ಕಳೆದ ಜನ್ಮದಲ್ಲಿ ಯಾರು ಸಾಧನೆಯನ್ನು ಮಾಡಿರುವರೋ, ಅವರಿಗೆ ಮಾತ್ರ ಈ ಜನ್ಮದಲ್ಲಿ ಸಾಧನೆ ಮಾಡಬೇಕೆನಿಸುತ್ತದೆ !

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ಸಾಧನೆಯ ಬಗ್ಗೆ ಮಾಡಿದ ಅಮೂಲ್ಯ ಮಾರ್ಗದರ್ಶನ !

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ

ಶ್ರೀ. ಹರ್ಷದ ಖಾನವಿಲಕರ : ಪ್ರಸಾರದಲ್ಲಿರುವಾಗ ಮುಂದಿನಂತೆ ಅನುಭವ ಬರುತ್ತದೆ, ‘ತಾಯಿ-ತಂದೆ ಸೇವೆಯನ್ನು ಮಾಡುತ್ತಿರುತ್ತಾರೆ; ಆದರೆ ಅವರು ಮಕ್ಕಳನ್ನು ಅಷ್ಟು ಸಾಧನೆಗಾಗಿ ಸಿದ್ಧಪಡಿಸುವುದಿಲ್ಲ. ಅವರು ಸಂಸ್ಕಾರ ಮಾಡುವಲ್ಲಿ ಅಥವಾ ಸಂಸ್ಕಾರಗಳಿಂತ ಸಾಧನೆಯ ಮಹತ್ವವನ್ನು ಹೇಳುವುದರಲ್ಲಿ ಕಡಿಮೆ ಬಿದ್ದಿರುತ್ತಾರೆ. ಮಕ್ಕಳು ಸಾಧನೆ ಮಾಡಬೇಕು ಎಂಬ ವಿಚಾರ ಪಾಲಕರಲ್ಲಿ ಸ್ವಲ್ಪ ಕಡಿಮೆ ಕಾಣಿಸುತ್ತದೆ. ಆ ಬಗ್ಗೆ ಅನಿಸುವುದೇನೆಂದರೆ, ‘ಮಕ್ಕಳ ಇಚ್ಛೆ ಇರುತ್ತದೆ; ಆದರೆ ತಾಯಿ-ತಂದೆಯರ ಒಲವು ‘ಮಕ್ಕಳು ಕಲಿಯಬೇಕು, ಅವರು ನೌಕರಿ ಮಾಡಬೇಕು’, ಎಂಬ ಕಡೆಗಿರುತ್ತದೆ.’ ಇಂತಹ ಸಮಯದಲ್ಲಿ ಏನು ಮಾಡಬೇಕು ?

ಶ್ರೀ. ಹರ್ಷದ ಖಾನವಿಲಕರ

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ : ‘ವ್ಯಕ್ತಿಗಳೆಷ್ಟೋ ಅಷ್ಟು ಪ್ರಕೃತಿಗಳು, ಅಷ್ಟೇ ಸಾಧನಾ ಮಾರ್ಗಗಳು’ ಎಂಬುದನ್ನು ಕೇಳಿದ್ದಿಯಲ್ಲ ? ಆದುದರಿಂದ ಪ್ರತಿಯೊಂದು ಕುಟುಂಬದ ಪ್ರತಿಯೊಬ್ಬ ಸದಸ್ಯನು ಸಾಧನೆಗೆ ಬರುತ್ತಾನೆ ಎಂದೇನಿಲ್ಲ; ಆದುದರಿಂದ ನಿಮ್ಮ ಕುಟುಂಬದ ಬಗ್ಗೆ ಶ್ಲಾಘನೆ ಮಾಡಬೇಕೆನಿಸುತ್ತದೆ, ಎಲ್ಲರೂ ಒಟ್ಟಾಗಿ ಬಂದಿದ್ದೀರಿ. ಹಿಂದಿನ ಜನ್ಮದಲ್ಲಿ ಯಾರು ಸಾಧನೆಯನ್ನು ಮಾಡಿರುವರೋ, ಅವರಿಗೆ ಮಾತ್ರ ಈ ಜನ್ಮದಲ್ಲಿ ಅದನ್ನು ಮಾಡಬೇಕೆನಿಸುತ್ತದೆ; ಆದುದರಿಂದ ಉಳಿದವರ ವಿಚಾರವನ್ನು ನಾವು ಬಿಟ್ಟುಬಿಡಬೇಕು.