ಅಹಂಕಾರಿ ಬುದ್ಧಿಪ್ರಾಮಾಣ್ಯವಾದಿಗಳ ಮಿತಿ !
ಬುದ್ಧಿಪ್ರಾಮಾಣ್ಯವಾದಿಗಳಿಗೆ ವಿಜ್ಞಾನದ ಬಗ್ಗೆ ಎಷ್ಟೇ ಅಹಂಕಾರವಿದ್ದರೂ, ಅವರು ಗಮನದಲ್ಲಿಡಬೇಕಾದ ಸಂಗತಿಯೆಂದರೆ ಅವರು ಅತಿ ಚಿಕ್ಕದಾದ ಏಕಕೋಶದ ಜೀವಿಯನ್ನು ಮಾತ್ರವಲ್ಲದೇ, ಬಾಹ್ಯ ವಸ್ತುಗಳ ಉಪಯೋಗಿಸದೇ ಕಲ್ಲಿನ ಒಂದು ಕಣವನ್ನು ಸಹ ಸೃಷ್ಟಿಸಲು ಸಾಧ್ಯವಿಲ್ಲ.
ಬುದ್ಧಿಪ್ರಾಮಾಣ್ಯವಾದಿಗಳಿಗೆ ವಿಜ್ಞಾನದ ಬಗ್ಗೆ ಎಷ್ಟೇ ಅಹಂಕಾರವಿದ್ದರೂ, ಅವರು ಗಮನದಲ್ಲಿಡಬೇಕಾದ ಸಂಗತಿಯೆಂದರೆ ಅವರು ಅತಿ ಚಿಕ್ಕದಾದ ಏಕಕೋಶದ ಜೀವಿಯನ್ನು ಮಾತ್ರವಲ್ಲದೇ, ಬಾಹ್ಯ ವಸ್ತುಗಳ ಉಪಯೋಗಿಸದೇ ಕಲ್ಲಿನ ಒಂದು ಕಣವನ್ನು ಸಹ ಸೃಷ್ಟಿಸಲು ಸಾಧ್ಯವಿಲ್ಲ.
ಊಟದಲ್ಲಿ ಇಷ್ಟವಾದ ಆಹಾರ ಸೇವಿಸುವಾಗ ಸ್ವಲ್ಪ ಸಮಯ ಸುಖ ಸಿಗುತ್ತದೆ. ವಾಸನೆಯ ಸುಖ ಸಹ ಕೆಲವು ತಾಸಿನಷ್ಟು ಉಳಿಯುತ್ತದೆ. ತದ್ವಿರುದ್ಧ ಸಾಧನೆ ಮಾಡುವವರಿಗೆ ಜೀವಮಾನವಿಡಿ ಆನಂದ ಸಿಗುತ್ತದೆ.
ಹಿಂದೂ ರಾಷ್ಟ್ರದಲ್ಲಿ ಎಲ್ಲಾ ಕಾನೂನುಗಳು ಧರ್ಮಾಧಿಷ್ಠಿತವಾಗಿರು ವವು. ಆದ್ದರಿಂದ ಅವುಗಳನ್ನು ಬದಲಾಯಿಸಬೇಕಾಗುವುದಿಲ್ಲ ಮತ್ತು ಅದರ ಪಾಲನೆಯಿಂದ ಅಪರಾಧಗಳಾಗದೇ ಸಾಧನೆಯೇ ಆಗುವುದು.
ಅಧ್ಯಾತ್ಮ ಶಾಸ್ತ್ರವನ್ನು ಹೇಳುವಾಗ ಆಧುನಿಕ ವಿಜ್ಞಾನವು ಉಪಯೋಗಕ್ಕೆ ಬರುತ್ತದೆ. ‘ಅಧ್ಯಾತ್ಮವು ಅಂತಿಮ ಸತ್ಯವನ್ನು ತಿಳಿಸುತ್ತದೆ, ಅದನ್ನು ಸಾಬೀತು ಪಡಿಸಲು, ಅರ್ಥಾತ್ ಬುದ್ಧಿಜೀವಿಗಳ ಬಾಯಿ ಮುಚ್ಚಿಸಲು ವೈಜ್ಞಾನಿಕ ಉಪಕರಣಗಳ ಉಪಯೋಗ ವಾಗುತ್ತದೆ. ವಿಜ್ಞಾನದ ಮಹತ್ವ ಇಷ್ಟೇ ಇದೆ !
