ಚೈತ್ರ ಶುಕ್ಲ ಪಕ್ಷ ಪಾಡ್ಯದಂದು ವರ್ಷಾರಂಭ ಮಾಡುವುದರ ಹಿಂದಿನ ನೈಸರ್ಗಿಕ, ಐತಿಹಾಸಿಕ ಮತ್ತು ಆಧ್ಯಾತ್ಮಿಕ ಕಾರಣಗಳು
ಈ ದಿನವೇ ಬ್ರಹ್ಮದೇವನು ಸೃಷ್ಟಿಯನ್ನು ನಿರ್ಮಿಸಿದನು, ಅರ್ಥಾತ್ ಈ ದಿನ ಸತ್ಯಯುಗವು ಪ್ರಾರಂಭವಾಯಿತು. ಆದುದರಿಂದಲೇ ಈ ದಿನದಂದು ವರ್ಷಾರಂಭವನ್ನು ಮಾಡುತ್ತಾರೆ.
ಈ ದಿನವೇ ಬ್ರಹ್ಮದೇವನು ಸೃಷ್ಟಿಯನ್ನು ನಿರ್ಮಿಸಿದನು, ಅರ್ಥಾತ್ ಈ ದಿನ ಸತ್ಯಯುಗವು ಪ್ರಾರಂಭವಾಯಿತು. ಆದುದರಿಂದಲೇ ಈ ದಿನದಂದು ವರ್ಷಾರಂಭವನ್ನು ಮಾಡುತ್ತಾರೆ.
ಈ ದಿನದಂದು ಪೃಥ್ವಿಯ ಮೇಲೆ ಬ್ರಹ್ಮನ ಮತ್ತು ವಿಷ್ಣುವಿನ ತತ್ತ್ವಗಳು ಅಗಾಧ ಪ್ರಮಾಣದಲ್ಲಿ ಕಾರ್ಯನಿರತವಾಗಿರುತ್ತವೆ. ಇದೇ ದಿನದಂದು ವನವಾಸವನ್ನು ಮುಗಿಸಿ ಮರಳಿದ ಪ್ರಭು ಶ್ರೀರಾಮನನ್ನು ಮುಂಬಾಗಿಲಿನಲ್ಲಿ ಬ್ರಹ್ಮಧ್ವಜ ನಿಲ್ಲಿಸಿ ಪ್ರಜೆಗಳು ಸ್ವಾಗತಿಸಿದರು.
ಜೀವದ ಉದ್ಧಾರಕ್ಕಾಗಿ ಸುಷುಮ್ನಾನಾಡಿಯು ಶುದ್ಧವಾಗಿರುವುದು ಆವಶ್ಯಕವಾಗಿದೆ. ಅದರಿಂದ ಆ ಜೀವವು ಶುದ್ಧವಾಗುತ್ತದೆ; ಈ ಸಾಮಥ್ರ್ಯ ಮತ್ತು ಈ ಗೂಢ ಜ್ಞಾನವು ಈ ಭಾಗವತದಲ್ಲಿನ ಕಥೆಯಿಂದ ಗಮನಕ್ಕೆ ಬರುತ್ತದೆ. ಈ ರೀತಿ ಬ್ರಹ್ಮಧ್ವಜದ ಮಹತ್ವವು ಮಹಾನವಾಗಿದೆ.
ಈ ಧ್ವಜದ ಮಾಧ್ಯಮದಿಂದ ವಾತಾವರಣದಲ್ಲಿ ವಿದ್ಯಮಾನವಾಗಿರುವ ಪ್ರಜಾಪತಿ, ಸೂರ್ಯ ಮತ್ತು ಸಾತ್ತ್ವಿಕ ಲಹರಿಗಳನ್ನು ನಾವು ಗ್ರಹಿಸುವಂತಾಗಲಿ. ನನಗೆ ಪ್ರಾಪ್ತವಾದ ಶಕ್ತಿಯು ನಮ್ಮಿಂದ ಸಾಧನೆಗಾಗಿ, ಗುರುಸೇವೆಗಾಗಿ, ಹಾಗೆಯೇ ರಾಷ್ಟ್ರ ಮತ್ತು ಧರ್ಮದ ಕಾರ್ಯಕ್ಕಾಗಿ ಉಪಯೋಗವಾಗಲಿ’ ಎಂದು ಪ್ರಾರ್ಥನೆ.
