‘ಕಾಕ್ರೋಚ್ ಜನತಾ ಪಾರ್ಟಿ’ಯ ಪ್ರತಿಭಟನಾಕಾರರು ನಡೆಸಿದ ಕಲ್ಲು ತೂರಾಟದಲ್ಲಿ ಪೊಲೀಸರು ಗಾಯಗೊಂಡಿಲ್ಲವಂತೆ! : Mohammed Zubair AltNews

'ಆಲ್ಟ್‌ನ್ಯೂಸ್'ನ ಸಹ-ಸಂಸ್ಥಾಪಕ ಮಹಮ್ಮದ್ ಜುಬೇರ್ ಸುಳ್ಳುತನ

‘ಆಲ್ಟ್‌ನ್ಯೂಸ್’ (AltNews) ಸಹ-ಸಂಸ್ಥಾಪಕ ಮೊಹಮ್ಮದ್ ಜುಬೈರ್

ನವ ದೆಹಲಿ – ‘ಕಾಕ್ರೋಚ್ ಜನತಾ ಪಾರ್ಟಿ’ಯ ಸಂಸತ್ತಿನ ಮುತ್ತಿಗೆಯ ಮೆರವಣಿಗೆಯ ಸಮಯದಲ್ಲಿ ಪ್ರತಿಭಟನಾಕಾರರು ನಡೆಸಿದ ಕಲ್ಲು ತೂರಾಟದಲ್ಲಿ ಯಾವುದೇ ಪೊಲೀಸ್ ಸಿಬ್ಬಂದಿ ಗಾಯಗೊಂಡಿಲ್ಲ. ಈ ಕುರಿತು ಮಾಧ್ಯಮಗಳಲ್ಲಿನ ಸುದ್ದಿಗಳು ನಕಲಿ ಎಂದು ‘ಆಲ್ಟ್‌ನ್ಯೂಸ್’ ಸಹ-ಸಂಸ್ಥಾಪಕ ಮಹಮ್ಮದ್ ಜುಬೇರ್ ‘ಎಕ್ಸ್’ ಪೋಸ್ಟ್ ಮೂಲಕ ದಾವೆ ಮಾಡಿದ್ದಾರೆ.

ಜುಲೈ 20 ರಂದು ಅನುಮತಿಯಿಲ್ಲದೆ ‘ಕಾಕ್ರೋಚ್ ಜನತಾ ಪಾರ್ಟಿ’ಯ ನೇತೃತ್ವದಲ್ಲಿ ಸಾವಿರಾರು ಜನರು ಸಂಸತ್ತಿನ ಮೇಲೆ ಮೆರವಣಿಗೆ ನಡೆಸಿದ್ದರು. ಈ ವೇಳೆ ಪೊಲೀಸರು ಅವರನ್ನು ತಡೆಯಲು ಯತ್ನಿಸಿದಾಗ ಪಕ್ಷದ ಹಿಂಸಾತ್ಮಕ ಕಾರ್ಯಕರ್ತರು ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿದರು. ಇದರಲ್ಲಿ 10 ಹಿರಿಯ ಅಧಿಕಾರಿಗಳು ಸೇರಿದಂತೆ 50 ಪೊಲೀಸ್ ಸಿಬ್ಬಂದಿ ಗಾಯಗೊಂಡಿದ್ದಾರೆ.

‘ಎ.ಎನ್.ಐ.’ ಮತ್ತು ‘ಐ.ಎ.ಎನ್.ಎಸ್.’ ಸುದ್ದಿ ಸಂಸ್ಥೆಗಳು ಗಾಯಗೊಂಡ ಪೊಲೀಸರ ಅನೇಕ ಚಿತ್ರಗಳನ್ನು ಪ್ರಸಾರ ಮಾಡಿವೆ. ಸ್ವತಃ ಗಾಯಗೊಂಡ ದೆಹಲಿ ಪೊಲೀಸರ ಒಬ್ಬ ಉಪನಿರೀಕ್ಷಕರ ವೀಡಿಯೊ ಕೂಡ ಪ್ರಸಾರವಾಗಿದೆ.

ಜುಬೇರ್‌ನಿಂದ ಹಿಂಸಾಚಾರಕ್ಕೆ ಕುಮ್ಮಕ್ಕು!

ವರ್ಷ 2022 ರಲ್ಲಿ ಜುಬೇರ್ ಸಾಮಾಜಿಕ ಜಾಲತಾಣಗಳಲ್ಲಿ ಭಾಜಪದ ಮಾಜಿ ವಕ್ತಾರೆ ನೂಪುರ್ ಶರ್ಮಾ ಅವರ ಹೇಳಿಕೆಗಳ ಅಪೂರ್ಣ ವೀಡಿಯೊವನ್ನು ಪ್ರಸಾರ ಮಾಡುವ ಮೂಲಕ ಹಿಂಸಾಚಾರಕ್ಕೆ ಕುಮ್ಮಕ್ಕು ನೀಡಿದ್ದರು. ನಂತರ ಈ ವಿವಾದವು ದೇಶಾದ್ಯಂತ ಪ್ರತಿಭಟನೆಗಳಾಗಿ ಬದಲಾಯಿತು. ಅನೇಕ ಪ್ರತಿಭಟನೆಗಳ ಸಮಯದಲ್ಲಿ ನೂಪುರ್ ಶರ್ಮಾ ಅವರಿಗೆ ‘ಸರ್ ತನ್ ಸೆ ಜುದಾ’ (ಶಿರಚ್ಛೇದ) ಬೆದರಿಕೆ ಹಾಕಲಾಗಿತ್ತು.