|
ಮುಂಬಯಿ – ಛತ್ರಪತಿ ಶಿವಾಜಿ ಮಹಾರಾಜರ ಪಟ್ಟಾಭಿಷೇಕವನ್ನು ಕಾಲಿನ ಹೆಬ್ಬೆರಳಿನಿಂದ ಮಾಡಲಾಗಿತ್ತು, ಎಂದು ಸಮಾಜವಾದಿ ಪಕ್ಷದ ಅಧ್ಯಕ್ಷರಾದ ಸಂಸದ ಅಖಿಲೇಶ ಯಾದವ್ ಹೇಳಿಕೆ ನೀಡಿದ್ದರು. ಈ ಕುರಿತು ಮಹಾರಾಷ್ಟ್ರದ ಮಾರುಕಟ್ಟೆ ಸಚಿವ ಜಯಕುಮಾರ್ ರಾವಲ್ ಇವರು, ‘ಸಮಾಜವಾದಿ ಪಕ್ಷದ ನಾಯಕ ಅಖಿಲೇಶ ಯಾದವ್ ಕ್ಷಮೆ ಯಾಚಿಸಬೇಕು. ತಪ್ಪು ಮಾಹಿತಿ ನೀಡಿದ ಪ್ರಕರಣದಲ್ಲಿ ಅವರ ವಿರುದ್ಧ ಪ್ರಕರಣ ದಾಖಲಿಸಿ ಜೈಲಿಗೆ ಕಳುಹಿಸಬೇಕು’ ಎಂದು ಒತ್ತಾಯಿಸಿದ್ದಾರೆ. ಸಮಾರಂಭವೊಂದರಲ್ಲಿ ಅವರು ಮಾತನಾಡುತ್ತಿದ್ದರು.
ರಾವಲ್ ಅವರು, “ಸಮಾಜವಾದಿ ಪಕ್ಷದ ನಾಯಕರು ಇತಿಹಾಸವನ್ನು ತಿರುಚುತ್ತಿದ್ದಾರೆ. ರಾಜಕೀಯದಲ್ಲಿ ಸೋಲು ಗೆಲುವುಗಳು ಸಹಜ. ಆದರೆ, ಇದರರ್ಥ ನಮ್ಮ ಮಹಾಪುರುಷರ ಬಗ್ಗೆ ತಪ್ಪು ಹೇಳಿಕೆಗಳನ್ನು ನೀಡುತ್ತೇವೆ ಎಂದಲ್ಲ. ದೇಶದ ಕೋಟಿಗಟ್ಟಲೆ ಜನರ ಭಾವನೆಗಳಿಗೆ ಧಕ್ಕೆ ತರುವಂತಹ ರಾಜಕೀಯ ಲಾಭಕ್ಕಾಗಿ ಇಂತಹ ಹೇಳಿಕೆಗಳನ್ನು ನೀಡುತ್ತಿರುವುದು ದುಃಖಕರ. ಇತಿಹಾಸವನ್ನು ತಿರುಚುವುದನ್ನು ಒಪ್ಪಿಕೊಳ್ಳಲಾಗುವುದಿಲ್ಲ. ಭಾಜಪ ಛತ್ರಪತಿ ಶಿವಾಜಿ ಮಹಾರಾಜರನ್ನು ನಂಬುತ್ತದೆ ಮತ್ತು ಗೌರವಿಸುತ್ತದೆ” ಎಂದು ತಿಳಿಸಿದರು.
"Chhatrapati Shivaji Maharaj’s Coronation Was Done with the big toe of the foot!" – SP Chief Akhilesh Yadav
A Shocking Statement by Samajwadi Party President Akhilesh Yadav!
"Akhilesh Yadav Should Be Jailed!" – Jaykumar Rawal, Minister for Protocol of Maharashtra
What else can… pic.twitter.com/HAFcOwrgFy
— Sanatan Prabhat (@SanatanPrabhat) March 23, 2025
ಸಂಪಾದಕೀಯ ನಿಲುವು
|