ಹಿಂದೂ ಸಂಸ್ಕ್ರತಿಯನ್ನು ಹೆಚ್ಚಿಸುವ ಹಿಂದೂಗಳ ಪಾರಂಪಾರಿಕ ನವವರ್ಷದ ಯುಗಾದಿ ಹಬ್ಬ !
ಯುಗಾದಿ, ಅಂದರೆ ಚೈತ್ರ ಶುಕ್ಲ ಪಾಡ್ಯ. ಈ ದಿನ, ಶಿಶಿರ ಋತು ಮುಗಿದು ವಸಂತ ಋತುವಿನ ಆಗಮನವಾಗಿರುತ್ತದೆ ಮತ್ತು ಪೂರ್ಣ ಚರಾಚರ ಸೃಷ್ಟಿಯು ಸೃಜನೆಯ (ಸೃಷ್ಟಿಯ) ಪರಿಮಳದಿಂದ ತುಂಬಿರುತ್ತದೆ.
ಯುಗಾದಿ, ಅಂದರೆ ಚೈತ್ರ ಶುಕ್ಲ ಪಾಡ್ಯ. ಈ ದಿನ, ಶಿಶಿರ ಋತು ಮುಗಿದು ವಸಂತ ಋತುವಿನ ಆಗಮನವಾಗಿರುತ್ತದೆ ಮತ್ತು ಪೂರ್ಣ ಚರಾಚರ ಸೃಷ್ಟಿಯು ಸೃಜನೆಯ (ಸೃಷ್ಟಿಯ) ಪರಿಮಳದಿಂದ ತುಂಬಿರುತ್ತದೆ.
ಮನೆಯ ಮುಂದೆ ಅಂಗಳವಿದ್ದರೆ ಮಂಟಪ ಹಾಕಬೇಕು. ನೆಲ ಸಾರಿಸಿ ಸ್ವಸ್ತಿಕ, ಕಮಲ ಮುಂತಾದ ಶುಭಚಿಹ್ನೆಗಳಿರುವ ರಂಗೋಲಿ ಬಿಡಿಸಬೇಕು.
ಯುಗಾದಿ ಹಿಂದೂ ಗಳ ಮಹತ್ವದ ಹಬ್ಬವಾಗಿದೆ. ಹಿಂದೂಗಳ ಹೊಸ ವರ್ಷ ಈ ದಿನದಿಂದ ಪ್ರಾರಂಭವಾಗುತ್ತದೆ. ಈ ದಿನದಂದು ಪೃಥ್ವಿಯ ಮೇಲೆಬ್ರಹ್ಮನ ಮತ್ತುವಿಷ್ಣುವಿನ ತತ್ತ್ವಗಳು ಅಗಾಧ ಪ್ರಮಾಣದಲ್ಲಿ ಕಾರ್ಯನಿರತವಾಗಿರುತ್ತವೆ
ದೊಡ್ಡ ಕೋಲಿನ ತುದಿಗೆ ಹಸಿರು ಅಥವಾ ಹಳದಿ ಬಣ್ಣದ ಜರಿಯ ಖಣವನ್ನು ಕಟ್ಟುತ್ತಾರೆ. ಅದರ ಮೇಲೆ ಸಕ್ಕರೆಯ ಗಂಟು, ಬೇವಿನ ಚಿಗುರೆಲೆ, ಮಾವಿನ ಎಲೆ ಮತ್ತು ಕೆಂಪು ಹೂವುಗಳ ಹಾರವನ್ನು ಕಟ್ಟಿ ಮೇಲೆ ಬೆಳ್ಳಿಯ ಅಥವಾ ತಾಮ್ರದ ಕಲಶದಿಂದ ಶೃಂಗರಿಸಿ ಧ್ವಜವನ್ನು ನಿಲ್ಲಿಸುತ್ತಾರೆ.
ಯುಗಾದಿ ಎಂದು ಹೇಳಿದೊಡನೆ ಬ್ರಹ್ಮಧ್ವಜದ ಪೂಜೆ, ರಂಗೋಲಿಗಳು, ಹೊಸ ಉಡುಗೆತೊಡುಗೆಗಳು, ಸಿಹಿತಿಂಡಿ, ಕೇಸರಿ ಧ್ವಜ ಕಣ್ಣೆದುರು ಬರುತ್ತದೆ ಮತ್ತು ಎಲ್ಲಕ್ಕಿಂತ ಮಹತ್ವದ್ದೆಂದರೆ ಹೊಸ ವರ್ಷದ ಶುಭಾಶಯಗಳು ! ಹೌದು ಹಿಂದೂ ಹೊಸ ವರ್ಷದ ಹಾರ್ದಿಕ ಶುಭಾಶಯಗಳು !
ವ್ಯಷ್ಟಿ ಸಾಧನೆ, ಎಂದರೆ ನಾಮಜಪ ಧರ್ಮಾಚರಣೆ ಮಾಡಿ ಮತ್ತು ಸಮಷ್ಟಿ ಸಾಧನೆ, ಎಂದರೆ ಹಿಂದೂ ರಾಷ್ಟ್ರ ಹಾಗೂ ಧರ್ಮರಕ್ಷಣೆ ಮಾಡಿ ಹಿಂದೂ ಧರ್ಮದ ಪತಾಕೆಯನ್ನು ಇಡೀ ವಿಶ್ವದಲ್ಲಿ ಹಾರಿಸೋಣ’, ಎಂದು ನಾವು ಬ್ರಹ್ಮಧ್ವಜದ ಎದುರು ಪ್ರತಿಜ್ಞೆ ಮಾಡುತ್ತೇವೆ.’
ಈ ದಿನವೇ ಬ್ರಹ್ಮದೇವನು ಸೃಷ್ಟಿಯನ್ನು ನಿರ್ಮಿಸಿದನು, ಅರ್ಥಾತ್ ಈ ದಿನ ಸತ್ಯಯುಗವು ಪ್ರಾರಂಭವಾಯಿತು.ಆದುದರಿಂದಲೇ ಈ ದಿನದಂದು ವರ್ಷಾರಂಭವನ್ನು ಮಾಡುತ್ತಾರೆ.
ನೆಲ ಸಾರಿಸಿ ಸ್ವಸ್ತಿಕ, ಕಮಲ ಮುಂತಾದ ಶುಭಚಿಹ್ನೆಗಳಿರುವ ರಂಗೋಲಿ ಬಿಡಿಸಬೇಕು.
ಈ ದಿನದಂದು ಬ್ರಹ್ಮದೇವನು ಸೃಷ್ಟಿಯನ್ನು ನಿರ್ಮಿಸಿದನು. ಸೃಷ್ಟಿಯ ಪ್ರಾರಂಭದಿನ, ಅಂದರೆ ಕಾಲಗಣನೆಯ ಪ್ರಥಮದಿನವು ಚೈತ್ರಪ್ರತಿಪದೆ ಆಗಿದ್ದರೂ ಇಂದು ಭಾರತದಲ್ಲಿ ಎಲ್ಲೆಡೆಯೂ ಜನವರಿ ೧ ರಂದು ಹೊಸವರ್ಷಾರಂಭವೆಂದು ಆಚರಿಸಲ್ಪಡುತ್ತದೆ. ಇದು ಸ್ವತಂತ್ರ ಭಾರತದ ಸಂಸ್ಕೃತಿಯ ಪರಾಭವವಾಗಿದೆ.