ಭಾರತವು ಮುಸ್ಲಿಮರ ನರಮೇಧದಲ್ಲಿ ಸಹಭಾಗ !(ಅಂತೆ)
ಭಾರತವು ಮುಸ್ಲಿಮರ ನರಮೇಧ ಮಾಡುತ್ತಿದೆ ಮತ್ತು ಅವರ ಮಾನವ ಹಕ್ಕುಗಳನ್ನು ಉಲ್ಲಂಘಿಸುತ್ತಿದೆ, ಎಂದು ಪಾಕಿಸ್ತಾನ ಅಧ್ಯಕ್ಷ ಡಾ. ಆರಿಫ್ ಅಲ್ವಿಯವರು ಹುರುಳಿಲ್ಲದ ಆರೋಪ ಮಾಡಿದ್ದಾರೆ.
ಭಾರತವು ಮುಸ್ಲಿಮರ ನರಮೇಧ ಮಾಡುತ್ತಿದೆ ಮತ್ತು ಅವರ ಮಾನವ ಹಕ್ಕುಗಳನ್ನು ಉಲ್ಲಂಘಿಸುತ್ತಿದೆ, ಎಂದು ಪಾಕಿಸ್ತಾನ ಅಧ್ಯಕ್ಷ ಡಾ. ಆರಿಫ್ ಅಲ್ವಿಯವರು ಹುರುಳಿಲ್ಲದ ಆರೋಪ ಮಾಡಿದ್ದಾರೆ.
ನವ ದೆಹಲಿ – ಅಮೇರಿಕಾದ ಕಾಂಗ್ರೆಸನ ಮಹಿಳಾ ಸದಸ್ಯರಾದ ಇಲ್ಹನ ಒಮರರವರು ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಪ್ರವಾಸ ಕೈಗೊಂಡಿದ್ದು ಭಾರತವು ಅದನ್ನು ನಿಷೇಧಿಸಿದೆ. ‘ಇದರಿಂದ ಒಮರವರ ಸಂಕುಚಿತ ಮಾನಸಿಕತೆ ಕಂಡು ಬರುತ್ತದೆ’, ಎಂದು ಭಾರತವು ಹೇಳಿದೆ. ಭಾರತದ ವಿದೇಶಾಂಗ ಖಾತೆಯ ವಕ್ತಾರರಾದ ಅರಿಂದಮ ಬಾಗಚಿಯವರು ಪತ್ರಕರ್ತರೊಂದಿಗೆ ಮಾತನಾಡುತ್ತಾ ಒಮರರವರ ಪ್ರವಾಸವನ್ನು ಟೀಕಿಸಿದ್ದಾರೆ. On April 21, India condemned the visit of US Congresswoman Ilhan Omar to Pakistan-occupied-Kashmir. Criticizing Omar, MEA spokesperson … Read more
ಸಂಯುಕ್ತ ಅರಬ ಅಮೀರಾತನಲ್ಲಿ ಭಾರತೀಯ ದಂಪತಿಗಳ ಕೊಲೆಯ ಪ್ರಕರಣದಲ್ಲಿ ನ್ಯಾಯಾಲಯವು ಪಾಕಿಸ್ತಾನಿ ನಾಗರಿಕನಿಗೆ ಗಲ್ಲು ಶಿಕ್ಷೆ ವಿಧಿಸಿದೆ. ಹಿರೆನ ಅಧಿಯಾ ಹಾಗೂ ವಿಧಿ ಅಧಿಯಾ ಮೃತ ದಂಪತಿಗಳ ಹೆಸರುಗಳಾಗಿವೆ.
ಮಹಮ್ಮದ ಪೈಗಂಬರ ಅವರನ್ನು ಅವಮಾನಸಿದ ಆರೋಪದ ಮೇಲೆ ಶ್ರೀಲಂಕಾದ ಪ್ರಜೆಯಾದ ಪ್ರಿಯಂತಾ ಕುಮಾರ ಅವರನ್ನು ಪಾಕಿಸ್ತಾನದ ಸಿಯಾಲಕೋಟ ನಗರದಲ್ಲಿ ಡಿಸೆಂಬರ ೩, ೨೦೨೧ ರಂದು ಜನಸಮೂಹವೊಂದು ಸಜೀವ ದಹನ ಮಾಡಿತ್ತು. ಪ್ರಕರಣದಲ್ಲಿ ನ್ಯಾಯಾಲಯವು ೮೯ ಜನರನ್ನು ತಪ್ಪಿತಸ್ಥೆರೆಂದು ತೀರ್ಪು ನೀಡಿದೆ.
