ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಇವರ ಬೋಧಪ್ರದ ಮಾರ್ಗದರ್ಶನ !
ತನು, ಮನ, ಧನ ಮತ್ತು ಅಹಂ ಇವುಗಳ ತ್ಯಾಗವಾಗಿ ಮತ್ತು ಈಶ್ವರನ ಬಗ್ಗೆ ಭಾವ ಮತ್ತು ಭಕ್ತಿ ಹೆಚ್ಚಾದಾಗ ಈಶ್ವರನ ಕೃಪೆಯಾಗುತ್ತದೆ !
ತನು, ಮನ, ಧನ ಮತ್ತು ಅಹಂ ಇವುಗಳ ತ್ಯಾಗವಾಗಿ ಮತ್ತು ಈಶ್ವರನ ಬಗ್ಗೆ ಭಾವ ಮತ್ತು ಭಕ್ತಿ ಹೆಚ್ಚಾದಾಗ ಈಶ್ವರನ ಕೃಪೆಯಾಗುತ್ತದೆ !
ಶ್ರೀಚಿತ್ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರ ವೈಶಿಷ್ಟ್ಯವೆಂದರೆ ಅವರು ಸ್ಥೂಲ ಮತ್ತು ಸೂಕ್ಷ್ಮವಾಗಿರುವ ಯಾವುದೇ ರೀತಿಯ ಕಾರ್ಯವನ್ನು ಉತ್ತಮ ರೀತಿಯಲ್ಲಿ ಮಾಡುತ್ತಾರೆ. ಅವರು ಯಾವುದೇ ವಿಷಯಲ್ಲಿಯೂ ಕಡಿಮೆ ಇಲ್ಲ. ಇದುವರೆಗೆ ಅವರು ಎಲ್ಲ ವಿಷಯಗಳಲ್ಲಿ ಜ್ಞಾನವನ್ನು ಗ್ರಹಿಸಿದ್ದಾರೆ.
‘ಎಲ್ಲಿ ಸ್ವೇಚ್ಛೆಯಿಂದ ವರ್ತಿಸಲು ಪ್ರೋತ್ಸಾಹಿಸಿ ಮಾನವನನ್ನು ಅವನತಿಯತ್ತ ಕರೆದೊಯ್ಯುವ ಬುದ್ಧಿಜೀವಿಗಳು ಮತ್ತು ಎಲ್ಲಿ ಮಾನವನಿಗೆ ಸ್ವೇಚ್ಛೆಯ ತ್ಯಾಗ ಮಾಡುವುದನ್ನು ಕಲಿಸಿ ಈಶ್ವರ ಪ್ರಾಪ್ತಿಯನ್ನು ಮಾಡಿಸುವ ಸಂತರು !’
ಎಲ್ಲಿ ಶಿಶುವಿಹಾರ ಮಟ್ಟದ ಮತ್ತು ಶೋಧ ಕಾರ್ಯ ಮಾಡುವ ಪಾಶ್ಚಾತ್ಯರ ವಿಜ್ಞಾನ; ಮತ್ತು ಎಲ್ಲಿ ಲಕ್ಷಾಂತರ ವರ್ಷಗಳ ಹಿಂದೆಯೇ ಪರಿಪೂರ್ಣತೆ ಪ್ರಾಪ್ತ ಮಾಡಿಕೊಂಡಹಿAದೂ ಧರ್ಮದ ವಿಜ್ಞಾನ !
ವಿಜ್ಞಾನದಲ್ಲಿ ಪ್ರಯೋಗ ಮಾಡುವುದು, ಅಂಕಿಅಂಶಗಳನ್ನು ಸಂಗ್ರಹಿಸಿ ಅದರ ವಿಶ್ಲೇಷಣೆ ಮಾಡುವುದು ಇತ್ಯಾದಿಗಳ ಆಧಾರದಲ್ಲಿ ನಿಷ್ಕರ್ಷಕ್ಕೆ ಬರಲಾಗುತ್ತದೆ. ತದ್ವಿರುದ್ಧ ಅಧ್ಯಾತ್ಮದಲ್ಲಿ ತಕ್ಷಣವೇ ನಿಷ್ಕರ್ಷವು ತಿಳಿಯುತ್ತದೆ !
