ಛತ್ತೀಸ್ಗಢದಲ್ಲಿ 7 ನಕ್ಸಲೀಯರ ಹತ್ಯೆ
ಬಿಜಾಪುರ ಜಿಲ್ಲೆಯ ರಾಷ್ಟ್ರೀಯ ಉದ್ಯಾನವನದ ಪ್ರದೇಶದಲ್ಲಿ ನಕ್ಸಲೀಯರು ಮತ್ತು ಭದ್ರತಾ ಪಡೆಗಳ ನಡುವೆ ನಡೆದ ಚಕಮಕಿಯಲ್ಲಿ 7 ನಕ್ಸಲೀಯರು ಹತರಾಗಿದ್ದಾರೆ. ಮೃತಪಟ್ಟವರಲ್ಲಿ ನಕ್ಸಲೀಯರ ಪ್ರಮುಖ ನಾಯಕರು ಸಹ ಸೇರಿದ್ದಾರೆ.
ಬಿಜಾಪುರ ಜಿಲ್ಲೆಯ ರಾಷ್ಟ್ರೀಯ ಉದ್ಯಾನವನದ ಪ್ರದೇಶದಲ್ಲಿ ನಕ್ಸಲೀಯರು ಮತ್ತು ಭದ್ರತಾ ಪಡೆಗಳ ನಡುವೆ ನಡೆದ ಚಕಮಕಿಯಲ್ಲಿ 7 ನಕ್ಸಲೀಯರು ಹತರಾಗಿದ್ದಾರೆ. ಮೃತಪಟ್ಟವರಲ್ಲಿ ನಕ್ಸಲೀಯರ ಪ್ರಮುಖ ನಾಯಕರು ಸಹ ಸೇರಿದ್ದಾರೆ.
ಕೆಲವು ಅಧಿಕಾರಿಗಳು ಮತ್ತು ಪೊಲೀಸ್ ಸಿಬ್ಬಂದಿಗಳಿಗೆ ಗಾಯಗಳಾಗಿವೆ ಎಂದು ವರದಿಯಾಗಿದೆ.
1967 ರಲ್ಲಿ ನಕ್ಸಲವಾದ ಉದಯಿಸಿತು. ನಂತರ, ನಕ್ಸಲ್ ಪೀಡಿತ ಪ್ರದೇಶವನ್ನು ನಕ್ಸಲ್ ಮುಕ್ತಗೊಳಿಸಲು 58 ವರ್ಷಗಳು ಬೇಕಾದವು. ಇದು ಹಿಂದಿನ ಹಲವು ಸರಕಾರಗಳ ವೈಫಲ್ಯ ಎಂದೇ ಹೇಳಬೇಕಾಗುವುದು. ಇಷ್ಟು ವರ್ಷಗಳ ನಂತರ ಬಸ್ತರ್ ನಕ್ಸಲ್ ಮುಕ್ತವಾಗಿದ್ದು, ಇದು ಕೂಡ ಚಿಕ್ಕ ಸಾಧನೆಯೇನಲ್ಲ!
ಛತ್ತೀಸಗಢದಲ್ಲಿ ಚಕಮಕಿ: 27 ನಕ್ಸಲರ ಹತ್ಯೆ. ಇಲ್ಲಿನ ಅಬುಝಮಾಡ ಅರಣ್ಯದಲ್ಲಿ ಮೇ 21ರಂದು ಬೆಳಿಗ್ಗೆ ನಡೆದ ಕಾರ್ಯಾಚರಣೆಯಲ್ಲಿ ಭದ್ರತಾ ಪಡೆಗಳು 27 ನಕ್ಸಲರನ್ನು ಹತ್ಯೆ ಮಾಡಿದೆ. ಹತ್ಯೆಗೀಡಾದವರ ಪೈಕಿ 20 ಮಂದಿಯ ಶವಗಳು ಮತ್ತು ಶಸ್ತ್ರಾಸ್ತ್ರಗಳು ಪತ್ತೆಯಾಗಿವೆ.