ರಾಜಧಾನಿ ದೆಹಲಿ ಸೇರಿದಂತೆ ಭಾರತದಲ್ಲಿನ ಕೆಲವು ನಗರಗಳಲ್ಲಿ ಹಿಂದೂಗಳು ಮುಸಲ್ಮಾನರ ಮೇಲೆ ದಾಳಿ ನಡೆಸುತ್ತಿದ್ದಾರೆ. ಆದ್ದರಿಂದ ಮಾನವ ಹಕ್ಕುಗಳ ಉಲ್ಲಂಘನೆ ನಡೆಯುತ್ತಿದ್ದು ಭಾರತವನ್ನು ಆರೋಪಿಯನ್ನಾಗಿಸಿ, ಎಂದು ಪಾಕಿಸ್ತಾನದ ವಿದೇಶಾಂಗ ಸಚಿವಾಯವು ಹೇಳಿದೆ.
ಪಾಕಿಸ್ತಾನದ ಪ್ರಧಾನಿ ಶಾಹಬಾಜ ಶರೀಫರವರು ಏಪ್ರಿಲ ೧೭ರಂದು ಭಾರತದ ಪ್ರಧಾನಿ ನರೇಂದ್ರ ಮೋದಿಯವರಿಗೆ ಶುಭಾಷಯ ನೀಡುವ ಕುರಿತು ಪತ್ರ ಬರೆದಿದ್ದರು. ‘ಎರಡೂ ದೇಶಗಳೂ ಶಾಂತಿಯುತವಾಗಿ ಜಮ್ಮೂ-ಕಾಶ್ಮೀರ ಹಾಗೂ ಇತರ ವಿವಾದಿತ ಅಂಶಗಳನ್ನು ಬಗೆಹರಿಸಬೇಕು’, ಎಂದು ಶರೀಫರವರು ಬರೆದಿರುವ ಪತ್ರದಲ್ಲಿ ಹೇಳಿದ್ದರು.
ಪಾಕಿಸ್ತಾನದ ವಾಯುದಳವು ಏಪ್ರಿಲ್ ೧೬ರ ರಾತ್ರಿ ಅಫಘಾನಿಸ್ತಾನದ ಖೊಸ್ತ ಮತ್ತು ಕುನಾರ ಪ್ರಾಂತ್ಯದಲ್ಲಿ ನಡೆಸಿದ ‘ಏರ್ ಸ್ಟ್ರಾಯಿಕ್’ನಲ್ಲಿ (ನಿಯಂತ್ರಿತ ಆಕ್ರಮಣದಲ್ಲಿ) ೪೭ ಜನರು ಮೃತರಾದರು. ಇದರಲ್ಲಿ ಮಹಿಳೆಯರು ಮತ್ತು ಚಿಕ್ಕ ಮಕ್ಕಳು ದೊಡ್ಡ ಪ್ರಮಾಣದಲ್ಲಿರುವುದರಿಂದ ತಾಲಿಬಾನ ಸರಕಾರವು ರೊಚ್ಚಿಗೆದ್ದಿದೆ.
ಪಾಕಿಸ್ತಾನದ ವಾಯುದಳವು ಅಫಗಾನಿಸ್ತಾನದ ಖೊಸ್ತ ಪ್ರಾಂತ್ಯದಲ್ಲಿನ ಸಪುರಾ ಜಿಲ್ಲೆ ಹಾಗೂ ಕುನಾರ ಪ್ರಾಂತ್ಯದಲ್ಲಿ ನಡೆಸಿದ ದಾಳಿಯಲ್ಲಿ ೩೦ ಜನರು ಮೃತಪಟ್ಟಿದ್ದಾರೆ. ಅವರ ಪೈಕಿ ಮಹಿಳೆಯರು ಹಾಗೂ ಮಕ್ಕಳ ಸಮಾವೇಶವಿತ್ತು. ಉಗ್ರಗಾಮಿಗಳನ್ನು ನಾಶ ಮಾಡಲು ಈ ಕಾರ್ಯಾಚರಣೆ ನಡೆಸಿರುವುದಾಗಿ ಪಾಕಿಸ್ತಾನವು ಹೇಳಿಕೊಂಡಿದೆ.
ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್ ಷರೀಫ್ ಅವರ ಲಂಡನ್ನಲ್ಲಿನ ಕಚೇರಿಯ ಮೇಲೆ ಮತ್ತೊಮ್ಮೆ ದಾಳಿ ನಡೆದಿದೆ. 2 ದಿನಗಳ ಮೊದಲು ಅವರ ಕಚೇರಿಯ ಮೇಲೆ ಹಾಗೂ ಅವರ ಮೇಲೆ ದಾಳಿ ನಡೆದಿತ್ತು.
ಚೀನಾ-ಪಾಕಿಸ್ತಾನ ಆರ್ಥಿಕ ಹೆದ್ದಾರಿಯ ಕಾಮಗಾರಿ ನಡೆದಿದೆ. ಈ ಹೆದ್ದಾರಿಯ ಮೇಲೆ ಚೀನಾದಿಂದ ವಿವಿಧ ಯೋಜನೆಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಇದಕ್ಕಾಗಿ ಕಳೆದ ಕೆಲವು ವರ್ಷಗಳಿಂದ ಚೀನಾದ ಕಾರ್ಮಿಕರು ಪಾಕಿಸ್ತಾನದಲ್ಲಿ ವಾಸಿಸುತ್ತಿದ್ದಾರೆ.