ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಇವರ ತೇಜಸ್ವಿ ವಿಚಾರ
‘ವಿಜ್ಞಾನವು ಹಲವು ವರ್ಷಗಳ ಕಾಲ, ಯಾವುದೇ ಒಂದು ಸಂಗತಿಗೆ ಬುದ್ಧಿಯಿಂದ ಸ್ಥೂಲದಲ್ಲಿನ ಕಾರಣವನ್ನು ಹುಡುಕುತ್ತದೆ; ಏಕೆಂದರೆ, ಕಾರಣ ತಿಳಿಯದಿದ್ದರೆ, ವಿಜ್ಞಾನಕ್ಕೆ ಪರಿಹಾರ ತಿಳಿಯುವುದಿಲ್ಲ.
‘ವಿಜ್ಞಾನವು ಹಲವು ವರ್ಷಗಳ ಕಾಲ, ಯಾವುದೇ ಒಂದು ಸಂಗತಿಗೆ ಬುದ್ಧಿಯಿಂದ ಸ್ಥೂಲದಲ್ಲಿನ ಕಾರಣವನ್ನು ಹುಡುಕುತ್ತದೆ; ಏಕೆಂದರೆ, ಕಾರಣ ತಿಳಿಯದಿದ್ದರೆ, ವಿಜ್ಞಾನಕ್ಕೆ ಪರಿಹಾರ ತಿಳಿಯುವುದಿಲ್ಲ.
‘ಸಾವಿರಾರು ವರ್ಷಗಳಿಂದ ಭಾರತದ ಹಿಂದೂಗಳು ಈಶ್ವರಪ್ರಾಪ್ತಿಯ ದಿಶೆಯಲ್ಲಿ ಮಾರ್ಗಕ್ರಮಣ ಮಾಡಿದ್ದಾರೆ. ಇತರ ದೇಶಗಳಂತೆ ಪೃಥ್ವಿಯಲ್ಲಿ ತಮ್ಮ ಸಾಮ್ರಾಜ್ಯವನ್ನು ಸ್ಥಾಪಿಸಲು ಪ್ರಯತ್ನಿಸಿಲ್ಲ; ಏಕೆಂದರೆ ಅವರಿಗೆ ಅದರ ನಿರರ್ಥಕತೆಯು ತಿಳಿದಿತ್ತು.’ ಪಾಶ್ಚಿಮಾತ್ಯ ಸಂಸ್ಕೃತಿ ಸ್ವೀಕರಿಸಿ ವಿನಾಶದ ಪ್ರಪಾತಕ್ಕೆ ಬೀಳುತ್ತಿರುವ ಸಮಾಜ !
ಹಿಂದೂ ರಾಷ್ಟ್ರದಲ್ಲಿ ಪ್ರತಿಯೊಂದು ಶಾಲೆ ಮತ್ತು ಮಹಾವಿದ್ಯಾಲಯಗಳಲ್ಲಿ ‘ಆಯುರ್ವೇದ’ ಈ ವಿಷಯವನ್ನು ಬಾಲ್ಯದಿಂದಲೇ ಕಲಿಸಲಾಗುವುದು. ಆದ್ದರಿಂದ ನಾಗರಿಕರಲ್ಲಿ ಬಾಲ್ಯದಿಂದಲೂ ಆರೋಗ್ಯದ ಕುರಿತಾದ ಮಾಹಿತಿ ತಿಳಿಯುವುದು ಮತ್ತು ಅವರು ರೋಗರುಜಿನೆಗಳಿಂದ ದೂರ ಉಳಿಯುವರು.’
