ಹಿಂದೂಗಳ ಮತ್ತು ಇತರೆ ಪಂಥದವರ ಕಾಲಗಣನೆ
ನಮ್ಮ ದಿನವು ಸೂರ್ಯನ ಉದಯದೊಂದಿಗೆ ಪ್ರಾರಂಭವಾಗುತ್ತದೆ. ಅದರಿಂದ ನಮ್ಮ ದಿನದ ಪ್ರಾರಂಭಕ್ಕೆ ನೈಸರ್ಗಿಕ ಅಧಿಷ್ಠಾನ ದೊರಕಿದೆ. ನಮ್ಮಲ್ಲಿ ವಾರದ ಪ್ರಾರಂಭದಲ್ಲಿ ಆ ವಾರದ ದೇವತೆಯ ಮೊದಲ ‘ಹೋರಾ ಇರುತ್ತದೆ. ‘ಹೋರಾ ಎಂದರೆ ೬೦ ನಿಮಿಷಗಳು ಅಂದರೆ ಎರಡೂವರೆ ಘಟಕ.
ನಮ್ಮ ದಿನವು ಸೂರ್ಯನ ಉದಯದೊಂದಿಗೆ ಪ್ರಾರಂಭವಾಗುತ್ತದೆ. ಅದರಿಂದ ನಮ್ಮ ದಿನದ ಪ್ರಾರಂಭಕ್ಕೆ ನೈಸರ್ಗಿಕ ಅಧಿಷ್ಠಾನ ದೊರಕಿದೆ. ನಮ್ಮಲ್ಲಿ ವಾರದ ಪ್ರಾರಂಭದಲ್ಲಿ ಆ ವಾರದ ದೇವತೆಯ ಮೊದಲ ‘ಹೋರಾ ಇರುತ್ತದೆ. ‘ಹೋರಾ ಎಂದರೆ ೬೦ ನಿಮಿಷಗಳು ಅಂದರೆ ಎರಡೂವರೆ ಘಟಕ.
ನಾರದ ಮುನಿಗಳಿಗೆ ೬೦ ಪುತ್ರರಿದ್ದರು. ಪ್ರತಿಯೊಬ್ಬ ಪುತ್ರನು ಚೈತ್ರ ಶುಕ್ಲ ಪಾಡ್ಯದಂದು ಜನಿಸಿದ್ದನು ಮತ್ತು ಪ್ರತಿಯೊಬ್ಬ ಪುತ್ರನ ಜನನದ ಸಮಯದಲ್ಲಿ ದೇವತೆಗಳು ಬ್ರಹ್ಮಧ್ವಜ-ಪತಾಕೆಯನ್ನು ಸ್ಥಾಪಿಸಿ ಆನಂದೋತ್ಸವವನ್ನು ಆಚರಿಸಿದರು. ಅಂದಿನಿಂದ ಈ ಹೊಸ ಸಂವತ್ಸರವನ್ನು ಸ್ವಾಗತ ಮಾಡುವಾಗ ಮನೆಯ ಹೊರಗೆ ಒಂದು ಎತ್ತರದ ಬ್ರಹ್ಮಧ್ವಜ ಸ್ಥಾಪಿಸುವ ಪರಂಪರೆಯು ಪ್ರಾರಂಭವಾಯಿತು
‘ಯುಗಾದಿ ಅಂದರೆ ಚೈತ್ರ ಶುಕ್ಲ ಪಕ್ಷ ಪಾಡ್ಯ, ಇದು ಹಿಂದೂಗಳ ವರ್ಷಾರಂಭವಾಗಿದೆ. ಈ ಯುಗಾದಿ ತಿಥಿಯು ಶಾಸ್ತ್ರಾನು ಸಾರ ಮೂರುವರೆ ಮುಹೂರ್ತಗಳ ಪೈಕಿ ಒಂದಾಗಿರುವುದರಿಂದ ಈ ದಿನ ಶುಭ ಕಾರ್ಯಗಳನ್ನು ಮಾಡಲಾಗುತ್ತದೆ ಅಥವಾ ಕಾರ್ಯದ ಹೊಸಸಂಕಲ್ಪವನ್ನು ಮಾಡಲಾಗು ತ್ತದೆ.
ಯುಗಾದಿ ಹಿಂದೂಗಳ ಮಹತ್ವದ ಹಬ್ಬವಾಗಿದೆ. ಹಿಂದೂಗಳ ಹೊಸ ವರ್ಷ ಈ ದಿನದಿಂದ ಪ್ರಾರಂಭವಾಗುತ್ತದೆ. ಈ ದಿನದಂದು ಪೃಥ್ವಿಯ ಮೇಲೆ ಬ್ರಹ್ಮನ ಮತ್ತು ವಿಷ್ಣುವಿನ ತತ್ತ್ವಗಳು ಅಗಾಧ ಪ್ರಮಾಣದಲ್ಲಿ ಕಾರ್ಯನಿರತವಾಗಿರುತ್ತದೆ.
