ಈ ಘಟನೆಯ ವಾರ್ತೆಯನ್ನು ಪ್ರಸಾರ ಮಾಡಿದ ಪಾಕಿಸ್ತಾನಿ ಪತ್ರಕರ್ತನ ಬಂಧನ

ಕರಾಚಿ (ಪಾಕಿಸ್ತಾನ) – ಪಾಕಿಸ್ತಾನದಲ್ಲಿ ಬಂದಿರುವ ನೆರೆಹಾವಳಿಯಿಂದ ಅಲ್ಲಿನ ಜನಜೀವನ ಅಸ್ತವ್ಯಸ್ತವಾಗಿದೆ. ಇಲ್ಲಿಯ ಸಿಂಧ ಪ್ರಾಂತದಲ್ಲಿನ ನೆರೆಯಲ್ಲಿ ಸಿಲುಕಿರುವ ಹಿಂದೂಗಳ ದುರಾವಸ್ತೆಯ ವಿಷಯವಾಗಿ ವಾರ್ತೆಯನ್ನು ಪ್ರಸಾರ ಮಾಡಿದ ಪ್ರಕರಣದಲ್ಲಿ ಪಾಕಿಸ್ತಾನವು ನಸರಲ್ಲಾಹ ಗದ್ದಾನಿ ಎಂಬ ಒಬ್ಬ ಪತ್ರಕರ್ತನನ್ನು ಬಂಧಿಸಿದ್ದಾರೆ. ಅವನಿಗೆ ಐದು ದಿನಗಳ ಕಾಲ ಪೊಲೀಸ್ ಕೊಠಡಿಯಲ್ಲಿ ಸಹ ಇರಿಸಲಾಗಿದೆ.
Pakistan: Journalist reports plight of Hindu flood victims, exposes local administration for denying them food in a relief camp, gets arrestedhttps://t.co/lf2uOmtOEI
— OpIndia.com (@OpIndia_com) September 8, 2022
ಗದ್ದಾನಿಯು ಸಿಂಧ ಪ್ರಾಂತದ ಮೀರಪುರು ಮಥೇಲೋದಲ್ಲಿನ ಹಿಂದೂಗಳ ಭಾಗರಿ ಸಮಾಜದಲ್ಲಿನ ಜನರ ದುರಾವಸ್ಥೆಯ ವಾರ್ತೆಯನ್ನು ಪತ್ರಿಕೆಯಲ್ಲಿ ಪ್ರಸಿದ್ಧಿಗೊಳಿಸಿದ್ದರು. ಗದ್ದಾನಿ ಇವರು ಅವರ ವಾರ್ತೆಯಲ್ಲಿ, ಭಾಗರಿ ಸಮಾಜದಲ್ಲಿನ ಜನರು ಹಿಂದೂ ಆಗಿರುವುದರಿಂದ ಅವರಿಗೆ ಸ್ಥಳೀಯ ಆಡಳಿತವು ನೆರೆಹಾವಳಿಯಲ್ಲಿನ ಶಿಬಿರಗಳಿಂದ ‘ಅವರು ನೆರೆಹಾವಳಿಯಲ್ಲಿ ಸಿಲುಕಿದವರಲ್ಲ’ ಎಂದು ಹೇಳುತ್ತಾ ಶಿಬಿರಗಳಿಂದ ಹೊರತೆಗೆಯಲಾಗುತ್ತಿದೆ ಎಂದು ಹೇಳಿದರು. ಭಗರಿ ಸಮಾಜದ ಹಿಂದೂಗಳ ದುಸ್ಥಿತಿ ಹೇಳುವ ಒಂದು ವಿಡಿಯೋ ಕೂಡ ಪ್ರಸಾರ ಮಾಡಲಾಗಿತ್ತು. ಇದರಲ್ಲಿ ಹಿಂದೂ ‘ಅವರನ್ನು ಸರಕಾರವು ಅಲ್ಲಿಂದ ಏಕೆ ಹೊರ ತೆಗೆದಿದ್ದಾರೆ ?’, ಇದರ ಮಾಹಿತಿ ನೀಡುತ್ತಿದ್ದಾರೆ.
ಸಂಪಾದಕೀಯ ನಿಲುವುಒಂದು ಕಡೆಗೆ ಪಾಕಿಸ್ತಾನದಲ್ಲಿನ ಹಿಂದೂಗಳು ಅವರ ದೇವಸ್ಥಾನದಲ್ಲಿ ೩೦೦ ಕ್ಕೂ ಹೆಚ್ಚಿನ ಮುಸಲ್ಮಾನರಿಗೆ ಆಶ್ರಯ ನೀಡಿದ್ದಾರೆ ಹಾಗೂ ಇನ್ನೊಂದು ಕಡೆಗೆ ಸರಕಾರ ಹಿಂದೂಗಳನ್ನು ಶಿಬಿರದಿಂದ ಹೊರತೆಗೆಯುತ್ತಿದ್ದಾರೆ ! ಇದರಿಂದ ಪಾಕಿಸ್ತಾನದ ಮಾನಸಿಕತೆ ಅರ್ಥವಾಗುತ್ತದೆ ! ಹಾವಿಗೆ ಎಷ್ಟೇ ಹಾಲು ಕುಡಿಸಿದರು ಅದು ವಿಷವೇ ಕಾರುವುದು, ಇದು ಹಿಂದೂಗಳಿಗೆ ಅರ್ಥವಾಗುವ ದಿನವೆ ಸುದಿನ ! |
Teesta River Project : ಭಾರತವನ್ನು ಬದಿಗೊತ್ತಿ ಚೀನಾಕ್ಕೆ ೯ ಸಾವಿರ ಕೋಟಿ ರೂಪಾಯಿಗಳ ತೀಸ್ತಾ ನದಿ ಯೋಜನೆ ಒಪ್ಪಿಸಿದ ಬಾಂಗ್ಲಾದೇಶ !
ಬದರಿನಾಥ ದೇವಸ್ಥಾನದ ದೇಣಿಗೆ ಹಣ ಕಳ್ಳತನ ಪ್ರಕರಣ; ದೇವಸ್ಥಾನದ ಮಾಜಿ ಅಧಿಕಾರಿಯ ಬಂಧನ : Badrinath Temple Arrest
ಉಕ್ರೇನಿನಿಂದ ರಷ್ಯಾದ ೨೦ ನೌಕೆಗಳ ಮೇಲೆ ದಾಳಿ! : Russia Ukraine War
ರಷ್ಯಾದಿಂದ ತೈಲ ಖರೀದಿಸುವ ಭಾರತ ಸೇರಿದಂತೆ ೫ ದೇಶಗಳ ಮೇಲೆ ಶೇ. ೧೦೦ ರಷ್ಟು ಸುಂಕ ವಿಧಿಸಲಿರುವ ಅಮೆರಿಕಾ ! : Oil purchase from Russia
ಬಲೂಚಿಸ್ತಾನದ ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಿರುವವರಿಗೆ ಇಸ್ರೇಲ್ ಸಂಸ್ಥೆಗಳು ಸಹಾಯ ಮಾಡುತ್ತಿವೆ
ನಮ್ಮ ಮತ್ತು ಭಾರತದ ಡಿ.ಎನ್.ಎ. ಒಂದೇ! – Afghanistan Minister