ಪೊಲೀಸರು ಮತ್ತು ನ್ಯಾಯಾಧೀಶರಿಗೆ ಸಾಧನೆಯನ್ನು ಕಲಿಸುತ್ತಿದ್ದರೆ ಅವರಿಗೆ ಒಂದು ಕ್ಷಣದಲ್ಲಿ ಅಪರಾಧಿ ಯಾರೆಂದು ತಿಳಿಯುತ್ತಿತ್ತು. ಸಾಧನೆಯ ಅಭಾವದಿಂದಾಗಿ ತನಿಖೆ ಮಾಡುವುದಕ್ಕಾಗಿಯೇ ಜನರ ಕೋಟಿಗಟ್ಟಲೆ ಹಣ ಖರ್ಚಾಗುತ್ತಿದೆ. ಈಶ್ವರೀ ರಾಜ್ಯದಲ್ಲಿ ಹೀಗಿರುವುದಿಲ್ಲ ! – ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ
ದೇಶದಲ್ಲಿ ಎಷ್ಟು ಕೋಟಿ ಮನುಷ್ಯರು ಸುಖವಾಗಿ ಬಾಳಬಹುದು, ಅವರಿಗೆ ಸಾಕಾಗುವಷ್ಟು ಆಹಾರ-ನೀರು ದೊರಕುವುದು ಇದರ ಬಗ್ಗೆ ವಿಚಾರ ಮಾಡದ ಇದುವರೆಗಿನ ಸರಕಾರಗಳಿಂದಾಗಿ ದೇಶದ ಜನಸಂಖ್ಯೆ ಸ್ವಾತಂತ್ರ್ಯದ ಸಮಯದಲ್ಲಿ ೩೫ ಕೋಟಿ ಇದ್ದದ್ದು ಈಗ ೧೩೫ ಕೋಟಿಗಿಂತಲೂ ಹೆಚ್ಚು ಆಗಿದೆ.
ವ್ಯಷ್ಟಿ ಸಾಧನೆಯು ಚೆನ್ನಾಗಿ ಆಗದಿದ್ದರೆ, ಸೇವೆಯೂ ಚೆನ್ನಾಗಿ ಆಗುವುದಿಲ್ಲ. ಅದಕ್ಕಾಗಿ ಸ್ವಭಾವದೋಷಗಳು ಮತ್ತು ಅಹಂ ಇವುಗಳ ನಿರ್ಮೂಲನೆಯ ಪ್ರಕ್ರಿಯೆಯನ್ನು ನಿಯಮಿತವಾಗಿ ಮಾಡುವುದು ಅವಶ್ಯಕವಾಗಿದೆ.
ಧರ್ಮದ್ರೋಹಿ, ಅಧುನಿಕತಾವಾದಿ ಮತ್ತು ಬುದ್ಧಿಪ್ರಾಮಾಣ್ಯವಾದಿಗಳು ಮುಂದೆ ವಿವಾಹಿತ ಸ್ತ್ರೀಯರು ಮಂಗಳಸೂತ್ರ ಧರಿಸಬಾರದು, ಕುಂಕುಮ ಹಚ್ಚಬಾರದು, ಗೌರಿ ಪೂಜೆ ಅಥವಾ ವಟಸಾವಿತ್ರಿಯ ವ್ರತ ಮಾಡಬಾರದು, ಇತ್ಯಾದಿ ಫತ್ವಾ ಹೊರಡಿಸಿದರೆ, ಅದರಲ್ಲಿ ಆಶ್ಚರ್ಯವೇನಿಲ್ಲ. ಆದ್ದರಿಂದ ಹಿಂದೂ ರಾಷ್ಟ್ರದ ಸ್ಥಾಪನೆ ಮಾಡಿ !
ಹೆಚ್ಚಾಗಿ ಆಧಿದೈವಿಕ ಸಾಧನೆಯು ಸಕಾಮ ಸಾಧನೆಯಾಗಿದ್ದು ಅದು ಯಶಸ್ಸು, ಬಲ, ಬುದ್ಧಿ, ಸಿದ್ಧಿ ಇತ್ಯಾದಿ ಇಚ್ಛಿತ ವಿಷಯಗಳನ್ನು ಪ್ರಾಪ್ತಮಾಡಿಕೊಡುತ್ತದೆ, ಆದರೆ ಕೇವಲ ಆಧಿದೈವಿಕ ಸಾಧನೆಯನ್ನೇ ಜೀವಮಾನವಿಡೀ ಮಾಡುತ್ತಾ ಹೋದರೆ ಅವರ ಆಧ್ಯಾತ್ಮಿಕ ಪ್ರಗತಿ (ಉನ್ನತಿ) ಆಗುವುದಿಲ್ಲ.