ನಾಮಜಪ ಮುಂತಾದ ಉಪಾಯಗಳನ್ನು ಗಾಂಭೀರ್ಯತೆಯಿಂದ ಮತ್ತು ಉತ್ತಮ ಗುಣಮಟ್ಟದೊಂದಿಗೆ ಮಾಡಿರಿ !

ಇಂತಹ ಭೀಕರ ಆಪತ್ಕಾಲದಲ್ಲಿ ಪರಾತ್ಪರ ಗುರು ಡಾಕ್ಟರರು ಸಾಧಕರ ತೊಂದರೆಗಳು ಸಹನೀಯವಾಗಲು ಸಾಧಕರಿಗೆ ಸೇವೆಗಳಿಗಿಂತ ನಾಮಜಪಾದಿ ಉಪಾಯಗಳಿಗೆ ಪ್ರಾಧಾನ್ಯತೆಯನ್ನು ನೀಡಲು ಹೇಳಿ, ಆ ಮೂಲಕ ಸಾಧಕರಿಗೆ ಚೈತನ್ಯವನ್ನು ಗ್ರಹಣ ಮಾಡುವ ಅಮೂಲ್ಯ ಅವಕಾಶವನ್ನು ನೀಡಿದ್ದಾರೆ.

ಕುಮಾರಿ ಪೂಜೆ

ನವರಾತ್ರಿಯಲ್ಲಿ ಒಂಭತ್ತು ದಿನ ಪ್ರತಿಯೊಂದು ದಿನ ಒಬ್ಬಳಿಗೆ ಅಥವಾ ಮೊದಲ ದಿನ ಒಬ್ಬಳಿಗೆ, ಎರಡನೇ ದಿನ ಇಬ್ಬರಿಗೆ, ಒಂಭತ್ತನೇ ದಿನ ಒಂಭತ್ತು ಕುಮಾರಿಯರಿಗೆ, ಹೀಗೆ ಏರಿಕೆ ಕ್ರಮದಲ್ಲಿ ಭೋಜನವನ್ನು ನೀಡಬೇಕೆಂಬ ವಿಧಾನವಿದೆ. ಎರಡರಿಂದ ಹತ್ತು ವರ್ಷಗಳ ವಯಸ್ಸಿನ ಕುಮಾರಿಯರನ್ನು ಭೋಜನಕ್ಕೆ ಆಮಂತ್ರಿಸುತ್ತಾರೆ. ಪ್ರತಿಯೊಂದು ವರ್ಣದವರೂ ತಮ್ಮ ತಮ್ಮ ವರ್ಣದ ಕುಮಾರಿಯರನ್ನು ಭೋಜನಕ್ಕೆ ಆಮಂತ್ರಿಸಬೇಕಾಗಿರುತ್ತದೆ.

ಪ್ರಾಣಿಗಳ ಬಗ್ಗೆ ನಾವಿನ್ಯಪೂರ್ಣ ಆಧ್ಯಾತ್ಮಿಕ ಸಂಶೋಧನೆಯನ್ನು ಮಾಡುವ ಮಹರ್ಷಿ ಆಧ್ಯಾತ್ಮ ವಿಶ್ವವಿದ್ಯಾಲಯ

ಜಿಗಣೆಯು ದೇವತೆಗಳ ಸಾತ್ತ್ವಿಕ ಚಿತ್ರಗಳಿಗೆ ನೀಡಿದ ಪ್ರತಿಕ್ರಿಯೆ ಮತ್ತು ಅದರ ಮೇಲಾಗುವ ಪರಿಣಾಮವನ್ನು ಅಭ್ಯಾಸಕ್ಕಾಗಿ ಗೋವಾದ ರಾಮನಾಥಿಯಲ್ಲಿನ ಸನಾತನದ ಆಶ್ರಮದಲ್ಲಿ ‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದ’ ವತಿಯಿಂದ ‘ಯುನಿವರ್ಸಲ್ ಔರಾ ಸ್ಕ್ಯಾನರ್ (ಯು.ಎ.ಎಸ್.)’ ಈ ಉಪಕರಣದ ಮೂಲಕ ಒಂದು ಪ್ರಯೋಗವನ್ನು ಮಾಡಲಾಯಿತು.

