ಸರಕಾರಿ ಅಧಿಕಾರಿಗಳ ಮೇಲೆಯೂ ಕಾರ್ಯಾಚರಣೆಯಾಗುವ ಸಾಧ್ಯತೆ

ರಾಮಪೂರ (ಉತ್ತರಪ್ರದೇಶ) – ಪಾಕಿಸ್ತಾನಿ ನಾಗರೀಕತೆಯ ಬಗ್ಗೆ ಮುಚ್ಚಿಟ್ಟು ಸರಕಾರಿ ಶಿಕ್ಷಕಿಯ ನೌಕರಿಯನ್ನು ಪಡೆದಿರುವ ಮಹಿಳೆಯನ್ನು ವಜಾಗೊಳಿಸಲಾದರೆ ಆಕೆಯ ಮಗಳನ್ನು ಅಮಾನತುಗೊಳಿಸಲಾಗಿದೆ. ಈ ಪ್ರಕರಣದಲ್ಲಿ ಕೆಲವು ಸರಕಾರಿ ಅಧಿಕಾರಿಗಳು ಹಾಗೂ ನೌಕರರ ಮೇಲೆಯೂ ಕಾರ್ಯಾಚರಣೆ ನಡೆಯುವ ಸಾಧ್ಯತೆಯಿದೆ. ಮಗಳು ಬರೇಲಿಯಲ್ಲಿ, ತಾಯಿಯು ರಾಮಪೂರದಲ್ಲಿ ನೌಕರಿ ಮಾಡುತ್ತಿದ್ದರು.
पाकिस्तान की नागरिकता छिपाकर टीचर बनी महिला बर्खास्त, बेटी भी निलंबित#UPNews https://t.co/em48NyYBAm
— Hindustan UP-Bihar (@HindustanUPBH) September 2, 2022
ರಾಮಪೂರದ ಆತಿಶಬಾಜಾನನಲ್ಲಿ ವಾಸಿಸುವ ಫರಜಾನ ಉರುಫ್ ಮಾಹಿರಾ ಅಖ್ತರರು ಜೂನ ೧೯೭೯ರಲ್ಲಿ ಪಾಕಿಸ್ತಾನದ ನಿವಾಸಿಯಾದ ಸಿಬಗತ ಅಲೀಯೊಂದಿಗೆ ವಿವಾಹವಾದರು. ಅನಂತರ ಆಕೆಯು ಪಾಕಿಸ್ತಾನಕ್ಕೆ ಹೋದಾಗ ಆಕೆಗೆ ಅಲ್ಲಿನ ಪೌರತ್ವ ಲಭಿಸಿತ್ತು. ೨ ವರ್ಷಗಳ ನಂತರ ಆಕೆಯ ತಲಾಖ ಆದ ನಂತರ ಆಕೆಯು ಪಾಕಿಸ್ತಾನಿ ಪಾರಪತ್ರದ ವಿಜಾ ಪಡೆದು ಭಾರತಕ್ಕೆ ಹಿಂತಿರುಗಿದ್ದರು. ಈ ಸಮಯದಲ್ಲಿ ಆಕೆಯೊಂದಿಗೆ ಆಕೆಯ ಇಬ್ಬರು ಹುಡುಗಿಯರೂ ಬಂದಿದ್ದರು. ವಿಜಾದ ಅವಧಿ ಮುಗಿದ ನಂತರವೂ ಆಕೆಯು ಪುನಃ ಪಾಕಿಸ್ತಾನಕ್ಕೆ ಹೋಗಲಿಲ್ಲ. ಆಕೆಯು ಇಲ್ಲಿಯೇ ನೌಕರಿ ಮಾಡಲು ಆರಂಭಿಸಿದ್ದಳು. ೧೯೮೬ರಲ್ಲಿ ಆಕೆಯ ಮೇಲೆ ಖಟ್ಲೆಯನ್ನು ದಾಖಲಿಸಲಾದಾಗ ಆಕೆಗೆ ಕೇವಲ ಒಂದು ದಿನ ನ್ಯಾಯಾಲಯದಲ್ಲಿ ಉಪಸ್ಥಿತಳಿರುವ ಶಿಕ್ಷೆಯನ್ನು ನೀಡಲಾಯಿತು. ಅನಂತರ ಆಕೆಗೆ ಪ್ರಾಥಮಿಕ ಶಿಕ್ಷಣ ವಿಭಾಗದಲ್ಲಿ ಶಿಕ್ಷಕಿಯ ನೌಕರಿ ದೊರೆಯಿತು. ಆಕೆಯು ಪಾಕಿಸ್ತಾನಿಯಾಗಿರುವ ಬಗ್ಗೆ ಮಾಹಿತಿ ದೊರೆತಾಗ ಆಕೆಯನ್ನು ಅಮಾನತುಗೊಳಿಸಲಾಗಿದ್ದರೂ ಆಕೆಯನ್ನು ಪುನಃ ನೌಕರಿಗೆ ಸೇರಿಸಲಾಯಿತು ಹಾಗೂ ಪ್ರಕರಣವು ಶಾಂತವಾಗಿತ್ತು. ಕಳೆದ ವರ್ಷ ಆಕೆಯ ಮಗಳೂ ಸರಕಾರಿ ಶಿಕ್ಷಕಿಯಾಗಿರುವ ಬಗ್ಗೆ ತಿಳಿದಾಗ ಫರಜಾನಿನ ಮೇಲೆ ಪುನಃ ತನಿಖೆ ಆರಂಭವಾಯಿತು ಹಾಗೂ ಆಕೆಯನ್ನು ವಜಾಗೊಳಿಸಲಾದರೆ, ಮಗಳನ್ನು ಅಮಾನತುಗೊಳಿಸಲಾಗಿದೆ.
ಸಂಪಾದಕೀಯ ನಿಲುವುಇಂತಹವರಿಗೆ ಜೀವಾವಧಿ ಶಿಕ್ಷೆ ನೀಡಬೇಕು, ಇದಕ್ಕಾಗಿ ಉತ್ತರಪ್ರದೇಶದಲ್ಲಿನ ಭಾಜಪ ಸರಕಾರವು ಪ್ರಯತ್ನಿಸಬೇಕು ಎಂದು ಭಾರತೀಯರಿಗೆ ಅನಿಸುತ್ತದೆ ! |
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!