|
|
ತಮಿಳುನಾಡಿನಲ್ಲಿ ಹಿಂದೂದ್ವೇಷಿ ದ್ರಮುಕ ಸರಕಾರ ಇರುವುದರಿಂದ ಅಲ್ಲಿ ಹಿಂದೂ ದೇವತೆಗಳ ಮೂರ್ತಿಗಳನ್ನು ಭಗ್ನಗೊಳಿಸುವ ಘಟನೆ ಹೆಚ್ಚಾಗುತ್ತಿದೆ. ಅಲ್ಲಿ ಹಿಂದೂ ಧರ್ಮದ ಮೇಲಿನ ಆಘಾತವನ್ನು ತಡೆಯಲು ಹಿಂದೂಗಳ ಪರಿಣಾಮಕಾರಕ ಸಂಘಟನೆ ಅವಶ್ಯಕವಾಗಿದೆ ! ದೇವತೆಗಳ ಮೂರ್ತಿಯನ್ನು ಧ್ವಂಸಗೊಳಿಸುವ ಕ್ರೈಸ್ತನನ್ನು ಬಂಧಿಸಲು ಹಿಂದೇಟು ಹಾಕುತ್ತಿದ್ದ ಕ್ರೈಸ್ತಪ್ರೇಮಿ ಪೊಲಿಸ ಹಿಂದೂಗಳ ರಕ್ಷಣೆ ಏನು ಮಾಡುವರು ? |

ಚೆನ್ನೈ : ತಮಿಳುನಾಡಿನಲ್ಲಿ ದಿಂಡಿಗುಲ ಜಿಲ್ಲೆಯ ವಡಾಮಡ್ಡುರಾಯಿಯ ಶ್ರೀ ಗಣೇಶ ದೇವಸ್ಥಾನದ ದೇವತೆಗಳ ಮೂರ್ತಿಗಳನ್ನು ಧ್ವಂಸಗೊಳಿಸುವ ಬಾಲಕೃಷ್ಣನ್ ಹೆಸರಿನ ಮತಾಂತರಗೊಂಡ ಕ್ರೈಸ್ತ ವ್ಯಕ್ತಿಯನ್ನು ಬಂಧಿಸಲಾಯಿತು. ಬಾಲಕೃಷ್ಣನ್ ಶ್ರೀ ಗಣೇಶನ ಮೂರ್ತಿ, ನಾಗದೇವತೆಯ ೪ ಮೂರ್ತಿ ಹೀಗೆ ಒಟ್ಟು ೫ ಮೂರ್ತಿಗಳನ್ನು ಭಗ್ನಗೊಳಿಸಿದನು. ಅವನು ಇದೇ ದೇವಸ್ಥಾನದ ಪಕ್ಕದಲ್ಲಿರುವ ವೀರಭದ್ರ ಮತ್ತು ರಾವಣೇಶ್ವರ ಮಂದಿರದ ವಿದ್ಯುತ್ ಯಂತ್ರವನ್ನು ನಾಶಗೊಳಿಸಿದನು. ಬಾಲಕೃಷ್ಣನ್ ಇವನನ್ನು ಬಂಧಿಸಲು ಪೊಲಿಸರು ಉದಾಸೀನತೆ ತೋರಿಸಿದ್ದರು; ಆದರೆ ಹಿಂದೂ ಮುನ್ನಾನಿ ಸಂಘಟನೆಯು ಪ್ರತಿಭಟಿಸಿದ ಬಳಿಕ ಪೊಲಿಸರು ಅವನನ್ನು ಬಂಧಿಸಿದರು.
ಮತಾಂತರಗೊಂಡ ಕ್ರೈಸ್ತನು ಮೂರ್ತಿ ಭಗ್ನಗೊಳಿಸಿರುವ ಸುದ್ದಿಯನ್ನು ಪ್ರಸಾರ ಮಾಡಲು ಮಾಧ್ಯಮಗಳು ಹಿಂದೆ ಮುಂದೆ ನೋಡಿದವು !
