ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಇವರ ಬೋಧಪ್ರದ ಮಾರ್ಗದರ್ಶನ !

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ

ಭಾರತದ ಪ್ರಾರಬ್ಧ ಬದಲಾಯಿಸಲು ಆಧ್ಯಾತ್ಮಿಕ ಸ್ತರದ ಪರಿಹಾರವೇ ಆವಶ್ಯಕ !

‘ಯಾವುದೇ ವ್ಯಕ್ತಿಯ ಪ್ರಾರಬ್ಧ ಬದಲಾಯಿಸುವುದು ಅಸಂಭವವಾಗಿದೆ. ಬದಲಾಯಿಸಲೇಬೇಕಾದರೆ ತೀವ್ರ ಸಾಧನೆ ಮಾಡಬೇಕಾಗುತ್ತದೆ. ಹೀಗಿರುವಾಗ ಶಾರೀರಿಕ, ಮಾನಸಿಕ ಮತ್ತು ಬೌದ್ಧಿಕ ಸ್ತರದಲ್ಲಿ ಪ್ರಯತ್ನಿಸಿ ಭಾರತದ ಪ್ರಾರಬ್ಧವನ್ನು ಬದಲಾಯಿಸಲು ಸಾಧ್ಯವೇನು ? ಅದಕ್ಕೆ ಆಧ್ಯಾತ್ಮಿಕ ಸ್ತರದ  ಪರಿಹಾರ, ಅಂದರೆ ಸಾಧನೆಯ ಬಲ ಬೇಕಾಗುತ್ತದೆ.’

ಬಾಲಕರಲ್ಲಿ ರಾಷ್ಟ್ರಪ್ರೇಮ ಮೂಡಿಸಲು ಇದನ್ನು ಮಾಡಿರಿ !

‘ಮುಂದಿನ ಪೀಳಿಗೆ ಭಯೋತ್ಪಾದಕರಾಗಬಾರದು, ಅದಕ್ಕಾಗಿ ಶಾಲೆಯ ಪಠ್ಯಕ್ರಮಗಳಲ್ಲಿಯೇ ಹಿಂದೂ ಧರ್ಮದಲ್ಲಿ ಹೇಳಲಾದ ಜ್ಞಾನ, ವಿಜ್ಞಾನ ಮತ್ತು ಒಳ್ಳೆಯ ಸಂಸ್ಕಾರಗಳನ್ನು ಕಲಿಸಿದರೆ ಬಾಲಕರ ಮನಸ್ಸಿನಲ್ಲಿ ರಾಷ್ಟ್ರಪ್ರೇಮ ಉತ್ಪನ್ನವಾಗುತ್ತದೆ !’

ಸನಾತನ ಧರ್ಮದ ರಕ್ಷಣೆಗಾಗಿ ಇತಿಹಾಸದಿಂದ ಸ್ಪೂರ್ತಿ ಪಡೆಯಿರಿ !

‘ರಾಮಾಯಣ, ಮಹಾಭಾರತ ಅಥವಾ ಛತ್ರಪತಿ ಶಿವಾಜಿ ಮಹಾರಾಜರ ಚರಿತ್ರೆಯನ್ನು ಓದುವುದರ ಜೊತೆಗೆ ಅದರಲ್ಲಿನ ಘಟನೆಗಳಿಂದ ಸ್ಪೂರ್ತಿ ಪಡೆದು ಸನಾತನ ಧರ್ಮದ ರಕ್ಷಣೆ ಮಾಡಿರಿ !

– ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