ಬಾಂಗ್ಲಾದೇಶದ ಗೃಹ ಸಚಿವ ಸಲಾಹುದ್ದೀನ್ ಅಹ್ಮದ್ ಅವರ ಭಾರತ ವಿರೋಧಿ ಹೇಳಿಕೆ

ಢಾಕಾ (ಬಾಂಗ್ಲಾದೇಶ) – ಯಾವುದೇ ವ್ಯಕ್ತಿಗೆ ಅಕ್ರಮವಾಗಿ (ತಳ್ಳುವ ಮೂಲಕ / ‘ಪುಷ್-ಇನ್’) ಬಾಂಗ್ಲಾದೇಶಕ್ಕೆ ಪ್ರವೇಶಿಸಲು ಅನುಮತಿ ನೀಡಲಾಗಿಲ್ಲ. ‘ಬಾರ್ಡರ್ ಗಾರ್ಡ್ ಬಾಂಗ್ಲಾದೇಶ’ವು ಸ್ಥಳೀಯ ಜನರ ನೆರವಿನಿಂದ ಇದುವರೆಗೆ ಇಂತಹ ಎಲ್ಲಾ ಪ್ರಯತ್ನಗಳನ್ನು ಯಶಸ್ವಿಯಾಗಿ ವಿಫಲಗೊಳಿಸಿದೆ. ಕೆಲವು ಜನರು ಅಕ್ರಮವಾಗಿ ದೇಶವನ್ನು ತಲುಪಿದ್ದರು; ಆದರೆ ಅಧಿಕಾರಿಗಳು ಆ ಪ್ರಕರಣಗಳಲ್ಲಿ ಕ್ರಮ ಕೈಗೊಂಡಿದ್ದಾರೆ ಎಂದು ಬಾಂಗ್ಲಾದೇಶದ ಗೃಹ ಸಚಿವ ಸಲಾಹುದ್ದೀನ್ ಅಹ್ಮದ್ ಮಾಹಿತಿ ನೀಡಿದ್ದಾರೆ. ಢಾಕಾದ ಪಿಲ್ಖಾನಾದಲ್ಲಿರುವ ಬಾರ್ಡರ್ ಗಾರ್ಡ್ ಬಾಂಗ್ಲಾದೇಶದ ಪ್ರಧಾನ ಕಚೇರಿಗೆ ಭೇಟಿ ನೀಡಿದ ನಂತರ ಅವರು ಮಾತನಾಡುತ್ತಿದ್ದರು. ಅವರು ಭಾರತದ ಉಲ್ಲೇಖದೊಂದಿಗೆ ಈ ಹೇಳಿಕೆ ನೀಡಿದ್ದಾರೆ. ಭಾರತದ ಕಡೆಯಿಂದ ಬಾಂಗ್ಲಾದೇಶಿ ನುಸುಳುಕೋರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತಿದೆ. ಭಾರತದ ಗಡಿಯಿಂದ ಬಾಂಗ್ಲಾದೇಶಿ ನುಸುಳುಕೋರರನ್ನು ಹಿಂತಿರುಗಿಸಲಾಗುತ್ತಿದೆ ಮತ್ತು ಬಾರ್ಡರ್ ಗಾರ್ಡ್ ಬಾಂಗ್ಲಾದೇಶ ಅವರನ್ನು ತಡೆಯಲು ಯತ್ನಿಸುತ್ತಿದೆ.
"We will not allow India to forcibly send people into our country," – Bangladesh Home Minister Salahuddin Ahmed's Anti-India Remark
India should issue a firm diplomatic response to Bangladesh through the proper diplomatic channels as it is their citizens who illegally cross the… pic.twitter.com/HzAmQsyNC7
— Sanatan Prabhat (@SanatanPrabhat) July 21, 2026
‘ಭಾರತವು ನಮಗೆ ಪಟ್ಟಿ ನೀಡಲಿ!’(ಅಂತೆ)
ಗೃಹ ಸಚಿವ ಅಹ್ಮದ್ ಮಾತನಾಡಿ, ನಮ್ಮ ಸರಕಾರವು ಬೆಂಗಾಲ್ನ ಹೊಸದಾಗಿ ಆಯ್ಕೆಯಾದ ಸರಕಾರದ ‘ರಾಜಕೀಯ ನಡೆಗಳಿಗೆ’ ಉತ್ತರಿಸುವ ಬದಲು, ಈ ವಿಷಯದ ಕುರಿತು ಭಾರತದ ಕೇಂದ್ರ ಸರಕಾರದೊಂದಿಗೆ ಚರ್ಚಿಸಲಿದೆ. ಒಂದು ವೇಳೆ ಯಾವುದೇ ಬಾಂಗ್ಲಾದೇಶಿ ಪ್ರಜೆಯು ಭಾರತದಲ್ಲಿ ವಾಸಿಸುತ್ತಿದ್ದರೆ, ಭಾರತೀಯ ಅಧಿಕಾರಿಗಳು ನಿಗದಿತ ಪ್ರಕ್ರಿಯೆಯಂತೆ ವಿದೇಶಾಂಗ ಸಚಿವಾಲಯದ ಮೂಲಕ ಅವರ ಪಟ್ಟಿಯನ್ನು ನೀಡಬೇಕು. ನಾವು ಪೌರತ್ವವನ್ನು ಪರಿಶೀಲಿಸುತ್ತೇವೆ. ಹಕ್ಕು ಸಮಂಜಸವಾಗಿದೆ ಎಂದು ಕಂಡುಬಂದರೆ, ನಾವು ಆ ವ್ಯಕ್ತಿಯನ್ನು ಸರಿಯಾದ ಕಾನೂನು ಪ್ರಕ್ರಿಯೆಯ ಮೂಲಕ ಮರಳಿ ಕರೆತರುತ್ತೇವೆ. ನಾವು ಯಾರನ್ನೂ ಯಾವುದೇ ಇತರ ಮಾರ್ಗದಿಂದ ಒಳಗೆ ಬರಲು ಬಿಡುವುದಿಲ್ಲ ಎಂದು ಹೇಳಿದರು.
