ಕುನ್ನೂರ್ (ತಮಿಳುನಾಡು) ಇಲ್ಲಿ ಸೇನಾ ಹೆಲಿಕಾಪ್ಟರ್ ಪತನವಾಗಿ ‘ಸಿ.ಡಿ.ಎಸ್.’ ಜನರಲ್ ಬಿಪಿನ್ ರಾವತ್ ಸೇರಿದಂತೆ ೧೩ ಜನರ ಮೃತ್ಯು
ಭಾರತದ ಮೂರೂ ಸೇನಾ ದಳದ ಮುಖ್ಯಸ್ಥರಾಗಿದ್ದ ಜನರಲ್ ಬಿಪಿನ್ ರಾವತ್ ಇವರನ್ನು ಕರೆದೊಯ್ಯುತ್ತಿದ್ದ ಸೇನೆಯ ‘ಎಂ.ಐ. ೧೭ ವಿ ೫’ ಈ ಅತ್ಯಾಧುನಿಕ ಹೆಲಿಕಾಪ್ಟರ್ ಇಲ್ಲಿಯ ನೀಲಗಿರಿ ಬೆಟ್ಟದಲ್ಲಿ ಪತನಗೊಂಡು ಅದಕ್ಕೆ ಬೆಂಕಿ ಹೊತ್ತಿಕೊಂಡಿದ್ದರಿಂದ ಅದರಲ್ಲಿದ್ದ ರಾವತ್ ಸೇರಿದಂತೆ ೧೩ ಮಂದಿ ಸಾವನ್ನಪ್ಪಿದ್ದರು. ಇದರಲ್ಲಿ ರಾವತ್ ಅವರ ಪತ್ನಿಯೂ ಸೇರಿದ್ದಾರೆ. ಈ ಅಪಘಾತದಲ್ಲಿ ನಾಲ್ವರು ಗಾಯಗೊಂಡಿದ್ದಾರೆ.