ವೈದ್ಯರಿಗೆ ಹೊಸದಾದ ಚಿಕಿತ್ಸಾ ಪದ್ದತಿ, ವಕೀಲರಿಗೆ ಹೊಸ ಕಾನೂನುಗಳು, ಗಣಕಯಂತ್ರದವರಿಗೆ ಅದರಲ್ಲಿನ ಹೊಸ ಗಣಕೀಯ ತಂತ್ರಾಂಶ ಇತ್ಯಾದಿಗಳ ಅಭ್ಯಾಸ ಮಾಡಬೇಕಾಗುತ್ತದೆ. ಅದೇ ರೀತಿ ಈ ವಿಷಯಗಳಿಂದಾಗಿ ಚಿರಂತನ ಆನಂದ ಸಿಗುವುದಿಲ್ಲ.
`ಬುದ್ಧಿಪ್ರಾಮಾಣ್ಯವಾದಿಗಳಿಂದಾಗಿ ಹಿಂದೂಗಳಿಗೆ ದೇವರ ಮೇಲಿನ ಶ್ರದ್ಧೆ ನಾಶವಾಯಿತು. ಸರ್ವಧರ್ಮ ಸಮಭಾವಿಗಳಿಂದಾಗಿ ಹಿಂದೂಗಳಿಗೆ ಹಿಂದೂ ಧರ್ಮದ ಅದ್ವಿತೀಯತೆ ತಿಳಿಯಲಿಲ್ಲ ಮತ್ತು ಸಾಮ್ಯವಾದಿಗಳಿಂದಾಗಿ ಹಿಂದೂಗಳಿಗೆ ದೇವರ ಮೇಲಿರುವ ವಿಶ್ವಾಸ ಇಲ್ಲವಾಯಿತು. ಇವೆಲ್ಲವುಗಳಿಂದಾಗಿ ದೇವರ ಕೃಪೆ ಆಗದ ಕಾರಣ ಹಿಂದೂಗಳ ಮತ್ತು ಭಾರತದ ಸ್ಥಿತಿ ದಯನೀಯವಾಗಿದೆ.
’ಮತಾಂಧರಿಗೆ ಅವರ ಧರ್ಮದಿಂದ ಶಕ್ತಿ ದೊರೆಯುತ್ತದೆ; ಅದಕ್ಕಾಗಿ ಅವರು ಧರ್ಮಕ್ಕಾಗಿ ಆತ್ಮಸಮರ್ಪಣೆ ಸಹ ಮಾಡುತ್ತಾರೆ. ಆದರೆ ಹಿಂದೂಗಳು ಧರ್ಮವನ್ನು ಮರೆತಿದ್ದಾರೆ, ಅದಕ್ಕಾಗಿ ಅವರಿಗೆ ಕಡ್ಡಿಯಷ್ಟೂ ಸಹ ಬೆಲೆ (ಶಕ್ತಿ) ಇಲ್ಲ !’
‘ಎಲ್ಲಿ ಜಾತಿ, ಧರ್ಮ, ಪ್ರಾಂತ್ಯ, ಇತ್ಯಾದಿ ನೋಡುವ ಸಂಕುಚಿತ ವೃತ್ತಿಯ ರಾಜ ಕೀಯ ಪಕ್ಷಗಳ ನಾಯಕರು ಮತ್ತು ಎಲ್ಲಿ ’ವಿಶ್ವವೇ ನನ್ನ ಮನೆ !’ ಎನ್ನುವ ಸಂತ ಜ್ಞಾನೇಶ್ವರರು !’
‘ವಿಜ್ಞಾನದ ಒಂದು ಲಾಭವೇನೆಂದರೆ ವಿಜ್ಞಾನದಿಂದಲೇ ವಿಜ್ಞಾನದ ವಿಶ್ಲೇಷಣೆ ಸುಳ್ಳು ಮಾಡಬಹುದು ಮತ್ತು ಇದರಿಂದ ಬುದ್ಧಿಪ್ರಮಾಣವಾದಿಗಳ ಬಾಯಿ ಮುಚ್ಚಿಸ ಬಹುದು !
ಜಗತ್ತಿನಲ್ಲಿ ಭಾರತದ ಮಹಾನತೆಗೆ ಕಾರಣ ಕೇವಲ ಭಾರತದ ಅಧ್ಯಾತ್ಮಶಾಸ್ತ್ರವೇ ಆಗಿದೆ. ಆದರೆ ಅದನ್ನೇ ಸುಳ್ಳು ಎಂದು ಹೇಳುವುದು ಬುದ್ಧಿಪ್ರಾಮಾಣ್ಯವಾದಿಗಳ ದೇಶದ್ರೋಹವೇ ಅಲ್ಲವೇ ?