ಅಮ್ರೋಹಾ (ಉತ್ತರಪ್ರದೇಶ): ಹೆಸರು ಬದಲಿಸಿ ಆಸ್ಪತ್ರೆ ನಡೆಸುತ್ತಿದ್ದ ಮುಸ್ಲಿಂನಿಂದ ಹಿಂದೂ ನರ್ಸ್ ಮತಾಂತರ

​ಬಂಧು-ಬಳಗದವರ ಪ್ರತಿಭಟನೆಯ ನಂತರ ಪೊಲೀಸರಿಂದ ಪ್ರಕರಣ ದಾಖಲು

​ಅಮ್ರೋಹಾ (ಉತ್ತರಪ್ರದೇಶ) – ಅಮ್ರೋಹಾ ಜಿಲ್ಲೆಯ ‘ಸಾಯಿ ಜೀವನದಾನ’ ಆಸ್ಪತ್ರೆಯ ಮುಸ್ಲಿಂ ಚಾಲಕನ ಮೇಲೆ ಓರ್ವ ಹಿಂದೂ ನರ್ಸ್ ಮತಾಂತರ ಮಾಡಿ ವಿವಾಹವಾಗಿದ್ದಾನೆಂದು ಆರೋಪಿಸಿ ಸಂತ್ರಸ್ತ ಕುಟುಂಬದ ಸದಸ್ಯರು ಆಸ್ಪತ್ರೆಯ ಹೊರಗೆ ಪ್ರತಿಭಟನೆ ಮಾಡಿದರು. ನಂತರ ಪೊಲೀಸರು ಆರೋಪಿ ಚಾಲಕನ ವಿರುದ್ಧ ದೂರು ದಾಖಲಿಸಿದರು. ಸಂತ್ರಸ್ತ ಯುವತಿ ಈ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದಳು ಮತ್ತು ಅವಳ ವಿವಾಹ ನಿಶ್ಚಯವಾಗಿತ್ತು. ಮದುವೆಯ ಸುದ್ದಿ ತಿಳಿಯುತ್ತಿದ್ದಂತೆ ಆರೋಪಿ ಚಾಲಕನು ಮೊದಲು ಮದುವೆ ಗಂಡಿನ ಕಡೆಯವರನ್ನು ಪ್ರಚೋದಿಸಿ ನಂತರ ಯುವತಿಯನ್ನು ಕರೆದೊಯ್ದು ಪರಾರಿಯಾದನು. ಪೊಲೀಸರು ಈಗ ಕಾಣೆಯಾಗಿರುವ ಯುವತಿಯ ಹುಡುಕಾಟ ನಡೆಸುತ್ತಿದ್ದಾರೆ.

​ನಿಮಗೂ ಕಲಮಾ (ಅಲ್ಲಾಹನನ್ನು ಗೌರವಿಸುವ ವಾಕ್ಯಗಳು) ಕಲಿಸಿ ಮುಸ್ಲಿಮರನ್ನಾಗಿ ಮಾಡುತ್ತೇವೆ ! – ಆಸ್ಪತ್ರೆಯ ಸಿಬ್ಬಂದಿಯ ಬೆದರಿಕೆ

ಮುಸ್ಲಿಮ್ ವ್ಯಕ್ತಿ ತನ್ನ ಹೆಸರು ಬದಲಿಸಿ ‘ಸಾಯಿ ಜೀವನದಾನ್’ ಆಸ್ಪತ್ರೆ ನಡೆಸುತ್ತಿದ್ದ. ಸಂತ್ರಸ್ತ ಹುಡುಗಿಯ ಪೋಷಕರು ಹುಡುಗಿಯ ಮಾಹಿತಿ ಪಡೆಯಲು ತಲುಪಿದಾಗ ಆಸ್ಪತ್ರೆಯ ಸಿಬ್ಬಂದಿಗಳು ಹುಡುಗಿಯ ತಂದೆಗೆ ಬೆದರಿಕೆ ಹಾಕಿ ನಿಂದಿಸಿದರು ಎಂದು ಬಂಧು-ಬಳಗದವರು ಆರೋಪಿಸಿದ್ದಾರೆ. ‘ಇಲ್ಲಿಂದ ಹೊರಟು ಹೋಗಿ, ಇಲ್ಲದಿದ್ದರೆ ನಿಮಗೂ ಇಲ್ಲೇ ಕಲಮಾ ಕಲಿಸಿ ಮುಸ್ಲಿಮರನ್ನಾಗಿ ಮಾಡುತ್ತೇವೆ’, ಎಂದು ಗದರಿಸಿದರು. (ಇಂತಹ ಆಸ್ಪತ್ರೆಗೆ ಬೀಗ ಹಾಕಿ ಸಿಬ್ಬಂದಿಗಳನ್ನು ಜೈಲಿಗೆ ತಳ್ಳಬೇಕು ! – ಸಂಪಾದಕರು) ಈ ಆಸ್ಪತ್ರೆಯು ‘ಲವ್ ಟ್ರ್ಯಾಪ್’ (ಪ್ರೀತಿಯ ಬಲೆಯಲ್ಲಿ ಬೀಳಿಸುವುದು) ಮತ್ತು ಗೋಹತ್ಯೆಯ ಅಡ್ಡೆ ಎಂದು ಬಂಧು-ಬಳಗದವರು ಆರೋಪ ಮಾಡಿದ್ದಾರೆ.

ಸಂಪಾದಕೀಯ ನಿಲುವು

ಪ್ರತಿಭಟನೆ ಮಾಡದೇ ಜನರ ಮಾತನ್ನು ಪೊಲೀಸರು ಕೇಳುತ್ತಿಲ್ಲವೆಂದರೆ, ಅಂತಹ ಪೊಲೀಸರನ್ನು ವಜಾಗೊಳಿಸಿ !