ಶರೀರಕ್ಕೆ ಎಣ್ಣೆ ಹಚ್ಚಿ ಅದನ್ನು ತಿಕ್ಕಿ ತ್ವಚೆಯಲ್ಲಿ ಇಂಗಿಸಿ ನಂತರ ಬಿಸಿನೀರಿನಿಂದ ಸ್ನಾನ ಮಾಡುವುದೆಂದರೆ ಅಭ್ಯಂಗಸ್ನಾನ. ಯುಗಾದಿ ಪಾಡ್ಯದಂದು ಮುಂಜಾನೆ ಬೇಗನೇ ಎದ್ದು ಮೊದಲು ಅಭ್ಯಂಗ ಸ್ನಾನ ಮಾಡಬೇಕು.
ಪಾಶ್ಚಾತ್ಯ ಮತ್ತು ಭಾರತೀಯ ಹೊಸವರ್ಷವನ್ನು ಪರಸ್ಪರ ತುಲನೆ ಮಾಡಲು ಸಾಧ್ಯವೇ ಇಲ್ಲ. ಎರಡೂ ಕಾರ್ಯಕ್ರಮಗಳಲ್ಲಿ ಅನುಕ್ರಮವಾಗಿ ತಮ ವಿರುದ್ಧ ಸತ್ತ್ವ, ಶಬ್ದಮಾಲಿನ್ಯದ ವಿರುದ್ಧ ಶಾಂತಿ, ಭ್ರಮೆಯ ವಿರುದ್ಧ ಸತ್ಯತೆ, ಅಲ್ಪಕಾಲದ ವಿರುದ್ಧ ದೀರ್ಘಕಾಲ ಉಳಿಯುವ, ಬಹಿರ್ಮುಖ ವಿರುದ್ಧ ಅಂತರ್ಮುಖ, ಹೀಗೆ ಸ್ಪಷ್ಟವಾದ ವ್ಯತ್ಯಾಸಗಳ ಅರಿವಾಯಿತು.
ಕಲಶವನ್ನು ಮಗುಚಿಡದೇ ನೆಟ್ಟಗೆ ಇಟ್ಟರೆ, ಸಂಪೂರ್ಣವಾಗಿ ಊರ್ಧ್ವ ದಿಕ್ಕಿನತ್ತ ಲಹರಿಗಳು ಪ್ರಕ್ಷೇಪಿತಗೊಳ್ಳುವುದರಿಂದ ಭೂಮಿಯ ಸಮೀಪದಲ್ಲಿನ ಕನಿಷ್ಠ ಹಾಗೂ ಮಧ್ಯಮ ಸ್ತರದ ಶುದ್ಧೀಕರಣ ಆಗುವುದಿಲ್ಲ ಮತ್ತು ಇದರಿಂದ ವಾಯುಮಂಡಲದಲ್ಲಿನ ಕೇವಲ ನಿರ್ದಿಷ್ಠ ಊರ್ಧ್ವ ಪಟ್ಟಿಯ ಶುದ್ಧೀಕರಣವಾಗಲು ಸಹಾಯವಾಗುತ್ತದೆ.
ಬಿದಿರಿನ ಕೋಲು ಸುಷುಮ್ನಾ ನಾಡಿಯ ಪ್ರತೀಕವಾಗಿದ್ದು ಅದು ಶರೀರದಲ್ಲಿಎಲ್ಲೆಡೆ ಚೈತನ್ಯಶಕ್ತಿಯ (ಕುಂಡಲಿನಿ ಶಕ್ತಿಯ) ಕಾರ್ಯವನ್ನು ಮಾಡುತ್ತದೆ. ಅದನ್ನು ಕಾರ್ಯಕ್ಕಾಗಿ ಜಾಗೃತಗೊಳಿಸಲು ಈ ಪೂಜೆಯನ್ನು ಮಾಡಲಾಗುತ್ತದೆ. ಆ ಶಕ್ತಿಯನ್ನು ಸಿಂಗರಿಸಲು ಕೋಲಿಗೆ ವಸ್ತ್ರವನ್ನು ತೊಡಿಸಲಾಗುತ್ತದೆ.
ವ್ಯಷ್ಟಿ ಸಾಧನೆ, ಎಂದರೆ ನಾಮಜಪ ಧರ್ಮಾಚರಣೆ ಮಾಡಿ ಮತ್ತು ಸಮಷ್ಟಿ ಸಾಧನೆ, ಎಂದರೆ ಹಿಂದೂ ರಾಷ್ಟ್ರ ಹಾಗೂ ಧರ್ಮರಕ್ಷಣೆ ಮಾಡಿ ಹಿಂದೂ ಧರ್ಮದ ಪತಾಕೆಯನ್ನು ಇಡೀ ವಿಶ್ವದಲ್ಲಿ ಹಾರಿಸೋಣ, ಎಂದು ನಾವು ಬ್ರಹ್ಮಧ್ವಜದ ಎದುರು ಪ್ರತಿಜ್ಞೆ ಮಾಡುತ್ತೇವೆ.