ಮಹಾಶಿವರಾತ್ರಿ ಎಂದರೆ ಸಾಧನೆ ಮಾಡಿ ಶಿವಸ್ವರೂಪ ಗುರುದೇವರಲ್ಲಿಲೀನವಾಗುವುದು – ಪೂ. ರಮಾನಂದ ಗೌಡ, ಧರ್ಮಪ್ರಚಾರಕರು, ಸನಾತನ ಸಂಸ್ಥೆ
ಮಹಾಶಿವರಾತ್ರಿಯ ನಿಮಿತ್ತ ರಾಜ್ಯದಾದ್ಯಂತ ಸನಾತನ ಸಂಸ್ಥೆಯ ವತಿಯಿಂದ ಧರ್ಮಪ್ರಸಾರ ಕಾರ್ಯದಲ್ಲಿ ಸಾಧಕರು, ಧರ್ಮಪ್ರೇಮಿಗಳು, ಯುವ ಸಾಧಕರು ಈ ಸೇವೆಯಲ್ಲಿ ಭಾಗವಹಿಸಿದರು.
ಮಹಾಶಿವರಾತ್ರಿಯ ನಿಮಿತ್ತ ರಾಜ್ಯದಾದ್ಯಂತ ಸನಾತನ ಸಂಸ್ಥೆಯ ವತಿಯಿಂದ ಧರ್ಮಪ್ರಸಾರ ಕಾರ್ಯದಲ್ಲಿ ಸಾಧಕರು, ಧರ್ಮಪ್ರೇಮಿಗಳು, ಯುವ ಸಾಧಕರು ಈ ಸೇವೆಯಲ್ಲಿ ಭಾಗವಹಿಸಿದರು.
ಮಾಘ ಕೃಷ್ಣ ಚತುರ್ದಶಿಯಂದು ಏಕಭುಕ್ತರಾಗಿರಬೇಕು (ಒಪ್ಪತ್ತು ಊಟ ಮಾಡುವುದು). ಚತುರ್ದಶಿಯಂದು ಬೆಳಗ್ಗೆ ವ್ರತದ ಸಂಕಲ್ಪವನ್ನು ಮಾಡಿ ಸಾಯಂಕಾಲ ನದಿಯಲ್ಲಿ ಅಥವಾ ಕೆರೆಯಲ್ಲಿ ಶಾಸ್ತ್ರೋಕ್ತವಾಗಿ ಸ್ನಾನ ಮಾಡಬೇಕು. ಭಸ್ಮ ಮತ್ತು ರುದ್ರಾಕ್ಷಿಗಳನ್ನು ಧರಿಸಬೇಕು. ಪ್ರದೋಷಕಾಲದಲ್ಲಿ ಶಿವನ ದೇವಸ್ಥಾನಕ್ಕೆ ಹೋಗಬೇಕು.
ವಿಷಯಭೋಗದ ಸಾಮಗ್ರಿಗಳು ಸಮೀಪದಲ್ಲಿದ್ದರೂ ಯಾರ ಚಿತ್ತವು ನಿರ್ವಿಕಾರವಾಗಿರುತ್ತದೆಯೋ, ಅವನು ಕೂಟಸ್ಥನಾಗಿರುತ್ತಾನೆ. ಪಾರ್ವತಿಯು ತೊಡೆಯ ಮೇಲೆ ಕುಳಿತಿರುವಾಗಲೂ ಶಿವನು ನಿರ್ವಿಕಾರನಾಗಿರುತ್ತಾನೆ, ಕಾಮವಾಸನೆಯು ಅವನನ್ನು ಸ್ಪರ್ಶಿಸುವುದಿಲ್ಲ. ಶಿವನು ನಿಜವಾದ ಜಿತೇಂದ್ರಿಯನಾಗಿದ್ದಾನೆ.
ಶಿವನು ದಂಪತಿಸಮೇತ ದೇವರು. ಇತರ ದೇವರು ಒಬ್ಬರೇ ಇರುವುದರಿಂದ ಅವರ ಮೂರ್ತಿಗಳಲ್ಲಿ ಶಕ್ತಿಯು ಕಡಿಮೆ ಪ್ರಮಾಣದಲ್ಲಿ ನಿರ್ಮಾಣವಾಗುವುದರಿಂದ ಅವರ ದೇವಸ್ಥಾನಗಳಲ್ಲಿ ಶೀತಲತೆಯ ಅರಿವಾಗುತ್ತದೆ. ಶಿವಮಂದಿರಗಳಲ್ಲಿ ಶಕ್ತಿಯು ಹೆಚ್ಚು ಪ್ರಮಾಣದಲ್ಲಿ ನಿರ್ಮಾಣವಾಗುವುದರಿಂದ ಉಷ್ಣತೆಯ ಅರಿವಾಗುತ್ತದೆ.
ಮೃತ್ಯು ಯಾವುದೇ ಕ್ಷಣ ಬರಬಹುದು. ಇದರ ಅರಿವನ್ನಿಟ್ಟುಕೊಂಡು ಬಹುಪ್ರಯತ್ನದಿಂದ ದೊರಕಿರುವ ಈ ಮನುಷ್ಯಜನ್ಮವನ್ನು ಸಾರ್ಥಕ ಮಾಡಿಕೊಳ್ಳಲು ಮತ್ತು ನಮ್ಮ ಪ್ರತಿಯೊಂದು ಕ್ಷಣವನ್ನು ಪವಿತ್ರ ಹಾಗೂ ಆನಂದಮಯಗೊಳಿಸಲು ಪ್ರಯತ್ನಿಸಬೇಕು ಎಂಬುದನ್ನೇ ಭಸ್ಮವು ಸೂಚಿಸುತ್ತದೆ.