ಆಪತ್ಕಾಲದಲ್ಲಿ ಉಪ್ಪು-ಸಾಸಿವೆಯ ಅಭಾವ ಉಂಟಾದಲ್ಲಿ ದೃಷ್ಟಿಯನ್ನು ತೆಗೆಯುವ ಪದ್ಧತಿ

ದೃಷ್ಟಿ ತೆಗೆಯುವ ೨ ನಿಮಿಷಗಳ ಕೃತಿಯಿಂದ ಇಷ್ಟು ಒಳ್ಳೆಯ ಪರಿಣಾಮವಾಗಿತ್ತು. ಪ್ರವಾಸದಲ್ಲಿರುವಾಗ ಯಾರಿಗಾದರೂ ತೊಂದರೆಯಾಗುತ್ತಿದ್ದರೆ ಅಲ್ಲಿ ಉಪ್ಪು-ಸಾಸಿವೆ ಸಿಗುವುದಿಲ್ಲ. ಆಗ ಈ ಪದ್ಧತಿಯಿಂದ ದೃಷ್ಟಿಯನ್ನು ತೆಗೆಯಬಹುದು. ಅಲ್ಲದೇ ಆಪತ್ಕಾಲದಲ್ಲಿ ಇವುಗಳ ಕೊರತೆ ಇದ್ದಾಗ ದೃಷ್ಟಿಯನ್ನು ತೆಗೆಯುವ ಈ ಪದ್ಧತಿಯನ್ನು ಉಪಯೋಗಿಸಬಹುದು.

ಕೆಟ್ಟ ಶಕ್ತಿಗಳು ಹಲ್ಲೆ ಮಾಡಬಹುದಾದ ಪ್ರತಿಯೊಂದು ಅವಕಾಶವನ್ನು ತಪ್ಪದೇ ಬಳಸಿಕೊಳ್ಳುತ್ತವೆ ಮತ್ತು ತಮ್ಮ ಶಕ್ತಿಯನ್ನು ಅನಾವಶ್ಯಕ ವ್ಯಯಿಸುವುದಿಲ್ಲ, ಎಂಬುದು ಗಮನಕ್ಕೆ ಬರುವುದು

ಯಾವ ಅತ್ತರನ್ನು ಪೂಜೆಗಾಗಿ ಉಪಯೋಗಿಸಬೇಕಾಗಿತ್ತೋ, ಕೆಟ್ಟ ಶಕ್ತಿಗಳು ಅದರ ಮೇಲೆ ಆಕ್ರಮಣ ಮಾಡಿ ಅದರಲ್ಲಿ ನಕಾರಾತ್ಮ ಶಕ್ತಿ(ಊರ್ಜೆ)ಯನ್ನು ಪ್ರಕ್ಷೇಪಿಸಿದ್ದವು.  ಇದರಿಂದ ‘ಕೆಟ್ಟ ಶಕ್ತಿಗಳು ಆಕ್ರಮಣ ಮಾಡಬಹುದಾದ ಪ್ರತಿಯೊಂದು ಅವಕಾಶವನ್ನು ತಪ್ಪದೇ ಬಳಸಿಕೊಳ್ಳುತ್ತವೆ ಎಂಬುದು ಅರಿವಾಯಿತು.

ಎಲ್ಲ ಸಾಮಾಜಿಕ ಮತ್ತು ಆಧ್ಯಾತ್ಮಿಕ ಕಾರ್ಯಕ್ರಮಗಳ ಸಮಯದಲ್ಲಿ ಸಾತ್ತ್ವಿಕ ಉಡುಪುಗಳನ್ನು ಧರಿಸಿರಿ ! ಹಿಂದೂಗಳ ಉಡುಗೆ-ತೊಡುಗೆಗಳನ್ನು ಅವಶ್ಯ ಧರಿಸಿರಿ ಮತ್ತು ಭಜನೆ ಮುಂತಾದವುಗಳನ್ನು ಹಾಡುವಾಗ ಸಾತ್ತ್ವಿಕ ವಾದ್ಯಗಳನ್ನು ನುಡಿಸಿರಿ !

