ಬೀದಿ ನಾಯಿಯ ದಾಳಿಯಿಂದ ಗಾಯಗೊಂಡ ಬಾಲಕಿಗೆ ೧ ಲಕ್ಷ ರೂಪಾಯಿ ಪರಿಹಾರ ನೀಡಲು ಆದೇಶ

ಗ್ರಾಹಕ ರಕ್ಷಣಾ ವೇದಿಕೆಯಿಂದ ಛಡಿಯೇಟು

​ನೋಯ್ಡಾ (ಉತ್ತರ ಪ್ರದೇಶ) – ರಾಜ್ಯದ ಗೌತಮ ಬುದ್ಧ ನಗರ ಜಿಲ್ಲಾ ಗ್ರಾಹಕ ರಕ್ಷಣಾ ವೇದಿಕೆಯು ೪ ವರ್ಷದ ಬಾಲಕಿಯ ಮೇಲೆ ಬೀದಿ ನಾಯಿಯೊಂದು ದಾಳಿ ನಡೆಸಿದ ಪ್ರಕರಣದಲ್ಲಿ, ಇಲ್ಲಿನ ಕೇಂದ್ರಿಯ ವಿಹಾರ ೨ರ ‘ರೆಸಿಡೆಂಟ್ ವೆಲಫೇರ್ ಅಸೋಸಿಯೇಷನ್’ಗೆ ೧ ಲಕ್ಷ ರೂಪಾಯಿ ನಷ್ಟ ಪರಿಹಾರ ನೀಡುವಂತೆ ಆದೇಶಿಸಿದೆ. ಬಾಲಕಿಗೆ ಆದ ಗಾಯಗಳು ಮತ್ತು ಈ ದಾಳಿಯಿಂದ ಆಕೆಗೆ ಉಂಟಾದ ಮಾನಸಿಕ ಕಿರುಕುಳವನ್ನು ಪರಿಗಣಿಸಿ ಆಯೋಗ ಈ ಆದೇಶ ನೀಡಿದೆ. ಜೊತೆಗೆ ಕಾನೂನು ವೆಚ್ಚದ ಪರಿಹಾರವಾಗಿ ಹೆಚ್ಚುವರಿ ೫,೦೦೦ ರೂಪಾಯಿಗಳನ್ನು ನೀಡುವಂತೆಯೂ ಆದೇಶಿಸಲಾಗಿದೆ.

​ದೂರುದಾರರ ಪ್ರಕಾರ, ಅವರ ೪ ವರ್ಷದ ಮಗಳ ಮೇಲೆ ರೆಸಿಡೆಂಟ್ ವೆಲಫೇರ್ ಅಸೋಸಿಯೇಷನ್ ಕಚೇರಿಯ ಹಿಂಭಾಗದಲ್ಲಿರುವ ಉದ್ಯಾನವನದಲ್ಲಿ ಬೀದಿ ನಾಯಿಗಳು ದಾಳಿ ನಡೆಸಿದ್ದವು. ರಸ್ತೆಯಲ್ಲಿ ಹೋಗುತ್ತಿದ್ದ ವ್ಯಕ್ತಿಯೊಬ್ಬರು ಬಾಲಕಿಯನ್ನು ರಕ್ಷಿಸಿದರು; ಆದರೆ ಈ ದಾಳಿಯಲ್ಲಿ ಬಾಲಕಿಯ ಬೆನ್ನಿಗೆ ಗಂಭೀರ ಗಾಯಗಳಾಗಿದ್ದವು. ದೂರುದಾರರು ತಮ್ಮ ಹೇಳಿಕೆಯಲ್ಲಿ,ಇದು ಮೊದಲ ದಾಳಿಯಲ್ಲ; ಈ ಮುಂಚೆಯೂ ಈ ಪ್ರದೇಶದಲ್ಲಿ ಹಿರಿಯ ನಾಗರಿಕರು, ಮನೆಗೆಲಸ ಮಾಡುವ ಮಹಿಳೆಯರು, ಉದ್ಯೋಗಸ್ಥರು ಹಾಗೂ ಯುವಕರ ಮೇಲೆಯೂ ಬೀದಿ ನಾಯಿಗಳು ದಾಳಿ ಮಾಡಿವೆ ಎಂದು ತಿಳಿಸಿದ್ದಾರೆ.

ಸಂಪಾದಕೀಯ ನಿಲುವು

ಬೀದಿ ನಾಯಿಗಳನ್ನು ಹಿಡಿದು ಆಶ್ರಯ ತಾಣಗಳಲ್ಲಿರಿಸಲು ಸರ್ವೋಚ್ಚ ನ್ಯಾಯಾಲಯ ಆದೇಶ ನೀಡಿದ್ದರೂ, ತಕ್ಷಣ ಕ್ರಮ ಯಾಕೆ ಆಗುತ್ತಿಲ್ಲ ಎಂಬುದನ್ನು ಸರಕಾರಗಳು ಯೋಚಿಸಬೇಕು !