ಕಾಡಿನಲ್ಲಿ ಅಡಗಿ ಸಮಾಂತರ ಸರಕಾರ ನಡೆಸುತ್ತಿರುವ ನಕ್ಸಲೀಯರನ್ನು ನಾಶಪಡಿಸುವುದರೊಂದಿಗೆ, ನಗರ ನಕ್ಸಲೀಯರನ್ನು ಸಹ ಪತ್ತೆ ಮಾಡಿ ಅವರನ್ನು ಕೊಲ್ಲಲು ಸರಕಾರವು ಕಾರ್ಯತಂತ್ರವನ್ನು ರೂಪಿಸುವುದು ಅವಶ್ಯಕ!
ಮೇ 6 ರ ರಾತ್ರಿ ಇಲ್ಲಿನ ಕರೇಗುಟ್ಟದಲ್ಲಿ ನಡೆದ ಎನ್ಕೌಂಟರ್ನಲ್ಲಿ ಭದ್ರತಾ ಪಡೆಗಳು 18 ಕ್ಕೂ ಹೆಚ್ಚು ನಕ್ಸಲರನ್ನು ಹತ್ಯೆ ಮಾಡಿದ್ದಾರೆ. ಈ ಸಂಖ್ಯೆ ಇನ್ನಷ್ಟು ಹೆಚ್ಚಾಗಬಹುದು ಎಂದು ಹೇಳಲಾಗುತ್ತಿದೆ.
ಈ ವರ್ಷ ಏಪ್ರಿಲ್ 15 ರ ವರೆಗೆ 161 ನಕ್ಸಲರು ಸಾವನ್ನಪ್ಪಿದ್ದಾರೆ, ಹಾಗೂ ಅಂದಾಜು 600 ಜನರು ಶರಣಾಗಿದ್ದಾರೆ. 2024 ರಲ್ಲಿ 296 ಹಾಗೂ ವರ್ಷ 2023 ರಲ್ಲಿ 56 ನಕ್ಸಲರು ಸಾವನ್ನಪ್ಪಿದ್ದರು.
ಏಪ್ರಿಲ್ 21 ರ ಮುಂಜಾನೆ ಭದ್ರತಾ ಪಡೆಗಳೊಂದಿಗೆ ನಡೆದ ಎನ್ಕೌಂಟರ್ ನಲ್ಲಿ 8 ನಕ್ಸಲರು ಸಾವನ್ನಪ್ಪಿದ್ದಾರೆ. ಜಿಲ್ಲೆಯ ಲುಗು ಮತ್ತು ಜುಮ್ರಾ ಗುಡ್ಡಗಾಡುಗಳ ನಡುವಿನ ಕಾಡಿನಲ್ಲಿ ಈ ಚಕಮಕಿ ನಡೆದಿದೆ. ಘಟನಾ ಸ್ಥಳದಿಂದ ಹಲವಾರು ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ.
ಛತ್ತೀಸ್ಗಢ-ಮಹಾರಾಷ್ಟ್ರ ಗಡಿ ಭಾಗದಲ್ಲಿ ಮಾವೋವಾದಿ ನಕ್ಸಲವಾದಿಗಳು ಮತ್ತು ಪೊಲೀಸರ ನಡುವೆ ದೊಡ್ಡ ಘರ್ಷಣೆ ಸಂಭವಿಸಿದೆ. ಎರಡೂ ಕಡೆಯವರು ಪರಸ್ಪರ ಭಾರೀ ಪ್ರಮಾಣದಲ್ಲಿ ಗುಂಡಿನ ದಾಳಿ ನಡೆಸಿದರು. ಈ ಸಮಯದಲ್ಲಿ 3 ಮಾವೋವಾದಿ ನಕ್ಸಲವಾದಿಗಳು ಹತರಾಗಿದ್ದಾರೆ.
ಭದ್ರತಾ ಪಡೆಗಳು ಮತ್ತು ನಕ್ಸಲರ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ 16 ನಕ್ಸಲರು ಹತರಾಗಿದ್ದಾರೆ. ಹಾಗೂ 2 ಸೈನಿಕರು ಗಾಯಗೊಂಡಿದ್ದಾರೆ. ಹತರಾದ ನಕ್ಸಲರಿಂದ ದೊಡ್ಡ ಪ್ರಮಾಣದ ಶಸ್ತ್ರಾಸ್ತ್ರಗಳ ಸಂಗ್ರಹವನ್ನು ವಶಪಡಿಸಿಕೊಳ್ಳಲಾಗಿದೆ.