‘ಹಿಂದೂ ಸಂಸ್ಕೃತಿಯನ್ನು ರಕ್ಷಿಸುವ ಜವಾಬ್ದಾರಿಯು ನಮ್ಮದೇ ಆಗಿದೆ. ಹಾಗೆಯೇ ನಾವು ಸಮಾಜದೆದುರು ಆದರ್ಶವನ್ನಿಟ್ಟರೆ, ಸಮಾಜವು ಅದನ್ನು ಅನುಸರಿಸಬಹುದು. ಉಡುಗೆ-ತೊಡುಗೆಗಳಿಂದಾಗಿ ನಮ್ಮಲ್ಲಿ ಅಂತಹ ಸ್ಪಂದನಗಳು ಮತ್ತು ಭಾವ-ಭಾವನೆಗಳು ಮೂಡುತ್ತದೆ. ಸತ್ತ್ವಗುಣಿ ವೇಷಭೂಷಣಗಳಿಂದ ಜೀವಕ್ಕೆ ಸ್ಥಿರತೆ ಮತ್ತು ಶಾಂತಿಯು ಲಭಿಸುತ್ತದೆ.

ಶ್ರೀಚಿತ್‌ಶಕ್ತಿ ಸೌ. ಅಂಜಲಿ ಗಾಡಗೀಳ ಇವರ ಅಮೃತವಚನಗಳು

‘ಸಮಾಜದಲ್ಲಿ ಕೇವಲ ಸ್ಥೂಲ ದೇಹವನ್ನು ರೂಪಿಸಿದರೆ ಸನಾತನ ಸಂಸ್ಥೆಯಲ್ಲಿ ಅದರೊಂದಿಗೆ ಸಾಧಕರ ಮನಸ್ಸು ಮತ್ತು ಬುದ್ಧಿ ಇವುಗಳನ್ನೂ ರೂಪಿಸಲಾಗುತ್ತದೆ. ಸಾಧಕರು ಸ್ವಭಾವದೋಷ ಮತ್ತು ಅಹಂ ಇವುಗಳ ನಿರ್ಮೂಲನೆ ಪ್ರಕ್ರಿಯೆಯನ್ನು ಮಾಡುವುದರಿಂದ ಅವರ ಮನೋಲಯ ಮತ್ತು ಬುದ್ಧಿಲಯವಾಗಿ ಅವರ ಚಿತ್ತದಲ್ಲಿನ ಜನ್ಮಜನ್ಮಾಂತರದ ಮಾಯೆಯ ಸಂಸ್ಕಾರಗಳು ನಾಶವಾಗುತ್ತವೆ.

‘ಇಂಡಕ್ಶನ್ (ವಿದ್ಯುತ್) ಒಲೆ, ‘ಗ್ಯಾಸ್ ಒಲೆ ಮತ್ತು ಮಣ್ಣಿನ ಒಲೆಯ ಮೇಲೆ ಅಡುಗೆಯನ್ನು ಮಾಡುವಾಗ ಅರಿವಾದ ಅಂಶಗಳು

‘ಇಂಡಕ್ಶನ್ ಒಲೆಯು ಆಯಸ್ಕಾಂತದ ಪರಿವರ್ತನೆಯ ಮೂಲಕ ಆಹಾರವನ್ನು ಬಿಸಿ ಮಾಡುತ್ತದೆ. ಆದ್ದರಿಂದ ಆಹಾರವು ಬೇಗನೆ ಬೇಯುತ್ತದೆ. ಆಯಸ್ಕಾಂತದ ಪರಿರ್ತನೆಯ ಮೂಲಕ ಆಹಾರವನ್ನು ಬೇಯಿಸುವಾಗ ಪಾತ್ರೆಯ ವಿಶಿಷ್ಟ ಭಾಗವಷ್ಟೇ ಬಿಸಿಯಾಗುತ್ತದೆ ಮತ್ತು ಅದರ ಮೇಲೆಯೇ ಎಲ್ಲ ಆಹಾರವು ಬೇಯುತ್ತದೆ.