ಶಿವಲಿಂಗಕ್ಕೆ ಅಭಿಷೇಕ ಮಾಡಿದ ನಂತರ ಅದರಿಂದ ಪ್ರಕ್ಷೇಪಿತವಾದ ಚೈತನ್ಯ(ಶಿವತತ್ತ್ವ)ವನ್ನು ಸಾಧಕನು ತನ್ನ ಕ್ಷಮತೆಗನುಸಾರ ಗ್ರಹಣ ಮಾಡಿದನು. ಇದರಿಂದ ಅವನ ದೇಹದಲ್ಲಿದ್ದ ತೊಂದರೆದಾಯಕ ಶಕ್ತಿಯಲ್ಲಿನ ಸ್ಥಾನದಲ್ಲಿನ ತೊಂದರೆದಾಯಕ ಶಕ್ತಿ ಹಾಗೂ ಅವನ ಸುತ್ತಲಿನ ತೊಂದರೆದಾಯಕ ಆವರಣ ಕಡಿಮೆ ಆಯಿತು.
ಬಿಲ್ವಪತ್ರೆಯನ್ನು ಶಿವಲಿಂಗದ ಮೇಲೆ ಕೆಳಮುಖವಾಗಿ ಅರ್ಪಿಸಿದರೆ ಅದರಿಂದ ನಿರ್ಗುಣ ಸ್ತರದಲ್ಲಿನ ಸ್ಪಂದನಗಳು ಹೆಚ್ಚಿನ ಪ್ರಮಾಣದಲ್ಲಿ ಪ್ರಕ್ಷೇಪಿತವಾಗಿ ಭಕ್ತರಿಗೆ ಹೆಚ್ಚು ಲಾಭವಾಗುತ್ತದೆ. ಶಿವನಿಗೆ ತಾಜಾ ಬಿಲ್ವಪತ್ರೆ ಸಿಗದಿದ್ದರೆ ಹಿಂದಿನ ದಿನ ತೆಗೆದಿಟ್ಟ ಬಿಲ್ವಪತ್ರೆಯು ನಡೆಯುತ್ತದೆ, ಆದರೆ ಸೋಮವಾರದ ಬಿಲ್ವಪತ್ರೆ ಮರುದಿನ ನಡೆಯುವುದಿಲ್ಲ.
ಶಿವರಾತ್ರಿಯಂದು ರಾತ್ರಿಯ ನಾಲ್ಕು ಪ್ರಹರಗಳಲ್ಲಿ ನಾಲ್ಕು ಪೂಜೆಗಳನ್ನು ಮಾಡಬೇಕೆಂಬ ವಿಧಾನವಿದೆ. ಅದಕ್ಕೆ ‘ಯಾಮಪೂಜೆ’ ಎನ್ನುತ್ತಾರೆ. ಪ್ರತಿಯೊಂದು ಯಾಮ ಪೂಜೆಯಲ್ಲಿ ದೇವರಿಗೆ ಅಭ್ಯಂಗಸ್ನಾನ ಮಾಡಿಸಬೇಕು, ಅನುಲೇಪನ ಮಾಡಿ ಧತ್ತೂರಿ, ಮಾವಿನ ಹಾಗೂ ಬಿಲ್ವದ ಎಲೆಗಳನ್ನು ಅರ್ಪಿಸಬೇಕು.
ಕಲಿಯುಗದಲ್ಲಿ ನಾಮ ಸ್ಮರಣೆಯೇ ಸಾಧನೆಯೆಂದು ಹೇಳಲಾಗಿದೆ. ಮಹಾಶಿವರಾತ್ರಿಯಂದು ೧ ಸಾವಿರ ಪಟ್ಟುಗಳಷ್ಟು ಕಾರ್ಯನಿರತವಾಗುವ ಶಿವತತ್ತ್ವದಿಂದ ಆಧ್ಯಾತ್ಮಿಕ ಸ್ತರದಲ್ಲಿ ಲಾಭವನ್ನು ಪಡೆದುಕೊಳ್ಳಲು ‘ಓಂ ನಮಃ ಶಿವಾಯ’ ಈ ನಾಮಜಪವನ್ನು ಎಷ್ಟು ಸಾಧ್ಯವಿದೆಯೋ ಅಷ್ಟು ಅಧಿಕ ಮಾಡಬೇಕು.
ತೈತ್ತಿರೀಯ ಉಪನಿಷತ್ತಿನಲ್ಲಿ ಬ್ರಹ್ಮ, ಮಾಯೆ, ಜೀವ, ಮನಸ್ಸು, ಬುದ್ಧಿ, ಚಿತ್ತ, ಅಹಂಕಾರ ಮತ್ತು ಪಂಚ ಮಹಾಭೂತಗಳು ಎಂಬ ಹನ್ನೆರಡು ತತ್ತ್ವಗಳನ್ನು ಹನ್ನೆರಡು ಜ್ಯೋತಿರ್ಲಿಂಗಗಳೆಂದು ಕರೆಯಲಾಗಿದೆ.