟನೆಗಳು ನಡೆದಿಲ್ಲ. ಈ ಅವಧಿಯಲ್ಲಿ ಯಾವುದೇ ಕ್ರಿಮಿನಲ್ ಘಟನೆಗಳು ನಡೆದಿಲ್ಲ ಎಂದು ಹೇಳಿದರು.ಉತ್ತರಪ್ರದೇಶ ಮತ್ತು ಪ್ರಯಾಗರಾಜ ಜನರು ವಿವೇಕದ ಛಾಪು ಮೂಡಿಸಿದ್ದಾರೆ. ಕೊನೆಗೆ ಈ ಉತ್ತರಪ್ರದೇಶ ಹೇಗೆ ಬದಲಾಯಿತು? ಇದು ಅದೇ ಉತ್ತರಪ್ರದೇಶವಾಗಿತ್ತು ಅಲ್ಲಿ ಪ್ರತಿ ಎರಡನೇ ಅಥವಾ ಮೂರನೇ ದಿನ ಗಲಭೆಗಳು ನಡೆಯುತ್ತಿದ್ದವು, ಎಂದು ಹೇಳಿದರು.

ಸಂಪಾದಕೀಯ ನಿಲುವು

ಗಲಭೆ ಮುಕ್ತಗೊಳಿಸಲು, ಗಲಭೆ ಮಾಡುವ ಮತಾಂಧ ಮುಸಲ್ಮಾನರ ಕಡಿವಾಣ ಹಾಕಿ ಬಿಗಿಗೊಳಿಸುವುದು ಅವಶ್ಯಕ, ನರೇಂದ್ರ ಮೋದಿ ಅವರು ಗುಜರಾತ ಮುಖ್ಯಮಂತ್ರಿಯಾಗಿದ್ದಾಗ ಅದೇ ರೀತಿ ಮಾಡಿದರು ಮತ್ತು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಮಾಡುತ್ತಿದ್ದಾರೆ. ಇತರ ರಾಜ್ಯಗಳ ಮುಖ್ಯಮಂತ್ರಿಗಳಿಗೆ ಏಕೆ ಸಾಧ್ಯವಾಗುತ್ತಿಲ್ಲ? ಅಲ್ಲಿನ ಹಿಂದೂಗಳು ಅವರನ್ನು ಪ್ರಶ್ನಿಸಬೇಕು!