ಆಶ್ರಮದಲ್ಲಿರುವ ಜಿಗಣೆಗೆ ಸಾತ್ತ್ವಿಕತೆಯ ಅರಿವಿದೆ ಎಂದು ಪರೀಕ್ಷಣೆಯಿಂದ ದೃಢವಾದುದು ಮತ್ತು ಅದು ಮೃತವಾದ ಬಳಿಕ ಸಪ್ತರ್ಷಿಗಳು ಅದನ್ನು ಆಶ್ರಮದ ಪರಿಸರದಲ್ಲಿರುವ ಯಾವುದಾದರೊಂದು ಒಳ್ಳೆಯ ಮರದ ಕೆಳಗೆ ಮಣ್ಣಿನಲ್ಲಿ ಹೂಳಲು ಹೇಳುವುದು, ಅಲ್ಲದೇ ‘ಅದು ಆಶ್ರಮದಲ್ಲಿರುವುದು ಶುಭಶಕುನವಾಗಿದೆ, ಎಂದೂ ಹೇಳುವುದು

‘ಆಶ್ರಮದಲ್ಲಿ ಆಯುರ್ವೇದೀಯ ಉಪಚಾರಕ್ಕಾಗಿ ಒಂದು ಜಿಗಣೆಯಿತ್ತು. ಜಿಗಣೆಯು ತ್ವಚೆಗೆ ಅಂಟಿಕೊಳ್ಳುತ್ತದೆ ಮತ್ತು ಶರೀರದಲ್ಲಿರುವ ಅಶುದ್ಧ ರಕ್ತವನ್ನು ಹೀರಿ ಕೊಳ್ಳುತ್ತದೆ. ಇದರಿಂದ ಮನುಷ್ಯನ ಮೇಲೆ ಉಪಚಾರವಾಗುತ್ತದೆ.  ಆರೋಗ್ಯವನ್ನು ನೀಡುವ ಧನ್ವಂತರಿ ದೇವರ ಕೈಯಲ್ಲಿ ಜಿಗಣೆಯಿರುತ್ತದೆ. ಇದರಿಂದ ‘ಜಿಗಣೆಯು ದೈವೀ ಜೀವವಾಗಿದೆ, ಎನ್ನುವುದು ಗಮನಕ್ಕೆ ಬರುತ್ತದೆ.

ಸಾಪ್ತಾಹಿಕ ಶಾಸ್ತ್ರಾರ್ಥ

‘ಶಿವ’ನು ಪ್ರದೋಷ ವ್ರತದ ದೇವತೆಯಾಗಿದ್ದಾನೆ. ಹಿಂದಿನ ಜನ್ಮದಲ್ಲಿ ಮಾಡಿದ ಪಾಪಗಳಿಂದ ತಗಲಿದ ವಿವಿಧ ಪ್ರಕಾರದ ದೋಷಗಳ ನಿವಾರಣೆಗಾಗಿ, ಹಾಗೆಯೇ ಭಗವಾನ ಶಿವನನ್ನು ಪ್ರಸನ್ನಗೊಳಿಸಲು ಸಾಯಂಕಾಲದ ಸಮಯದಲ್ಲಿ ಈ ವ್ರತವನ್ನು ಮಾಡುತ್ತಾರೆ. ಪ್ರದೋಷ ವ್ರತವನ್ನು ಮಾಡುವುದರಿಂದ ಆಧಿ ಭೌತಿಕ, ಆಧಿದೈವಿಕ ಮತ್ತು ಆಧ್ಯಾತ್ಮಿಕ ತೊಂದರೆಗಳ ನಿವಾರಣೆಯಾಗಿ ಆನಂದ ಪ್ರಾಪ್ತವಾಗುತ್ತದೆ.