ಲಾವಣ್ಯಳ ಆತ್ಮಹತ್ಯೆಯ ತನಿಖೆ ಸಿಬಿಐ ಮಾಡಲಿದೆ !

ಮದ್ರಾಸ್ ಉಚ್ಚ ನ್ಯಾಯಾಲಯ ಮದುರೈ ನ್ಯಾಯ ಪೀಠದ ಆದೇಶ

ಮದುರೈ (ತಮಿಳುನಾಡು) – ಮದ್ರಾಸ್ ಉಚ್ಚ ನ್ಯಾಯಾಲಯವು ಮದುರೈ ನ್ಯಾಯಪೀಠವು ಲಾವಣ್ಯ ಈ ೧೨ ನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುವ ವಿದ್ಯಾರ್ಥಿನಿಯ ಆತ್ಮಹತ್ಯೆ ಪ್ರಕರಣ ಕೇಂದ್ರೀಯ ತನಿಖಾ ದಳದ ಅಂದರೆ ಸಿಬಿಐಗೆ ಒಪ್ಪಿಸಲಾಗಿದೆ. ಲಾವಣ್ಯಳ ತಂದೆಯ ನೀಡಿರುವ ಮನವಿಯ ವಿಚಾರಣೆ ನಡೆಸುವಾಗ ನ್ಯಾಯಾಲಯವು ಈ ಆದೇಶ ನೀಡಿದೆ. ಈ ಮನವಿಯಲ್ಲಿ ಲಾವಣ್ಯಳ ತಂದೆ, ನನಗೆ ತಂಜಾವೂರಿನ ಪೊಲೀಸರ ವಿಚಾರಣೆಯಲ್ಲಿ ವಿಶ್ವಾಸವಿಲ್ಲದಂತಾಗಿದೆ. ಆದ್ದರಿಂದ ಈ ಪ್ರಕರಣದ ವಿಚಾರಣೆ ಸಿಬಿಐಗೆ ಅಥವಾ ಬೇರೆ ವಿಭಾಗಕ್ಕೆ ನೀಡಬೇಕು, ಎಂದು ಹೇಳಿದ್ದಾರೆ.

ತಂಜಾವೂರಿನ ಸೇಕ್ರೆಡ್ ಹಾರ್ಟ್ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಲಾವಣ್ಯ ವಿದ್ಯಾಭ್ಯಾಸ ಮಾಡುತ್ತಿದ್ದಳು. ಆಕೆಗೆ ಶಾಲೆಯಲ್ಲಿ ಕ್ರೈಸ್ತ ಧರ್ಮ ಸ್ವೀಕರಿಸಲು ಒತ್ತಡ ಹೇರಲಾಗುತ್ತಿತ್ತು, ಆಕೆ ಮತಾಂತರಗೊಳ್ಳಲು ನಿರಾಕರಿಸಿದ ಕಾರಣ ಆಕೆಗೆ ತೊಂದರೆ ನೀಡಲಾಗುತ್ತಿತ್ತು. ಈ ತೊಂದರೆಗಳಿಗೆ ಬೇಸತ್ತು ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಆಕೆ ಮೃತ್ಯುವಿನ ಮೊದಲು ನೀಡಿರುವ ಹೇಳಿಕೆಯಲ್ಲಿ ಈ ಮಾಹಿತಿ ಇದೆ ಎಂದು ಹೇಳಿದರು.