ಮಾಡಿದ ಅಭ್ಯಾಸ ಹಾಗೂ ಭಾಗವಹಿಸಿದ ಸಾಧಕರ ವೈಯಕ್ತಿಕ ಅನುಭವಗಳಿಂದ ಭಾರತೀಯ ಪದ್ಧತಿಯಿಂದ ಬ್ರಹ್ಮಧ್ವಜದ ಪೂಜೆ ಮಾಡಿ ಹೊಸವರ್ಷಾರಂಭ ಮಾಡುವುದು ಆಧ್ಯಾತ್ಮಿಕ ದೃಷ್ಟಿಯಲ್ಲಿ ಲಾಭದಾಯಕವಾಗಿದೆ ಮತ್ತು ಪಾಶ್ಚಾತ್ಯ ಪದ್ಧತಿಯಲ್ಲಿ ಹೊಸವರ್ಷಾರಂಭ ಮಾಡುವುದು ಹಾನಿಕರವಾಗಿದೆ, ಎಂಬುದು ಸ್ಪಷ್ಟವಾಗುತ್ತದೆ.’
ಯುಗಾದಿಯಂದು ಭೂಮಿಯನ್ನು ಉಳಬೇಕು. ಭೂಮಿಯನ್ನು ಉಳುವಾಗ ಕೆಳಗಿನ ಮಣ್ಣು ಮೇಲೆ ಬರುತ್ತದೆ. ಮಣ್ಣಿನ ಸೂಕ್ಷ್ಮಕಣಗಳ ಮೇಲೆ ಪ್ರಜಾಪತಿ ಲಹರಿಗಳ ಸಂಸ್ಕಾರವಾಗಿ ಬೀಜದ ಮೊಳಕೆಯೊಡೆಯುವ ಭೂಮಿಯ ಸಾಮಥ್ರ್ಯವು ಅನೇಕ ಪಟ್ಟು ಹೆಚ್ಚಾಗುತ್ತದೆ.
ಇದನ್ನೇ ಇಂದಿನ ಬ್ರಹ್ಮಧ್ವಜದ ಮೂಲಸ್ವರೂಪವೆಂದು ಹೇಳಲಾಗುತ್ತದೆ. ಪಾಡ್ಯದ ಈ ಉತ್ಸವವು ಹೊಸ ವರ್ಷದ ಪ್ರಾರಂಭವಾಗಿರುವುದರಿಂದ ಈ ದಿನವನ್ನು ಸಂತೋಷದಿಂದ ಆಚರಿಸಿದರೆ ಮುಂದಿನ ವರ್ಷವೆಲ್ಲ ಆನಂದಮಯವಾಗಿರುತ್ತದೆಯೆಂದು ನಂಬಲಾಗುತ್ತದೆ.
ಭಾಷಾಶುದ್ಧಿಯ ವ್ರತವನ್ನು ಅಂಗೀಕರಿಸುವುದು ಎಂದರೆ ಪ್ರತಿ ಜೀವವು ಯೋಗ್ಯ ಅಂದರೆ ಶುದ್ಧ ಭಾಷೆ ಉಚ್ಚರಿಸುವುದಾಗಿದೆ. ಅದರೊಂದಿಗೆ ಭಾಷೆಯಲ್ಲಿರುವ ದೇವರೂಪಿ ಚೈತನ್ಯವನ್ನು ಸ್ವತಃ ಗ್ರಹಿಸಲು ಪ್ರಯತ್ನಿಸಿದರೆ ವಾಯುಮಂಡಲ ಹಾಗೂ ಸಮಾಜ ಶುದ್ಧಗೊಳ್ಳುತ್ತದೆ.
‘ಹೋರಾ’ ಎಂದರೆ ೬೦ ನಿಮಿಷಗಳು ಅಂದರೆ ಎರಡೂವರೆ ಘಟಕ. ಪ್ರತಿಯೊಂದು ಘಟಕವು ೨೪ ನಿಮಿಷಗಳದ್ದಾಗಿರುತ್ತದೆ. ಆದ್ದರಿಂದ ಎರಡೂವರೆ ಘಟಕಗಳ ಒಂದು ಗಂಟೆಯಾಗುತ್ತದೆ. ಈ ಗಂಟೆಗೆ ಆಂಗ್ಲ ಭಾಷೆಯಲ್ಲಿ ‘ಅವರ್’ (Hour) ಎನ್ನುತ್ತಾರೆ. ಆ ಶಬ್ದವು ‘ಹೋರಾ’ದಿಂದಲೇ ಬಂದಿದೆ.
ಮಹಾಭಾರತದ ಖಿಲಪರ್ವದಲ್ಲಿ ಕೃಷ್ಣನು ಇಂದ್ರನ ಕ್ರೋಧವನ್ನು ಪರಿಗಣಿಸದೇ ವಾರ್ಷಿಕ ಶಕ್ರೋತ್ಸವ (ಇಂದ್ರೋತ್ಸವ)ವನ್ನು ಸ್ಥಗಿತಗೊಳಿಸುವಂತೆ ಉಪದೇಶಿಸುತ್ತಾನೆ. ಮಹಾಭಾರತದ ಆದಿಪರ್ವದಲ್ಲಿ ಈ ಉತ್ಸವವನ್ನು ವರ್ಷದ ಪಾಡ್ಯದಂದು ಆಚರಿಸುವಂತೆ ತಿಳಿಸಲಾಗಿದೆ.