ಇಂತಹ ಪ್ರಸಾರ ಮಾಧ್ಯಮಗಳ ಮೇಲೆ ಹಿಂದೂಗಳು ಬಹಿಷ್ಕರಿಸಿದರೆ ಆಶ್ಚರ್ಯವೇನು ?ತಮಿಳುನಾಡಿನ ಕೇವಲ ದಿನಾಮಲಾರ ದಿನಪತ್ರಿಕೆಯು ‘ಬಾಲಕೃಷ್ಣನ್ ಮತಾಂತರಗೊಂಡ ಕ್ರೈಸ್ತ ಆಗಿದ್ದಾನೆ’, ಎಂದು ಮಾಹಿತಿ ನೀಡಿದರು; ಆದರೆ ಇತರೆ ಪ್ರಸಾರ ಮಾಧ್ಯಮಗಳು ಈ ಅಂಶಗಳನ್ನು ಉದ್ದೇಶಪೂರ್ವಕವಾಗಿ ಮುಚ್ಚಿಹಾಕಿದವು. ತಮಿಳುನಾಡಿನಲ್ಲಿ ಈ ಮೊದಲೂ ಮೂರ್ತಿ ಭಗ್ನಗೊಳಿಸಿರುವ ಅನೇಕ ಪ್ರಕರಣಗಳು ನಡೆದಿವೆ; ಆದರೆ ಅದಕ್ಕೆ ಮತಾಂಧರು ಜವಾಬ್ದಾರರಾಗಿದ್ದರೂ, ಕೆಲವು ನಿರ್ದಿಷ್ಟ ಸುದ್ದಿ ಜಾಲತಾಣಗಳನ್ನು ಹೊರತುಪಡಿಸಿದರೆ, ಪ್ರಸಾರ ಮಾಧ್ಯಮಗಳು ಆ ವಿಷಯದಲ್ಲಿ ಬರೆಯಲು ಹಿಂದೆ ಮುಂದೆ ನೋಡುತ್ತಾರೆ. |
ತಮಿಳುನಾಡಿನಲ್ಲಿ ಮೂರ್ತಿ ಭಗ್ನಗೊಳಿಸುವ ಘಟನೆಗಳು ಹೆಚ್ಚುತ್ತಿದೆ೧. ಜೂನ ೨೧, ೨೦೨೧ : ಪುಡುಕೊಟ್ಟಾಯಿ ಜಿಲ್ಲೆಯ ಶಿವಮಂದಿರದಲ್ಲಿ ಶಿವಲಿಂಗ ಹಾಗೆಯೇ ಮಾತಾ ಪಾರ್ವತಿ, ಶ್ರೀ ಗಣೇಶ ಮತ್ತು ನಂದಿಯ ಮೂರ್ತಿಗಳ ಧ್ವಂಸ ೨. ಜೂನ ೩೦, ೨೦೨೧ : ವೆಲ್ಲಿಪೂರಮ್ನಲ್ಲಿರುವ ಅಮ್ಮನದೇವಿಯ ಮೂರ್ತಿಯ ಧ್ವಂಸ ೩. ಜುಲೈ ೨೫, ೨೦೨೧ : ಮತಾಂಧರು ರಾಣಿಪೇಠನಲ್ಲಿನ ೧ ಸಾವಿರ ೫೦೦ ವರ್ಷಗಳನ್ನು ಹಳೆಯ ದೇವಸ್ಥಾನದ ಶ್ರೀ ಅಮ್ಮನದೇವಿ ಮತ್ತು ಶ್ರೀ ದುರ್ಗಾದೇವಿಯ ಮೂರ್ತಿಯ ಮೇಲಿನ ವಸ್ತ್ರವನ್ನು ಹರಿದರು ಮತ್ತು ಮೂರ್ತಿಯ ಮೇಲೆ ವೀರ್ಯವನ್ನು ಚೆಲ್ಲಿದರು. ೪. ಸಪ್ಟೆಂಬರ ೭, ೨೦೨೧ : ಪೆರಾಲಂಬೂರನಲ್ಲಿ ಮತಾಂಧನು ಯಾತ್ರೆಯ ಸಮಯದಲ್ಲಿ ದೇವತೆಯ ಮೂರ್ತಿಯ ಮೆರವಣಿಗೆಗಾಗಿ ಉಪಯೋಗಿಸಲಾಗುವ ೨ ರಥಗಳಿಗೆ ಬೆಂಕಿ ಹಚ್ಚಿದನು. ೫. ಅಕ್ಟೋಬರ ೭, ೨೦೨೧ : ಸಿರೂವಾಚೂರನಲ್ಲಿ ೯ ಮೂರ್ತಿಗಳ ಧ್ವಂಸ |
ಇಬ್ಬರು ಸ್ವಂತ ಹಿಂದೂ ಸಹೋದರಿಯರಿಗೆ ಕಿರುಕುಳ ನೀಡಿ ತಲೆಮರೆಸಿಕೊಂಡಿರುವ ಆರೋಪಿಯ ವಿರುದ್ಧ ಪ್ರಕರಣ ದಾಖಲು !
ಹಿಂದೂಗಳು ಕರೆ ನೀಡಿದ್ದ ‘ಭಟ್ಕಳ ಬಂದ್’ಗೆ ಉತ್ತಮ ಪ್ರತಿಕ್ರಿಯೆ: ಪ್ರತಿಭಟನಾ ಮೆರವಣಿಗೆಯಲ್ಲಿ ಸಾವಿರಾರು ಹಿಂದೂಗಳ ಭಾಗಿ!
ಯಾವುದೇ ಕಾರಣಕ್ಕೂ ನನಗೆ ನನ್ನ (ಹಿಂದೂ) ಧರ್ಮವನ್ನು ಬಿಡಲು ಸಾಧ್ಯವಿಲ್ಲ!
‘ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ’ ವಿರುದ್ಧ ಆರೋಪ ನಿರ್ಧರಿಸಲು ನ್ಯಾಯಾಲಯದ ಆದೇಶ
ಭಾರತದ ಗಡಿಯಲ್ಲಿ ಚೀನಾ ನಿರ್ಮಿತ ಕ್ಯಾಮೆರಾಗಳ ಅಳವಡಿಸಿದ ನೇಪಾಳ!
ಬಾಂಗ್ಲಾದೇಶಿ ವಲಸಿಗರ ಕೇಂದ್ರವಾಗಿರುವ ಮುಂಬಯಿ: ೧,೫೦೦ ಕ್ಕೂ ಹೆಚ್ಚು ಅಕ್ರಮ ವಲಸಿಗರ ಅಡ್ಡೆ!