‘ದೇವಸ್ಥಾನಗಳು ಭಕ್ತರ ಬಳಿಯೇ ಇರಬೇಕು, ಆಗಲೇ ಭಗವಂತನ ಸೇವೆ ಭಾವಪೂರ್ಣವಾಗಿ ಆಗುವುದು. ಸರಕಾರೀಕರಣದಿಂದ, ದೇವಸ್ಥಾನಗಳಲ್ಲಿ ಭಗವಂತನ ಸೇವೆ ಭಾವಪೂರ್ಣವಾಗಿ ಆಗುವುದಿಲ್ಲ ಮತ್ತು ಸರಕಾರದಲ್ಲಿ ನಡೆಯುವಂತಹ ಭ್ರಷ್ಟಾಚಾರ ದೇವಸ್ಥಾನಗಳಲ್ಲಿಯೂ ನಡೆಯುತ್ತದೆ
‘ಪ್ರತಿಯೊಂದು ವಿಷಯಕ್ಕೆ ವಿಶಿಷ್ಟ ದೇವತೆಗಳ ಅಧಿಷ್ಠಾನವಿರುತ್ತದೆ, ಉದಾ. ವಿದ್ಯಾಭ್ಯಾಸಕ್ಕೆ ಗಣಪತಿ ಮತ್ತು ಸರಸ್ವತಿ, ಧನಕ್ಕಾಗಿ ಶ್ರೀಲಕ್ಷ್ಮೀ, ಆರೋಗ್ಯಕ್ಕಾಗಿ ಧನ್ವಂತರಿ. ಆ ವಿಷಯದ ಸಂದರ್ಭದಲ್ಲಿ ಕೃತಿ ಮಾಡುವಾಗ ಮೊದಲಿಗೆ ಆ ವಿಷಯದ ಅಧಿಷ್ಠಾತ್ರೀ ದೇವತೆಗೆ ಪ್ರಾರ್ಥನೆ ಮಾಡಿದರೆ, ಆ ದೇವತೆಯ ತತ್ತ್ವ ಕಾರ್ಯನಿರತವಾಗಿ ಆ ಕೃತಿ ವೇಗವಾಗಿ ಮತ್ತು ಪರಿಪೂರ್ಣವಾಗಲು ಸಹಾಯವಾಗುತ್ತದೆ.
‘ಈಶ್ವರನಲ್ಲಿ ಸ್ವಭಾವದೋಷ ಮತ್ತು ಅಹಂ ಇರುವುದಿಲ್ಲ. ಅವನಲ್ಲಿ ಏಕರೂಪವಾಗಬೇಕಾದರೆ ನಾವೂ ಸಹ ಅವುಗಳನ್ನು ನಿರ್ಮೂಲನೆ ಮಾಡುವುದು ಅವಶ್ಯಕವಾಗಿದೆ.’
‘ಪುನಃ ಜನ್ಮ ಬೇಡ’ ಅಥವಾ ‘ಭಕ್ತಿ ಮಾಡಲು ಅನೇಕ ಜನ್ಮಗಳು ಸಿಗಲಿ’, ಎಂದೆನಿಸುವುದು ಇವೆರಡೂ ಸ್ವೇಚ್ಛೆಯಾಗಿವೆ. ‘ಎಲ್ಲವೂ ಈಶ್ವರನ ಇಚ್ಛೆಯಂತೆಯೇ ಆಗಲಿ’ ಎಂದೆನಿಸುವುದು ಮುಂದಿನ ಹಂತವಾಗಿದೆ.
ರ್ವಸಾಮಾನ್ಯ ಸಾಧಕರಿಗೆ ಅವನ ಇಷ್ಟವಾದ ವಿಷಯದ ಬಗ್ಗೆ ಜ್ಞಾನವನ್ನು ಪಡೆಯಲು ಅನೇಕ ಗ್ರಂಥಗಳನ್ನು ಓದಬೇಕಾಗುತ್ತದೆ. ಈ ಜ್ಞಾನ ಒಂದೆಡೆ ಅಭ್ಯಾಸಕ್ಕಾಗಿ ದೊರೆಯುವಂತಹ ಸೌಲಭ್ಯ ಎಲ್ಲಿಯೂ ಇಲ್ಲ.’