ಇಲ್ಲದಿರುವ ಭಾರತ-ಅಮೆರಿಕ ಒಪ್ಪಂದವನ್ನು ವಿರೋಧಿಸಲು ಯೋಜಿಸಲಾಗಿತ್ತು!

ನವದೆಹಲಿ – ಪಂಜಾಬಿನ ರೈತರು ದೆಹಲಿಯ ಕಡೆಗೆ ನಡೆಸಬೇಕಿದ್ದ ಮೆರವಣಿಗೆಯನ್ನು ಮುಂದೂಡಿದ್ದಾರೆ. ಜುಲೈ 21 ರಂದು ಇಲ್ಲಿನ ಶಂಭು ಗಡಿಯಿಂದ ಮೆರವಣಿಗೆಗಾಗಿ ಬಂದಿದ್ದ ರೈತರು ಹಿಂತಿರುಗಲು ಪ್ರಾರಂಭಿಸಿದ್ದಾರೆ. ಅಮೆರಿಕ-ಭಾರತ ವ್ಯಾಪಾರ ಒಪ್ಪಂದದ ವಿರುದ್ಧ ಈ ಮೆರವಣಿಗೆಯನ್ನು ಆಯೋಜಿಸಲಾಗಿತ್ತು. ಈ ಒಪ್ಪಂದ ಇನ್ನೂ ಆಗಲೇ ಇಲ್ಲ. ರೈತ ಮುಖಂಡರಾದ ದಿಲಬಾಗ ಸಿಂಗ ದಿರಾಜಕೆಯವರು ಮಾತನಾಡಿ, ಹರಿಯಾಣದ ಕೃಷಿ ಸಚಿವರಾದ ಶ್ಯಾಮ ಸಿಂಗ ರಾಣಾ ಅವರೊಂದಿಗಿನ ಸಭೆಯಲ್ಲಿ ಬೇಡಿಕೆಗಳ ಕುರಿತು ಒಮ್ಮತ ಮೂಡಿದೆ. ಹೀಗಾಗಿ ಪ್ರತಿಭಟನೆಯನ್ನು ಮುಂದೂಡಲಾಗಿದೆ ಎಂದು ತಿಳಿಸಿದ್ದಾರೆ.
ಯಾವುದೇ ಒಪ್ಪಂದ ನಡೆದಿಲ್ಲ; ಹೀಗಿರುವಾಗ ಈ ಪ್ರತಿಭಟನೆ ಏಕೆ? – ಭಾಜಪ
ಪಂಜಾಬಿನ ಭಾಜಪದ ವಕ್ತಾರರಾದ ಅನಿಲ ಸಾರೀನರವರು ಮಾತನಾಡಿ, “ಇನ್ನೂ ಯಾವುದೇ ಒಪ್ಪಂದ ನಡೆದಿಲ್ಲ. ಯಾವುದೇ ವಿವರಗಳನ್ನು ಘೋಷಿಸಲಾಗಿಲ್ಲ; ಹೀಗಿರುವಾಗ ಈ ಪ್ರತಿಭಟನೆ ಏಕೆ? ಸರಕಾರ ಮಾಡದೇ ಇರುವ ಕೆಲಸದ ವಿರುದ್ಧ ಅವರು ಪ್ರತಿಭಟನೆ ನಡೆಸುತ್ತಿದ್ದಾರೆ. ಬಹುಶಃ ಈ ಮುಖಂಡರಿಗೆ ವಿದೇಶದಲ್ಲಿ ಚಿರಪರಿಚಿತರಿದ್ದು, ಆದ್ದರಿಂದಲೇ ಅವರಿಗೆ ಎಲ್ಲವೂ ತಿಳಿದಿರುವ ಸಾಧ್ಯತೆಯಿದೆ. ಕೆಲವು ಜನರಿಗೆ ಯಾವಾಗಲೂ ಪಂಜಾಬಿನ ವಾತಾವರಣವನ್ನು ಹಾಳುಮಾಡಬೇಕಿರುತ್ತದೆ” ಎಂದಿದ್ದಾರೆ.
ಪ್ರಧಾನಿ ಮೋದಿ ಅವರ ನಿವಾಸದ ಹೊರಗೆ ಕಾಂಗ್ರೆಸ್ ಆಂದೋಲನ : Delhi Congress Protest
ನೌಕೆಯನ್ನು ವಶಕ್ಕೆ ತೆಗೆದುಕೊಂಡು ನಾವಿಕರನ್ನು ಒತ್ತೆಯಾಳಾಗಿರಿಸಿದ್ದ ಸೊಮಾಲಿಯಾದ 44 ನಾಗರಿಕರಿಗೆ ಜೀವಾವಧಿ ಶಿಕ್ಷೆ! : Somalians Get Life Imprisonment
‘ಕಾಕ್ರೋಚ್ ಜನತಾ ಪಾರ್ಟಿ’ಯ ಪ್ರತಿಭಟನಾಕಾರರು ನಡೆಸಿದ ಕಲ್ಲು ತೂರಾಟದಲ್ಲಿ ಪೊಲೀಸರು ಗಾಯಗೊಂಡಿಲ್ಲವಂತೆ! : Mohammed Zubair AltNews
ಬುಲ್ಡೋಜರ್ ಕ್ರಮಕ್ಕೆ ಸಂಬಂಧಿಸಿದಂತೆ ಅಲಹಾಬಾದ್ ಹೈಕೋರ್ಟ್ನ ವಿಭಜಿತ ತೀರ್ಪು! : Allahabad HC
ಬೀದಿ ನಾಯಿಯ ದಾಳಿಯಿಂದ ಗಾಯಗೊಂಡ ಬಾಲಕಿಗೆ ೧ ಲಕ್ಷ ರೂಪಾಯಿ ಪರಿಹಾರ ನೀಡಲು ಆದೇಶ
ಅಂದಿನ ಸಮಾಜವಾದಿ ಮತ್ತು ಕಾಂಗ್ರೆಸ್ ಸರಕಾರಗಳು ಗೋರಿಗಳ ಗೋಡೆಗಳ ಮೇಲೆ ಹಣ ವ್ಯಯ ಮಾಡುವುದನ್ನೇ ‘ಜಾತ್ಯತೀತತೆ’ ಎಂದು ಭಾವಿಸಿದ್ದವು!