Naxal Encounter : ಛತ್ತೀಸ್‌ಗಢದಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ 15 ನಕ್ಸಲೀಯರ ಹತ್ಯೆ

1 ಕೋಟಿ ರೂಪಾಯಿ ಬಹುಮಾನ ಇರುವ ನಕ್ಸಲೀಯನೂ ಹತ್ಯೆ

1 ಕೋಟಿ ರೂಪಾಯಿ ಬಹುಮಾನ ಇರುವ ಜೈರಾಮ್ ಅಲಿಯಾಸ್ ಚಲಪತಿ

ಗರಿಯಾಬಂದ್ (ಛತ್ತೀಸ್‌ಗಢ) – ಕುಲ್ಹಾಡಿ ಘಾಟ್‌ನ ಭಾಲೂ ದಿಗ್ಗಿ ಅರಣ್ಯದಲ್ಲಿ ನಡೆದ ಎನ್ ಕೌಂಟರ್ ನಲ್ಲಿ ಭದ್ರತಾ ಪಡೆಗಳು 15 ನಕ್ಸಲೀಯರನ್ನು ಹತ್ಯೆ ಮಾಡಿದೆ. ಇದರಲ್ಲಿ 1 ಕೋಟಿ ರೂಪಾಯಿ ಬಹುಮಾನ ಇರುವ ಜೈರಾಮ್ ಅಲಿಯಾಸ್ ಚಲಪತಿ ಕೂಡ ಸಾವನ್ನಪ್ಪಿದ್ದಾನೆ. ಹಾಗೆಯೇ ಓರ್ವ ಮಹಿಳಾ ನಕ್ಸಲೈಟ್ ಕೂಡ ಹತ್ಯೆಯಾಗಿದ್ದಾಳೆ. ಜನವರಿ 19ರ ರಾತ್ರಿಯಿಂದ ಇಲ್ಲಿ ಆಗಾಗ ಗುಂಡಿನ ಚಕಮಕಿ ನಡೆಯುತ್ತಿದೆ. ಅಂದಾಜು 60 ನಕ್ಸಲೀಯರನ್ನು 1 ಸಾವಿರ ಸೈನಿಕರು ಸುತ್ತುವರೆದಿದ್ದರು. ಈ ಎನ್‌ಕೌಂಟರ್‌ನಲ್ಲಿ ಓರ್ವ ಯೋಧ ಗಾಯಗೊಂಡಿದ್ದಾರೆ.