ಭಾರತ ಪಟ್ಟಿ ನೀಡಿದ್ದರೂ ಕ್ರಮ ಕೈಗೊಂಡಿಲ್ಲ!
ಭಾರತವು ೨ ಸಾವಿರದ ೬೮೦ ಕ್ಕೂ ಹೆಚ್ಚು ನುಸುಳುಕೋರ ಪ್ರಜೆಗಳ ಪಟ್ಟಿಯನ್ನು ಬಾಂಗ್ಲಾದೇಶಕ್ಕೆ ಹಸ್ತಾಂತರಿಸಿದೆ; ಆದರೆ ಬಾಂಗ್ಲಾದೇಶ ಸರಕಾರವು ಇದುವರೆಗೂ ಅವರ ಗುರುತನ್ನು ದೃಢಪಡಿಸಿಲ್ಲ ಎಂದು ಭಾರತೀಯ ವಿದೇಶಾಂಗ ಸಚಿವಾಲಯವು ಇತ್ತೀಚೆಗೆ ತಿಳಿಸಿತ್ತು. ಹಲವು ಪ್ರಕರಣಗಳಲ್ಲಿ ಪರಿಶೀಲನೆ ಪ್ರಕ್ರಿಯೆಯು ೫ ವರ್ಷಗಳಿಗಿಂತಲೂ ಹೆಚ್ಚು ಕಾಲದಿಂದ ಬಾಕಿಯಿದೆ. ದ್ವಿಪಕ್ಷೀಯ ಒಪ್ಪಂದಗಳ ಆಧಾರದ ಮೇಲೆ ಈ ವಲಸಿಗರು ತಾಯ್ನಾಡಿಗೆ ಮರಳುವ ಪ್ರಕ್ರಿಯೆಯನ್ನು ಸುಗಮವಾಗಿ ಪೂರ್ಣಗೊಳಿಸಲು ಬಾಂಗ್ಲಾದೇಶವು ಅವರ ರಾಷ್ಟ್ರೀಯತೆಯ ಪರಿಶೀಲನೆಯನ್ನು ಚುರುಕುಗೊಳಿಸಬೇಕು ಎಂದು ಸಚಿವಾಲಯವು ಮನವಿ ಮಾಡಿದೆ.
ನೇಪಾಳದ ಹೊಸ ₹1 ನಾಣ್ಯದಿಂದ ವಿವಾದಿತ ನಕ್ಷೆ ತೆರವು : Nepal New Coin Map
ಭಾರತದ ಬಾಂಗ್ಲಾದೇಶ ಗಡಿಯ ಸಮೀಪ ಅಮೆರಿಕದ ಸೈನಿಕರೊಂದಿಗೆ ಬಾಂಗ್ಲಾದೇಶ ಸೇನೆಯ ಜಂಟೀ ಸಮರಾಭ್ಯಾಸ
ರಷ್ಯಾದ ರಾಯಭಾರಿಯನ್ನು ಕರೆಸಿ ತೀವ್ರ ವಿರೋಧಿಸಿದ ಭಾರತ !
ರಷ್ಯಾ: ಕಳೆದ ೬ ತಿಂಗಳುಗಳಲ್ಲಿ ೪೪ ಟನ್ ಚಿನ್ನ ಮಾರಾಟ!
ಪಾಕಿಸ್ತಾನಕ್ಕೆ ನೀಡಲಾಗುವ ಆರ್ಥಿಕ ನೆರವು ಮತ್ತು ಪಾಕಿಸ್ತಾನಿಗಳಿಗೆ ನೀಡಲಾಗುವ ವೀಸಾವನ್ನು ತಡೆಹಿಡಿಯಬೇಕು!
೧೨ ವರ್ಷಗಳ ನಂತರ ಎಲ್ಲಾ ಆರೋಪಿಗಳನ್ನು ಪಾಕಿಸ್ತಾನದ ಸರ್ವೋಚ್ಚ ನ್ಯಾಯಾಲಯದಿಂದ ಖುಲಾಸೆ!